
ಗರಿಷ್ಠ ತಾಪಮಾನದಿಂದ ಜಜ್ಜಿ ಹೋಗುತ್ತಿರುವ ಈ ಬಿಸಿಲು ದಿನಗಳಲ್ಲಿ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗಿದೆ. ಈ ಹೊತ್ತಿನಲ್ಲಿ ನಿತ್ಯ ಆಹಾರದಲ್ಲಿ ಸಾಮಾನ್ಯವಾಗಿ ಬಳಸುವ ಈರುಳ್ಳಿ (Onion) ಬಹುಪರಿಣಾಮಕಾರಿ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ಆಯುರ್ವೇದದಲ್ಲಿ ಈರುಳ್ಳಿಗೆ ಶೀತಕಾರಕ (ತಂಪು ನೀಡುವ) ಗುಣವಿದೆ ಎಂದು ಹೇಳಲಾಗಿದ್ದು, ಬೇಸಿಗೆಯಲ್ಲಿ ಇದನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜತೆಗೆ ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆಯನ್ನು ತಡೆಯುವಲ್ಲಿ ಸಹ ಇದು ಪರಿಣಾಮಕಾರಿ.
ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು:
ಈರುಳ್ಳಿಯಲ್ಲಿರುವ ವಿಟಮಿನ್ ಸಿ, ಫ್ಲೇವನಾಯ್ಡ್ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತವೆ. ಇದಲ್ಲದೇ, ಇದರಲ್ಲಿ ಸಲ್ಪರ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತವೆ.
ಜೀರ್ಣಕ್ರಿಯೆ ಮತ್ತು ಚರ್ಮಕ್ಕೆ ಲಾಭ:
ನಾರಿನಂಶದಿಂದ ಜೀರ್ಣಕ್ರಿಯೆ ಸುಧಾರಣೆಗೊಳ್ಳುತ್ತದೆ. ಚರ್ಮ ಮತ್ತು ಕೂದಲಿಗೂ ಈರುಳ್ಳಿ ಆರೋಗ್ಯವರ್ಧಕವಾಗಿದೆ. ಈರುಳ್ಳಿಯ ನಿರಂತರ ಸೇವನೆಯು ಯುವಿ ಕಿರಣಗಳಿಂದ ತ್ವಚೆಗೆ ಉಂಟಾಗುವ ಹಾನಿಯನ್ನು ತಡೆಯಲು ಸಹ ಸಹಾಯವಾಗುತ್ತದೆ.
ಜಲಸಂಚಯಕ್ಕೆ ನೆರವು:
ಈರುಳ್ಳಿಯಲ್ಲಿ ನೀರಿನ ಪ್ರಮಾಣ ಹೆಚ್ಚು ಇರುವುದರಿಂದ ದೇಹಕ್ಕೆ ಅಗತ್ಯವಿರುವ ಜಲವಿಲ್ಲದ ಸ್ಥಿತಿಯನ್ನು ತಡೆಯಲು (re-hydration) ಸಹಾಯಮಾಡುತ್ತದೆ.

ನಿಮ್ಮ ಆಹಾರ ಪಟ್ಟಿಯಲ್ಲಿ ಈರುಳ್ಳಿಗೆ ಪ್ರಾಥಮ್ಯ ನೀಡಿ:
ಬಿಸಿಲಿನಲ್ಲಿ ದೇಹದ ತಾಪಮಾನ ನಿಯಂತ್ರಿಸಲು, ಉಸಿರಾಟದ ತೊಂದರೆ, ಜೀರ್ಣಕ್ರಿಯೆ ಸಮಸ್ಯೆ, ಬೇಸಿಗೆಯ ತಲೆನೋವು ಹಾಗೂ ಬೇಗೆಯಿಂದ ಉಂಟಾಗುವ ಶಕ್ತಿಹೀನತೆಗೆ ಈರುಳ್ಳಿಯಂತಹ ಸರಳ ಆಹಾರ ಪದಾರ್ಥಗಳಿಂದ ಪರಿಹಾರ ದೊರೆಯುವ ಶ್ರೇಷ್ಠ ವಿಧಾನವೆಂದರೆ ತಪ್ಪಾಗಲಾರದು.