spot_img

ದಿನ ವಿಶೇಷ – ಮಹಾವೀರ ಜಯಂತಿ

Date:

spot_img

ಮಹಾವೀರ ಜಯಂತಿ

ಜೈನ ಧರ್ಮದ 24 ತೀರ್ಥಂಕರರಲ್ಲಿ ಕೊನೆಯವರಾಗಿ ಗುರುತಿಸಿಕೊಂಡವರು ಮಹಾವೀರರು. ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ಮಹಾವೀರನ ಜನನವಾಯಿತು. ಕ್ರಿಸ್ತಪೂರ್ವ 599 ಅಥವಾ 615 ಎನ್ನುವ ವಾದವಿದೆ. ಈ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಜೈನ ಧರ್ಮದಲ್ಲಿ ತೀರ್ಥಂಕರರಿಗೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲಿ ಋಷಭನಾಥನಿಂದ ಮೊದಲ್ಗೊಂಡು 22 ತೀರ್ಥಂಕರರು ಪೌರಾಣಿಕ ಪುರುಷರಾಗಿದ್ದಾರೆ. . ಕೊನೆಯ ಇಬ್ಬರು ಪಾರ್ಶ್ವನಾಥ ಹಾಗೂ ಮಹಾವೀರರು ಇತಿಹಾಸ ಪುರುಷರಾಗಿದ್ದಾರೆ. ಭಾರತದಲ್ಲಿ ಋಷಿಮುನಿಗಳಿಗೆ ಮಾತ್ರ ಸೀಮಿತವಾಗಿದ್ದ ಸಸ್ಯಹಾರವನ್ನು ಸಾರ್ವತ್ರಿಕವಾಗಿಸಿದ್ದು ಜೈನರು.

ಆದ್ದರಿಂದ ಸನಾತನದ ಪುರಾಣಕ್ಕೂ ಜೈನರ ತೀರ್ಥಂಕರರಿಗೂ ಬಹಳಷ್ಟು ಸಾಮ್ಯತೆಗಳು ಕಾಣುತ್ತದೆ. ಅದರಲ್ಲೂ ಭಾಗವತದಲ್ಲಿ ಭಗವಂತನ ಅವತಾರವಾದ ಋಷಭ ದೇವನೇ ವೃಷಭನಾಥ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ. ಆದ್ದರಿಂದ ಸಾವಿರಾರು ವರ್ಷಗಳಿಂದಲೂ ಕೂಡ ಭಾರತದಲ್ಲಿ ಜೈನರು ಹಾಗೂ ಹಿಂದೂಗಳು ಸಮಾನಮಸ್ಕಾರಾಗಿ ಬೆರೆತು ಸಾಗುತ್ತಿದ್ದಾರೆ. ನಮಗೆ ಸಾಕ್ಷಿಯಾಗಿ ಧರ್ಮಸ್ಥಳ ಒಂದೇ ಸಾಕಾಗುತ್ತದೆ. ಜೈನರ ಆಳ್ವಿಕೆಯಲ್ಲಿದ್ದರೂ ಕೂಡ ಹಿಂದು ಧರ್ಮದ ರೀತಿಯಲ್ಲಿ ನಡೆಯುವ ಪೂಜೆ ಪುರಸ್ಕಾರಗಳಿಗೆ ಧರ್ಮಸ್ಥಳಕ್ಕೆ ಸಾಟಿಯಾಗಬಲ್ಲ ಕ್ಷೇತ್ರವಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್ ಮ್ಯಾಪ್​ನ ತಪ್ಪು ನಿರ್ದೇಶನ: ಮುಂಬೈನ ಕಂದಕಕ್ಕೆ ಜಾರಿದ ಕಾರು

ತಂತ್ರಜ್ಞಾನದ ಮುಂದುವರಿದ ಬೆಳವಣಿಗೆಗಳು ಜೀವನವನ್ನು ಸರಳಗೊಳಿಸಿರುವ ಜೊತೆಗೆ, ಕೆಲವು ಅನಿರೀಕ್ಷಿತ ಅಪಾಯಗಳಿಗೂ ಕಾರಣವಾಗುತ್ತಿವೆ.

ಜಾರ್ಖಂಡ್ ನ ಗುಮ್ಲಾ ಕಾಡಿನಲ್ಲಿ ಮೂವರು PLFI ನಕ್ಸಲರ ಎನ್‌ಕೌಂಟರ್, ಶಸ್ತ್ರಾಸ್ತ್ರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ PLFI ಸಂಘಟನೆಯ ಮೂವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ: ಉಷಾ ಅಂಚನ್‌ಗೆ ಅಧ್ಯಕ್ಷ ಪಟ್ಟ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ನೆಲ್ಯಾಡಿಯ ಹಿರಿಯ ಕಾಂಗ್ರೆಸ್ ನಾಯಕಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಪ್ರಸ್ತುತ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನ ಖ್ಯಾತ ಯೂಟ್ಯೂಬರ್ “ಸಾಲು ಕಿಂಗ್” ಬಂಧನ

ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ