spot_img

ದಿನ ವಿಶೇಷ – ಅಕ್ಷಯ ತೃತೀಯ

Date:

ಅಕ್ಷಯ ತೃತೀಯ

ಹೆಸರೇ ಹೇಳುವ ಹಾಗೆ ನಾಶವಿಲ್ಲದ್ದು ಎನ್ನುವ ಕಾರಣದಿಂದ ಈ ದಿನಕ್ಕೆ ಅಕ್ಷಯ ಎನ್ನುವ ವಿಶೇಷತೆ ಗುರುತಿಸಲ್ಪಟ್ಟಿದೆ. ನಿತ್ಯವೂ ನಮ್ಮೊಂದಿಗಿರಬೇಕು ಎನ್ನುವ ಉದ್ದೇಶದಿಂದ ಈ ದಿವಸ ಮಹತ್ವಪೂರ್ಣವಾಗಿದೆ. ಆದ್ದರಿಂದ ಬಂಗಾರವನ್ನು ತೆಗೆದುಕೊಳ್ಳುವುದರಿಂದ ಹಿಡಿದು ಗ್ರಹಪ್ರವೇಶದ ತನಕ ಈ ದಿವಸಕ್ಕೆ ಬಹಳ ಪ್ರಾಶಸ್ತ್ಯವನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಅದೆಲ್ಲವೂ ನಮ್ಮಲ್ಲಿ ತಾಯಿಯಾಗಿರಬೇಕು ಎನ್ನುವ ಮನೋಭಾವವೇ ಇದರ ಹಿಂದಿರುವ ಉದ್ದೇಶ. ಅದೇನೇ ಇರಲಿ ನಮ್ಮೊಂದಿಗೆ ನಿತ್ಯವಾಗಿ ಇರಬೇಕಾದದ್ದು ಭಗವಂತ ಹಾಗು ಆತನ ಅನುಗ್ರಹ. ಆ ಉದ್ದೇಶದಿಂದ ಈ ದಿವಸ ನಾವು ವಿಶೇಷವಾಗಿ ಅವನನ್ನು ಆರಾಧಿಸಿದರೆ ಆತ ನಮ್ಮೊಂದಿಗೆ ಇರುವುದು ಮಾತ್ರವಲ್ಲ ನಮ್ಮನ್ನು ಅಕ್ಷಯವಾಗಿಸುತ್ತಾನೆ.

ವೈಶಾಖಸ್ಯ ಸಿತೇ ಪಕ್ಷೇ ತೃತೀಯಾಕ್ಷಯ ಸ0ಜ್ಞಿತಾ ಎನ್ನುವ ಸ್ಕಾಂದ ಪುರಾಣದ ವಚನದಂತೆ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿವಸ ಅಕ್ಷಯ ತೃತೀಯ ಎಂದು ಗುರುತಿಸಲ್ಪಟ್ಟಿದೆ. ಕೆಲವು ನಂಬಿಕೆಯ ಪ್ರಕಾರ ಈ ದಿವಸ ಪಾಂಡವರು ಅಕ್ಷಯ ಪಾತ್ರೆಯನ್ನು ಪಡೆದುಕೊಂಡರು ಎನ್ನುವ ಪೌರಾಣಿಕ ಹಿನ್ನೆಲೆ ಇದೆ. ಜೈನರಲ್ಲಿ ಬಹುತೇಕವಾಗಿ ಈ ದಿವಸ ಬಹಳಷ್ಟು ಮಹತ್ವಪೂರ್ಣವಾಗಿದೆ. ರಾಜ ಶ್ರೇಯನರು ಋಷಭನಾಥನಿಗೆ ಕಬ್ಬಿನ ರಸವನ್ನು ಕೊಟ್ಟರು ಆ ಮೂಲಕ ನಾಶವಿಲ್ಲದ ಗುರಿಯನ್ನು ಪಡೆದರು ಎನ್ನುವ ಹಿನ್ನೆಲೆ ಇದೆ. ಏನೇ ಇರಲಿ ಹಿರಣ್ಯ ರೂಪನಾದ ಭಗವಂತನ ಅನುಗ್ರಹಕ್ಕೆ ಈ ದಿವಸ ಕಾರಣವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚಿಕ್ಕೂ ಹಣ್ಣು: ಆರೋಗ್ಯ, ಬೆಳೆ ಮತ್ತು ಉಪಯೋಗಗಳ ಸಂಪೂರ್ಣ ಮಾಹಿತಿ

ಚಿಕ್ಕೂ (ಸಪೋಟಾ) ಹಣ್ಣು ಕೇವಲ ರುಚಿಕರವಾಗಿರುವುದಲ್ಲ, ಅದರ ಆರೋಗ್ಯ ಪ್ರಯೋಜನಗಳು ಅದನ್ನು ಒಂದು "ಸೂಪರ್ ಫ್ರೂಟ್" ಆಗಿ ಮಾಡಿವೆ.

ಅಮೇರಿಕಾದಲ್ಲಿ ಮೈಸೂರಿನ ಉದ್ಯಮಿಯೊಬ್ಬರು ಪತ್ನಿ ಮತ್ತು ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ

ಅಮೆರಿಕಾದ ನ್ಯೂ ಕ್ಯಾಸಲ್ ನಲ್ಲಿ ಮೈಸೂರಿನ ಉದ್ಯಮಿಯೊಬ್ಬರು ತನ್ನ ಪತ್ನಿ ಮತ್ತು ಹಿರಿಯ ಪುತ್ರನನ್ನು ಗುಂಡಿಕ್ಕಿ ಹತ್ಯೆಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಚಿತ್ರದುರ್ಗ SSLC ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಹಿರಂಗ: 10 ಶಿಕ್ಷಕರ ಅಮಾನತು, ಅಧಿಕಾರಿಗಳಿಗೆ ಶೋಕಾಸ್

ವಾಸವಿ ಪ್ರೌಢಶಾಲೆಯಲ್ಲಿ ನಡೆದ SSLC ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಗಂಭೀರ ಅಕ್ರಮ ಘಟನೆ ರಾಜ್ಯ ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲಿನ ನಂಬಿಕೆಗೆ ಆಘಾತ ನೀಡಿದೆ.

ಪಹಲ್ಗಾಮ್ ದಾಳಿ ವೇಳೆ ತಲ್ವಾರ್ ತೋರಿಸಿದ್ದರೆ ಕಥೆ ಬೇರೆಯಾಗುತ್ತಿತ್ತು,ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇಟ್ಟುಕೊಳ್ಳಿ : ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಹೊಸ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.