spot_img

4 ಗಂಟೆಗಳಲ್ಲಿ ಗಾಯ ಮರೆಸುವ ‘ಮ್ಯಾಜಿಕ್’ ಜೆಲ್: ವಿಜ್ಞಾನಿಗಳಿಂದ ಹೊಸ ಆವಿಷ್ಕಾರ

Date:

ಗಾಯಗಳ ಗುಣಮುಖತೆಯಲ್ಲಿ ಕ್ರಾಂತಿಕಾರಿ ಆವಿಷ್ಕಾರವೆನಿಸಿದ ಹೊಸ ಹೈಡೋಜೆಲ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಆತ್ಮ ವಿಶ್ವವಿದ್ಯಾಲಯ ಮತ್ತು ಬೇರೂತ್ ವಿಶ್ವವಿದ್ಯಾಲಯದ ಸಂಶೋಧಕರು ಮಾನವ ಚರ್ಮದ ಗುಣಗಳನ್ನು ಅನುಕರಿಸುವ ಈ ಸ್ವಯಂ-ಗುಣಪಡಿಸುವ ಹೈಡೋಜೆಲ್ ಅನ್ನು ಸಿದ್ಧಪಡಿಸಿದ್ದಾರೆ.

ಈ ವಿಶೇಷ ಜೆಲ್ ಕೇವಲ ನಾಲ್ಕು ಗಂಟೆಗಳಲ್ಲಿ 90% ಗಾಯಗಳನ್ನು ವಾಸಿ ಮಾಡಬಹುದು ಹಾಗೂ 24 ಗಂಟೆಗಳಲ್ಲಿ ಸಂಪೂರ್ಣ ಗುಣಮುಖ ಮಾಡುವುದು ಇದರ ವೈಶಿಷ್ಟ್ಯವಾಗಿದೆ. ಗಾಯದ ಆರೈಕೆ, ಪುನರುತ್ಪಾದಕ ಔಷಧ ಮತ್ತು ಕೃತಕ ಚರ್ಮದ ತಂತ್ರಜ್ಞಾನಕ್ಕೆ ಇದು ಹೊಸ ಸಮಾಧಾನ ನೀಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಸಂಶೋಧನೆಯ ವಿವರಗಳು ಮಾರ್ಚ್ 7ರಂದು ಪ್ರತಿಷ್ಠಿತ ‘ನೇಚರ್ ಮೆಟೀರಿಯಲ್ಸ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಜೆಲ್‌ನಲ್ಲಿ ನ್ಯಾನೋಶೀಟ್‌ಗಳ ನಡುವೆ ದಟ್ಟವಾಗಿ ಸಿಕ್ಕಿಹಾಕಿಕೊಂಡ ಪಾಲಿಮರ್‌ಗಳ ಬಳಕೆಯಿಂದ ಮೃದು ಮತ್ತು ಮೆತ್ತಗೆ ಇರುವ ಹೈಡೋಜೆಲ್ ಹೆಚ್ಚು ಸಂಘಟಿತ ರಚನೆಯನ್ನು ರೂಪಿಸುತ್ತದೆ.

ಈ ನವೀನ ಹೈಡೋಜೆಲ್ ಸುಟ್ಟ ಗಾಯಗಳು, ಶಸ್ತ್ರಚಿಕಿತ್ಸಾ ಬಳಿಕದ ಗಾಯಗಳು ಹಾಗೂ ದೀರ್ಘಕಾಲದ ಗಾಯಗಳಿಂದ ಬಳಲುವವರ ಚೇತರಿಕೆಗೆ ಹೊಸ ಆಶಾಕಿರಣವಾಗಿದೆ ಎಂದು ಹೇಳಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಾತಿಗಣತಿ ವರದಿ ಬಗ್ಗೆ ನಂಬಿಕೆ ಇಲ್ಲದಿದ್ದರೆ ಜಯಪ್ರಕಾಶ ಹೆಗ್ಡೆ ಬಳಿ ಕೇಳಿ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

“ಜಾತಿಗಣತಿ ವರದಿ ಸಿದ್ದರಾಮಯ್ಯ ಮನೆಯಲ್ಲಿ ಇದೆ” ಎನ್ನುವ ಆರ್. ಅಶೋಕ್ ಆರೋಪಕ್ಕೆ ಡಿಕೆಶಿ ತಿರುಗೇಟಾಗಿ ಜಯಪ್ರಕಾಶ ಹೆಗ್ಡೆಯವರ ಬಳಿ ಕೇಳಬಹುದು ಎಂದರು.

ಚಿನ್ನದ ದರ ಇತಿಹಾಸದ ಗರಿಷ್ಠ ಮಟ್ಟಕ್ಕೆ: ದೆಹಲಿಯಲ್ಲಿ 10 ಗ್ರಾಂ ಚಿನ್ನ ₹99,800, ಬೆಳ್ಳಿಯೂ ಏರಿಕೆ

ದೇಶದ ಚಿನ್ನ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸೋಮವಾರ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಮುಂಬೈದಿಂದ ಮಂಗಳೂರಿಗೆ ಸಾಗುತ್ತಿದ್ದ ಐರಾವತ ಬಸ್ಸಿನ ಸೀಟಿನಲ್ಲೇ ಪ್ರಾಣಬಿಟ್ಟ ಪ್ರಯಾಣಿಕ

ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ KSRTC ಐರಾವತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಏಪ್ರಿಲ್ 21 ರಂದು ಮುಂಜಾನೆ ಉಡುಪಿಯಲ್ಲಿ ನಡೆದಿದೆ.

ದಿನ ವಿಶೇಷ – ರಾಷ್ಟ್ರೀಯ ಭೂ ದಿನ

ಭೂಮಿಯನ್ನು ಪ್ರೀತಿಸದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಭೂಮಿಯನ್ನು ಹಾಗೂ ಪರಿಸರವನ್ನು ಪ್ರೀತಿಸಬೇಕು ಎನ್ನುವ ಉದ್ದೇಶದಿಂದ ಪಾಶ್ಚಾತ್ಯರು ಈ ದಿನವನ್ನು ಭೂಮಿಯ ನೆನಪಿನಲ್ಲಿ ಸೀಮಿತವಾಗಿಸಿದ್ದಾರೆ.