spot_img

ದಿನ ವಿಶೇಷ – ಅಂತರಾಷ್ಟ್ರೀಯ ಕುಟುಂಬಗಳ ದಿನ

Date:

ಅಂತರಾಷ್ಟ್ರೀಯ ಕುಟುಂಬಗಳ ದಿನ

1993ರಲ್ಲಿ ವಿಶ್ವಸಂಸ್ಥೆಯು ಕುಟುಂಬಗಳ ಮಹತ್ವವನ್ನು ತಿಳಿಸಬೇಕು ಹಾಗೂ ಜನರಿಗೆ ಈ ಬಗ್ಗೆ ಜಾಗೃತಿಯನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಈ ದಿನವನ್ನು ಮೀಸಲಿಟ್ಟಿತು. ಅಂದಿನಿಂದ ಇಂದಿನ ತನಕ ಪ್ರತಿ ವರ್ಷ ಕುಟುಂಬಗಳ ಉದ್ದೇಶದಲ್ಲಿ ಒಂದು ಸಂದೇಶವನ್ನು ಜಗತ್ತಿಗೆ ಕೊಡುತ್ತಿದೆ. ಇಡೀ ಪ್ರಪಂಚದಲ್ಲಿ ಕುಟುಂಬಗಳ ವಿಚಾರದಲ್ಲಿ ಭಾರತದಷ್ಟು ದೃಢವಾಗಿ ಹಾಗೂ ಒಂದು ಚೌಕಟ್ಟಿನ ಒಳಗೆ ಕಂಡುಬರುವಂತಹ ವೈಶಿಷ್ಟ್ಯತೆ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದಲ್ಲಿ ನಿನ್ನೆ ಮೊನ್ನೆಯ ತನಕವೂ ಕೂಡ ಅವಿಭಕ್ತ ಕುಟುಂಬ ಜಾರಿಯಲ್ಲಿತ್ತು. ಇವತ್ತಿಗೂ ಉತ್ತರ ಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಗುಜರಾತಿನಲ್ಲಿ ಇವತ್ತಿಗೂ ಅವಿಭಕ್ತ ಕುಟುಂಬಗಳು ಕಾಣಸಿಗುತ್ತದೆ. ಒಂದೇ ಮನೆಯಲ್ಲಿ ಕನಿಷ್ಠ 25 ಮಂದಿ ವಾಸವಿರುತ್ತಾರೆ.

ನಮ್ಮಲ್ಲಿಯೂ ಅಲ್ಲೊಂದು ಇಲ್ಲೊಂದು ಐದಾರು ಮಂದಿ ಇರುವಂತಹ ಮನೆಗಳು ಬೇಕಾದಷ್ಟು ಇವೆ. ಅಷ್ಟೇ ಅಲ್ಲದೆ ಸಂಬಂಧಗಳ ಬೆಲೆ ಹಾಗೂ ಮಹತ್ವ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಇವತ್ತಿಗೂ ಸುಮಾರು 20ರಿಂದ 30 ಸಂಬಂಧಗಳ ಹೆಸರುಗಳು ಸಿಗುತ್ತದೆ. ಆದರೆ ಈಗ ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗಿ ಕೇವಲ ಎರಡು ಮೂರು ಸಂಬಂಧಗಳಿಗೆ ಸೀಮಿತವಾಗಿ ಬದುಕುತ್ತಿದ್ದೇವೆ. ಹಾಗಾಗಬಾರದು ಸಂಬಂಧಗಳನ್ನು ಉಳಿಸುವಲ್ಲಿ ನಾವು ಮಹತ್ವವನ್ನು ಕಂಡುಕೊಳ್ಳಬೇಕು. ಕುಟುಂಬಗಳು ಇದ್ದಷ್ಟು ಭದ್ರತೆ ಹೆಚ್ಚು ಇರುತ್ತದೆ ಭದ್ರತೆ ಕಡಿಮೆಯಾಗುತ್ತದೆ

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇಂದಿರಾನಗರದಲ್ಲಿ ಶ್ರೀ ಸ್ವಾಮಿ ಕೊರಗಜ್ಜನ ದ್ವಿತೀಯ ವರ್ಷದ ಕೋಲ ಸೇವೆ

ಹೆಬ್ರಿ ಇಂದಿರಾನಗರದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮೇ 20, 2025, ಮಂಗಳವಾರ ರಾತ್ರಿ 9 ಗಂಟೆಗೆ ಶ್ರೀ ಸ್ವಾಮಿ ಕೊರಗಜ್ಜನ ದ್ವಿತೀಯ ವರ್ಷದ ಕೋಲ ಸೇವೆ ಜರಗಲಿದೆ.

ಎಲೆಕೋಸು ಸೇವನೆಯಿಂದ ದೇಹದ ಆರೋಗ್ಯಕ್ಕೆ 11 ಅದ್ಭುತ ಪ್ರಯೋಜನಗಳು!

ನಿತ್ಯ ಆಹಾರದಲ್ಲಿ ಸೇರಿಸಿದರೆ ದೇಹಕ್ಕೆ ಅಸಂಖ್ಯಾತ ಲಾಭಗಳನ್ನು ತಂದುಕೊಡಬಲ್ಲ ಎಲೆಕೋಸಿನ ಆರೋಗ್ಯ ಪ್ರಯೋಜನಗಳು

ಭದ್ರತೆ ದೃಷ್ಟಿಯಿಂದ ಮೀನುಗಾರರಿಗೆ ಗುಂಪುಗಳಲ್ಲಿ ಮೀನುಗಾರಿಕೆ ನಡೆಸಲು ಸೂಚನೆ ನೀಡಿದ ಮೀನುಗಾರಿಕಾ ಇಲಾಖೆ

ಕರಾವಳಿ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ, ಸಮುದ್ರದಲ್ಲಿ ಮೀನುಗಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಸೂಚನೆ ನೀಡಿದ್ದಾರೆ.

ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ ! ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ

ಭಾರತ - ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಮಂಗಳೂರಿನ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ನಡೆದ ಬಾಂಬ್ ಸ್ಫೋಟದಂತಹ ಘಟನೆ ಕ್ಷಣಾಂತರದಲ್ಲಿ ಜನರಲ್ಲಿ ಆತಂಕ ಉಂಟುಮಾಡಿದೆ.