
ಅಕಸ್ಮಾರ ಒಂದು ನರದ ತೊಂದರೆಯಿಂದ ಬರುವ ಮಾನಸಿಕ ರೋಗ. ಎಲ್ಲೆಂದರಲ್ಲಿ ಎಲ್ಲವೂ ಒಮ್ಮೆಗೆ ಸ್ತಬ್ಧವಾಗುವುದು ಈ ರೋಗದ ಮುಖ್ಯ ಲಕ್ಷಣ. ನಡೆಯುವಾಗ ಬೀಳುವುದು,ಈಜುವಾಗ ಮುಳುಗುವುದು, ಮಾತನಾಡುತ್ತಾ ಕೂಡಲೇ ಮೌನಕ್ಕೆ ಜಾರುವುದು ಹೀಗೆ ಹಲವು ಲಕ್ಷಗಳು ಈ ರೋಗಕ್ಕೆ ಇದೆ. ಮಕ್ಕಳಿಗೆ ಬಹಳವಾಗಿ ರೋಗಗಳು ಕಾಡುತ್ತದೆ. ಹಾಗೆಯೇ ವೃದ್ಧರಿಗೂ ಕೂಡ ಈ ಕಾಯಿಲೆಯ ಲಕ್ಷಣಗಳು ಬಹಳ ಕಂಡುಬರುತ್ತದೆ. ಪರಂಪರೆಯಿಂದಲೂ ಈ ರೋಗ ಹರಡುತ್ತದೆ.

ಮನಸ್ಸು ಹಾಗೂ ಯೋಚನೆಯನ್ನು ಬಹಳ ಜಾಗೃತೆಯಾಗಿ ಇಟ್ಟುಕೊಳ್ಳಬೇಕು ಈ ಮೂಲಕ ಈ ರೋಗ ಬಾರದಂತೆ ಜಾಗೃತೆವಹಿಸಿಕೊಳ್ಳಬೇಕು ಬಿಟ್ಟರೆ ಬೇರೆ ದಾರಿ ಇಲ್ಲ. ಈ ಹಿಂದೆ ಕಂಡಂತೆ ಏನಿದ್ದರೂ ಕೂಡ ಜನ್ಮಾಂತರ ಪಾಪ ಹಾಗೂ ಪರಂಪರೆಯಿಂದ ಬಂದ ಕರ್ಮಫಲ ನಮ್ಮ ರೋಗಕ್ಕೆ ಕಾರಣವಾಗುತ್ತದೆ ಅದನ್ನು ನಾವು ಅನುಭವಿಸಿಯೇ ತೀರಬೇಕಷ್ಟೇ. ಯಾಕೆ ನಮ್ಮ ತೀರಿ ಹೋದವರಿಗೆ ಗೌರವ ಕೊಡಬೇಕು ಎನ್ನುವ ಪ್ರಶ್ನೆಗೆ ಕೆಲವೊಮ್ಮೆ ಈ ರೋಗಗಳೆ ಉತ್ತರಿಸುತ್ತದೆ. ನಮ್ಮ ಜೀವನ ಆ ಪರಂಪರೆಗೆ ಅನುಗುಣವಾಗಿಯೇ ಸಾಗುವುದು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ