spot_img

ದಿನ ವಿಶೇಷ – ಮೇಷ ಸಂಕ್ರಾಂತಿ

Date:

ಮೇಷ ಸಂಕ್ರಾಂತಿ

ಸೂರ್ಯ ತನ್ನ ಪಥ ಬದಲಿಸುವ ಸಮಯ. ಇವತ್ತು ಈತ ಮೀನ ರಾಶಿಯಿಂದ ಮೇಷ ರಾಶಿಗೆ ಬರುತ್ತಾನೆ. ಸೌರಮಾನದ ಪ್ರಕಾರ ಅರ್ಥಾತ್ ಸೂರ್ಯನ ಸಂಚಾರದ ಪ್ರಕಾರ ಇವತ್ತಿಗೆ 12 ರಾಶಿಗಳನ್ನು ಕ್ರಮಿಸಿ ಬಂದ ಕಾರಣದಿಂದ ಇಂದಿಗೆ ಒಂದು ವರ್ಷ ಕಳೆಯಿತು. ಸೂರ್ಯನಿಗೆ ಮೇಷ ರಾಶಿ ಅತ್ಯಂತ ನೆಚ್ಚಿನ ರಾಶಿಯಾಗಿದೆ. ಇದರಲ್ಲೂ ಮೊದಲ 10 ಭಾಗದಲ್ಲಿ ಆತ ಪರಮೋಚ್ಚನಾಗಿದ್ದಾನೆ. ಸೂರ್ಯ ಮೇಷ ರಾಶಿಯಲ್ಲಿರುವಾಗ ಹುಟ್ಟಿದವ ಸದಾ ಸಂಚಾರ ಶೀಲನಾಗಿರುತ್ತಾನೆ ಹಾಗೂ ಚುರುಕು ಮತಿಯುಳ್ಳವನಾಗಿರುತ್ತಾನೆ.

ಅಷ್ಟೇ ಅಲ್ಲದೆ ಯೋಗ್ಯ ಸೇನಾನಿಯಾಗುವ ಸಾಧ್ಯತೆ ಕೂಡ ಇದೆ. ರವಿ ಆತ್ಮಕ್ಕೆ ಕಾರಕನಾದರೆ ಮೇಷ ರಾಶಿಯ ಕುಜ ದೇಹಕ್ಕೆ ಕಾರಕ ಇವರ ಅನುಕೂಲ ಪ್ರತಿಕೂಲಕ್ಕೆ ಸರಿಯಾಗಿ ಆತ ಇಚ್ಛಾಶಕ್ತಿಯ ಒಟ್ಟಿಗೆ ಕ್ರಿಯಾಶಕ್ತಿಯನ್ನು ರೂಪಿಸಿಕೊಳ್ಳುವ ಸಾಧ್ಯತೆ ಇದೆ. ಈ ರಾಶಿಯ ಸ್ವರೂಪ ಆಡಿನಂತೆ. ಅದಕ್ಕೆ ಇದಕ್ಕೆ ಮೇಷ ಎಂದು ಹೆಸರು. ಸಾತ್ವಿಕತೆ ಹಾಗೂ ಇಂಥ ಪರಿಸ್ಥಿತಿಯಲ್ಲೂ ಒಡ್ಡಿಕೊಳ್ಳುವ ಗುಣ ಈ ಪ್ರಾಣಿಗಿದೆ. ಇದರಲ್ಲಿ ಕೆಲವು ಆ ರಾಶಿಯವರಿಗೆ ಬರುವ ಸಾಧ್ಯತೆ ಕೂಡ ಇರುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದ 15+ ಜಿಲ್ಲೆಗಳಿಗೆ ಗುಡುಗು-ಮಿಂಚು ಸಹಿತ ಮಳೆ

ಕರ್ನಾಟಕದಲ್ಲಿ ಮಳೆಗಾಲದ ಸಂಭವವಿದೆ. ಜೂನ್ 11ರಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವ ಸಾಧ್ಯತೆ ಇದೆ

ಮಣಿಪುರದಲ್ಲಿ ನಾಯಕನ ಬಂಧನದಿಂದ ಪ್ರತಿಭಟನೆಗಳು ಉಗ್ರರೂಪ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮತ್ತು ಪ್ರತಿಭಟನೆಗಳು ತಲೆದೋರಿದ್ದು, ಸರ್ಕಾರವು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.

ಜೋಳದಿಂದ ಹಾಲಿನ ಪ್ಯಾಕ್! ಬಮೂಲ್ನ ಅದ್ಭುತ ತಂತ್ರಜ್ಞಾನ

ಪ್ಲಾಸ್ಟಿಕ್‌ ಮಾಲಿನ್ಯವನ್ನು ಕಡಿವಾಣ ಹಾಕುವ ದಿಶೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್‌) ಒಂದು ಹೊಸ ಹಂತಕ್ಕೆ ಪಾದಾರ್ಪಣೆ ಮಾಡಿದೆ

ಜೂನ್ 9ರಂದು ಮೋದಿ ಸರ್ಕಾರಕ್ಕೆ 11 ವರ್ಷ – ದೇಶಾದ್ಯಂತ ವಿಶೇಷ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರದಲ್ಲಿ 11 ವರ್ಷಗಳನ್ನು ಪೂರ್ಣಗೊಳಿಸಲಿದೆ