spot_img

ದಿನ ವಿಶೇಷ – ಹನುಮ ಜಯಂತಿ

Date:

spot_img

ಚೈತ್ರ ಮಾಸದ ಚಿತ್ರ ಪೂರ್ಣಿಮೆಯಂದು ಹನುಮನ ದಿವ್ಯ ಅವತಾರ ಅಂಜನೆಯ ಗರ್ಭಾಂಬುಧಿಯಲ್ಲಿ ಆಯಿತು. ರಾಮಾಯಣದಲ್ಲಿ ಶ್ರೀರಾಮ ಸೇವಾಧುರಂಧರನಾಗಿ ಗುರುತಿಸಿಕೊಂಡವರಲ್ಲಿ ಅಗ್ರಗಣ್ಯನಿದ್ದಾನೆ. ಸ್ವಾಮಿ ನಿಷ್ಠೆಗೆ ಹನುಮನಿಗೆ ಸಇಲ್ರಿಯಾದ ಉದಾಹರಣೆ ಬೇರೆ ಇಲ್ಲ. ಎಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಬುದ್ಧಿಶಕ್ತಿ, ಚೆನ್ನಾಗಿ ಅಂಗಸೌಷ್ಠವಗಳಿಂದ ಕೂಡಿದ ದೇಹಬಲ, ಹಿಡಿದ ಕಾರ್ಯದಲ್ಲಿ ಪಡೆದ ಯಶಸ್ಸು, ಕೆಚ್ಚೆದೆಯ ಧೈರ್ಯ, ಯಾವುದಕ್ಕೂ ಕೆಂಗೆಡದ ನಿರ್ಭೀತ ಸ್ಥಿತಿ, ಸುದೃಢವಾದ ಆರೋಗ್ಯ, ಉದಾಸೀನವಿಲ್ಲದ ಚುರುಕುತನ, ಸ್ಫುಟವಾದ ಮಾತುಗಳು ಈ ಎಂಟುಗಳು ಹನುಮಂತನಲ್ಲಿ ವಿಫಲವಾಗಿ ಇದ್ದವು.

ಸಾಗರೋಲಂಘನೆಯನ್ನು ಮಾಡಿ ಸೀತಾನ್ವೇಷಣೆ ಹಾಗೂ ಲಂಕಾದಹನದ ಪ್ರಕರಣದಲ್ಲಿ ಎಲ್ಲಾ ಗುಣವನ್ನು ಕಾಣುತ್ತೇವೆ. ಹನುಮಂತನನ್ನು ಆರಾಧಿಸುವುದರಿಂದ ನಮಗೂ ಕೂಡ ಈ ಗುಣಗಳು ಖಂಡಿತ ಸಿದ್ಧಿಸುತ್ತವೆ. ಆದ್ದರಿಂದ ಹನುಮನ ಆರಾಧನೆಯನ್ನು ಮಾಡಿ ಈ ಗುಣಗಳನ್ನು ಪಡೆದು ಮತ್ತಷ್ಟು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್ ಮ್ಯಾಪ್​ನ ತಪ್ಪು ನಿರ್ದೇಶನ: ಮುಂಬೈನ ಕಂದಕಕ್ಕೆ ಜಾರಿದ ಕಾರು

ತಂತ್ರಜ್ಞಾನದ ಮುಂದುವರಿದ ಬೆಳವಣಿಗೆಗಳು ಜೀವನವನ್ನು ಸರಳಗೊಳಿಸಿರುವ ಜೊತೆಗೆ, ಕೆಲವು ಅನಿರೀಕ್ಷಿತ ಅಪಾಯಗಳಿಗೂ ಕಾರಣವಾಗುತ್ತಿವೆ.

ಜಾರ್ಖಂಡ್ ನ ಗುಮ್ಲಾ ಕಾಡಿನಲ್ಲಿ ಮೂವರು PLFI ನಕ್ಸಲರ ಎನ್‌ಕೌಂಟರ್, ಶಸ್ತ್ರಾಸ್ತ್ರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ PLFI ಸಂಘಟನೆಯ ಮೂವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ: ಉಷಾ ಅಂಚನ್‌ಗೆ ಅಧ್ಯಕ್ಷ ಪಟ್ಟ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ನೆಲ್ಯಾಡಿಯ ಹಿರಿಯ ಕಾಂಗ್ರೆಸ್ ನಾಯಕಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಪ್ರಸ್ತುತ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನ ಖ್ಯಾತ ಯೂಟ್ಯೂಬರ್ “ಸಾಲು ಕಿಂಗ್” ಬಂಧನ

ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ