spot_img

ದಿನ ವಿಶೇಷ – ಹನುಮ ಜಯಂತಿ

Date:

ಚೈತ್ರ ಮಾಸದ ಚಿತ್ರ ಪೂರ್ಣಿಮೆಯಂದು ಹನುಮನ ದಿವ್ಯ ಅವತಾರ ಅಂಜನೆಯ ಗರ್ಭಾಂಬುಧಿಯಲ್ಲಿ ಆಯಿತು. ರಾಮಾಯಣದಲ್ಲಿ ಶ್ರೀರಾಮ ಸೇವಾಧುರಂಧರನಾಗಿ ಗುರುತಿಸಿಕೊಂಡವರಲ್ಲಿ ಅಗ್ರಗಣ್ಯನಿದ್ದಾನೆ. ಸ್ವಾಮಿ ನಿಷ್ಠೆಗೆ ಹನುಮನಿಗೆ ಸಇಲ್ರಿಯಾದ ಉದಾಹರಣೆ ಬೇರೆ ಇಲ್ಲ. ಎಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಬುದ್ಧಿಶಕ್ತಿ, ಚೆನ್ನಾಗಿ ಅಂಗಸೌಷ್ಠವಗಳಿಂದ ಕೂಡಿದ ದೇಹಬಲ, ಹಿಡಿದ ಕಾರ್ಯದಲ್ಲಿ ಪಡೆದ ಯಶಸ್ಸು, ಕೆಚ್ಚೆದೆಯ ಧೈರ್ಯ, ಯಾವುದಕ್ಕೂ ಕೆಂಗೆಡದ ನಿರ್ಭೀತ ಸ್ಥಿತಿ, ಸುದೃಢವಾದ ಆರೋಗ್ಯ, ಉದಾಸೀನವಿಲ್ಲದ ಚುರುಕುತನ, ಸ್ಫುಟವಾದ ಮಾತುಗಳು ಈ ಎಂಟುಗಳು ಹನುಮಂತನಲ್ಲಿ ವಿಫಲವಾಗಿ ಇದ್ದವು.

ಸಾಗರೋಲಂಘನೆಯನ್ನು ಮಾಡಿ ಸೀತಾನ್ವೇಷಣೆ ಹಾಗೂ ಲಂಕಾದಹನದ ಪ್ರಕರಣದಲ್ಲಿ ಎಲ್ಲಾ ಗುಣವನ್ನು ಕಾಣುತ್ತೇವೆ. ಹನುಮಂತನನ್ನು ಆರಾಧಿಸುವುದರಿಂದ ನಮಗೂ ಕೂಡ ಈ ಗುಣಗಳು ಖಂಡಿತ ಸಿದ್ಧಿಸುತ್ತವೆ. ಆದ್ದರಿಂದ ಹನುಮನ ಆರಾಧನೆಯನ್ನು ಮಾಡಿ ಈ ಗುಣಗಳನ್ನು ಪಡೆದು ಮತ್ತಷ್ಟು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

'ಮುದ್ದು ಸೊಸೆ' ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ.

ಅಪರೂಪದ ನಾಯಿ ಖರೀದಿಗೆ 50 ಕೋಟಿ? ಬೆಂಗಳೂರು ಶ್ವಾನ ಪ್ರೇಮಿಯ ಮನೆಗೆ ಇಡಿ ದಾಳಿ!

ಬೆಂಗಳೂರು ಶ್ವಾನ ಪ್ರೇಮಿ ಎಸ್. ಸತೀಶ್ ತನ್ನಿಂದ 50 ಕೋಟಿ ರೂ. ಮೊತ್ತದಲ್ಲಿ ನಾಯಿ ಖರೀದನೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಹೇಳಿಕೆ ಇದೀಗ ಇಡಿ (ಅನ್ವೇಷಣಾ ನಿರ್ದೇಶನಾಲಯ) ತನಿಖೆಗೆ ಕಾರಣವಾಗಿದೆ.

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ.

ಕಾರ್ಕಳದಲ್ಲಿ ಮಕ್ಕಳ ರಂಗಶಿಬಿರ ಆರಂಭ: ಪ್ರತಿಭೆಗಳ ಅನಾವರಣಕ್ಕೆ ವೇದಿಕೆ – ಶಾಸಕರಿಂದ ಪ್ರೋತ್ಸಾಹ

ಬುಧವಾರ ಕಾರ್ಕಳದ ಯಕ್ಷ ರಂಗಾಯಣ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.