spot_img

ದಿನ ವಿಶೇಷ – ಅಕ್ಷಯ ತೃತೀಯ

Date:

spot_img
spot_img

ಅಕ್ಷಯ ತೃತೀಯ

ಹೆಸರೇ ಹೇಳುವ ಹಾಗೆ ನಾಶವಿಲ್ಲದ್ದು ಎನ್ನುವ ಕಾರಣದಿಂದ ಈ ದಿನಕ್ಕೆ ಅಕ್ಷಯ ಎನ್ನುವ ವಿಶೇಷತೆ ಗುರುತಿಸಲ್ಪಟ್ಟಿದೆ. ನಿತ್ಯವೂ ನಮ್ಮೊಂದಿಗಿರಬೇಕು ಎನ್ನುವ ಉದ್ದೇಶದಿಂದ ಈ ದಿವಸ ಮಹತ್ವಪೂರ್ಣವಾಗಿದೆ. ಆದ್ದರಿಂದ ಬಂಗಾರವನ್ನು ತೆಗೆದುಕೊಳ್ಳುವುದರಿಂದ ಹಿಡಿದು ಗ್ರಹಪ್ರವೇಶದ ತನಕ ಈ ದಿವಸಕ್ಕೆ ಬಹಳ ಪ್ರಾಶಸ್ತ್ಯವನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಅದೆಲ್ಲವೂ ನಮ್ಮಲ್ಲಿ ತಾಯಿಯಾಗಿರಬೇಕು ಎನ್ನುವ ಮನೋಭಾವವೇ ಇದರ ಹಿಂದಿರುವ ಉದ್ದೇಶ. ಅದೇನೇ ಇರಲಿ ನಮ್ಮೊಂದಿಗೆ ನಿತ್ಯವಾಗಿ ಇರಬೇಕಾದದ್ದು ಭಗವಂತ ಹಾಗು ಆತನ ಅನುಗ್ರಹ. ಆ ಉದ್ದೇಶದಿಂದ ಈ ದಿವಸ ನಾವು ವಿಶೇಷವಾಗಿ ಅವನನ್ನು ಆರಾಧಿಸಿದರೆ ಆತ ನಮ್ಮೊಂದಿಗೆ ಇರುವುದು ಮಾತ್ರವಲ್ಲ ನಮ್ಮನ್ನು ಅಕ್ಷಯವಾಗಿಸುತ್ತಾನೆ.

ವೈಶಾಖಸ್ಯ ಸಿತೇ ಪಕ್ಷೇ ತೃತೀಯಾಕ್ಷಯ ಸ0ಜ್ಞಿತಾ ಎನ್ನುವ ಸ್ಕಾಂದ ಪುರಾಣದ ವಚನದಂತೆ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿವಸ ಅಕ್ಷಯ ತೃತೀಯ ಎಂದು ಗುರುತಿಸಲ್ಪಟ್ಟಿದೆ. ಕೆಲವು ನಂಬಿಕೆಯ ಪ್ರಕಾರ ಈ ದಿವಸ ಪಾಂಡವರು ಅಕ್ಷಯ ಪಾತ್ರೆಯನ್ನು ಪಡೆದುಕೊಂಡರು ಎನ್ನುವ ಪೌರಾಣಿಕ ಹಿನ್ನೆಲೆ ಇದೆ. ಜೈನರಲ್ಲಿ ಬಹುತೇಕವಾಗಿ ಈ ದಿವಸ ಬಹಳಷ್ಟು ಮಹತ್ವಪೂರ್ಣವಾಗಿದೆ. ರಾಜ ಶ್ರೇಯನರು ಋಷಭನಾಥನಿಗೆ ಕಬ್ಬಿನ ರಸವನ್ನು ಕೊಟ್ಟರು ಆ ಮೂಲಕ ನಾಶವಿಲ್ಲದ ಗುರಿಯನ್ನು ಪಡೆದರು ಎನ್ನುವ ಹಿನ್ನೆಲೆ ಇದೆ. ಏನೇ ಇರಲಿ ಹಿರಣ್ಯ ರೂಪನಾದ ಭಗವಂತನ ಅನುಗ್ರಹಕ್ಕೆ ಈ ದಿವಸ ಕಾರಣವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ದಿನಕರ ಶೆಟ್ಟಿ ಪಳ್ಳಿ ಸಂತಾಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48) ಅವರ ಆತ್ಮಹತ್ಯೆಯ ದುರಂತ ಸಾವಿನ ವಿಷಯ ತಿಳಿದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ದಿನಕರ ಶೆಟ್ಟಿ, ಪಳ್ಳಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ವಿಷಯಕ್ಕೆ ಜಗಳ: ಮಗಳ ಎದುರೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಪತಿ

ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.

ಜಿಟೆಕ್ಸ್ ಗ್ಲೋಬಲ್ 2025: ವೀಸಾ ಉಲ್ಲಂಘನೆ ಪತ್ತೆಗೆ ಎ.ಐ. ಶಸ್ತ್ರ ಸಜ್ಜಿತ ಸ್ಮಾರ್ಟ್ ಕಾರುಗಳು – ದುಬೈಯಿಂದ ತಂತ್ರಜ್ಞಾನದ ಹೊಸ ದಾಪುಗಾಲು

ದುಬೈನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಜಿಟೆಕ್ಸ್ ಗ್ಲೋಬಲ್ 2025 ಮತ್ತೊಮ್ಮೆ ವಿಶ್ವದ ಗಮನವನ್ನು ಸೆಳೆದಿದೆ

ಭಾರತದಲ್ಲಿ AI ಹಬ್‌: $15 ಬಿಲಿಯನ್ ಹೂಡಿಕೆಗೆ ಮುಂದಾದ ಗೂಗಲ್; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸುಂದರ್ ಪಿಚೈ

ಟೆಕ್ ದೈತ್ಯ ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.