4 ಗಂಟೆಗಳಲ್ಲಿ ಗಾಯ ಮರೆಸುವ ‘ಮ್ಯಾಜಿಕ್’ ಜೆಲ್: ವಿಜ್ಞಾನಿಗಳಿಂದ ಹೊಸ ಆವಿಷ್ಕಾರ

Date:

spot_img

ಗಾಯಗಳ ಗುಣಮುಖತೆಯಲ್ಲಿ ಕ್ರಾಂತಿಕಾರಿ ಆವಿಷ್ಕಾರವೆನಿಸಿದ ಹೊಸ ಹೈಡೋಜೆಲ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಆತ್ಮ ವಿಶ್ವವಿದ್ಯಾಲಯ ಮತ್ತು ಬೇರೂತ್ ವಿಶ್ವವಿದ್ಯಾಲಯದ ಸಂಶೋಧಕರು ಮಾನವ ಚರ್ಮದ ಗುಣಗಳನ್ನು ಅನುಕರಿಸುವ ಈ ಸ್ವಯಂ-ಗುಣಪಡಿಸುವ ಹೈಡೋಜೆಲ್ ಅನ್ನು ಸಿದ್ಧಪಡಿಸಿದ್ದಾರೆ.

ಈ ವಿಶೇಷ ಜೆಲ್ ಕೇವಲ ನಾಲ್ಕು ಗಂಟೆಗಳಲ್ಲಿ 90% ಗಾಯಗಳನ್ನು ವಾಸಿ ಮಾಡಬಹುದು ಹಾಗೂ 24 ಗಂಟೆಗಳಲ್ಲಿ ಸಂಪೂರ್ಣ ಗುಣಮುಖ ಮಾಡುವುದು ಇದರ ವೈಶಿಷ್ಟ್ಯವಾಗಿದೆ. ಗಾಯದ ಆರೈಕೆ, ಪುನರುತ್ಪಾದಕ ಔಷಧ ಮತ್ತು ಕೃತಕ ಚರ್ಮದ ತಂತ್ರಜ್ಞಾನಕ್ಕೆ ಇದು ಹೊಸ ಸಮಾಧಾನ ನೀಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಸಂಶೋಧನೆಯ ವಿವರಗಳು ಮಾರ್ಚ್ 7ರಂದು ಪ್ರತಿಷ್ಠಿತ ‘ನೇಚರ್ ಮೆಟೀರಿಯಲ್ಸ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಜೆಲ್‌ನಲ್ಲಿ ನ್ಯಾನೋಶೀಟ್‌ಗಳ ನಡುವೆ ದಟ್ಟವಾಗಿ ಸಿಕ್ಕಿಹಾಕಿಕೊಂಡ ಪಾಲಿಮರ್‌ಗಳ ಬಳಕೆಯಿಂದ ಮೃದು ಮತ್ತು ಮೆತ್ತಗೆ ಇರುವ ಹೈಡೋಜೆಲ್ ಹೆಚ್ಚು ಸಂಘಟಿತ ರಚನೆಯನ್ನು ರೂಪಿಸುತ್ತದೆ.

ಈ ನವೀನ ಹೈಡೋಜೆಲ್ ಸುಟ್ಟ ಗಾಯಗಳು, ಶಸ್ತ್ರಚಿಕಿತ್ಸಾ ಬಳಿಕದ ಗಾಯಗಳು ಹಾಗೂ ದೀರ್ಘಕಾಲದ ಗಾಯಗಳಿಂದ ಬಳಲುವವರ ಚೇತರಿಕೆಗೆ ಹೊಸ ಆಶಾಕಿರಣವಾಗಿದೆ ಎಂದು ಹೇಳಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಳ್ತಂಗಡಿ ಸುಮಂತ್ ಕೊಲೆ ಪ್ರಕರಣ: ಶಂಕಿತರ ಬ್ರೈನ್ ಮ್ಯಾಪಿಂಗ್ ತನಿಖೆ

ಬೆಳ್ತಂಗಡಿ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣದಲ್ಲಿ ಶಂಕಿತರ ಬ್ರೈನ್ ಮ್ಯಾಪಿಂಗ್‌ಗೆ ಸಿದ್ಧತೆ. ತನಿಖೆಗೆ ಹೊಸ ತಿರುವು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದೆಹಲಿಯಲ್ಲಿ 49 ದಿನಗಳ ಸಿಜೆಪಿ ಪ್ರತಿಭಟನೆ ಕೊನೆಗೂ ಅಂತ್ಯ

ಕೇಂದ್ರ ಸರ್ಕಾರದ ಆಶ್ವಾಸನೆ ಬಳಿಕ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಸಿಜೆಪಿ ಪ್ರತಿಭಟನೆ ಹಿಂಪಡೆಯಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಧಾರವಾಡ ಹೈಕೋರ್ಟ್‌ನಲ್ಲಿ ಐತಿಹಾಸಿಕ ಮಹಿಳಾ ನ್ಯಾಯಪೀಠ ಕಲಾಪ!

ಧಾರವಾಡ ಹೈಕೋರ್ಟ್ ಧಾರವಾಡ ಪೀಠದಲ್ಲಿ ಆಗಸ್ಟ್ 1ರಂದು ಸಂಪೂರ್ಣ ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ಕಲಾಪ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜಂತರ್‌ ಮಂತರ್‌ ಪ್ರತಿಭಟನೆ ಅಂತ್ಯ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಬೇಡಿಕೆಗಳ ಈಡೇರಿಕೆಯ ನಂತರ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ಸಿಜೆಪಿ ಪ್ರತಿಭಟನೆ ಹಿಂಪಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.