spot_img

ರಾತ್ರಿ ಊಟಕ್ಕೆ ಅನ್ನ ಸೇವನೆ ಆರೋಗ್ಯಕರವೇ? ತಜ್ಞರ ಸಲಹೆ ಇಲ್ಲಿದೆ!

Date:

spot_img

ಅನ್ನ ಬಹುತೇಕ ಪ್ರತಿಯೊಬ್ಬರಿಗೂ ನೆಚ್ಚಿನ ಆಹಾರ. ಅನೇಕರು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನವನ್ನು ಸೇವನೆ ಮಾಡುತ್ತಾರೆ. ಆದರೆ ರಾತ್ರಿ ವೇಳೆಯಲ್ಲಿ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಏನನ್ನು ಸಲಹೆ ಮಾಡುತ್ತಾರೆ? ಇದರ ಪರಿಣಾಮಗಳೇನು? ಈ ಬಗ್ಗೆ ತಿಳಿಯಿರಿ.

ಅನ್ನ ಸೇವನೆಯ ಹಾನಿಕಾರ ಪರಿಣಾಮಗಳು
1️⃣ ತೂಕ ಹೆಚ್ಚಳ:
ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ರಾತ್ರಿ ಅನ್ನ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಈ ಹೆಚ್ಚುವರಿ ಕ್ಯಾಲೊರಿ ದೇಹದಲ್ಲಿ ಕೊಬ್ಬಾಗಿ ಸಂಗ್ರಹವಾಗುತ್ತದೆ.

2️⃣ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ:
ಅನ್ನದಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸುವ ಸಾಧ್ಯತೆ ಇದೆ. ಇದು ಮಧುಮೇಹಕ್ಕೆ ಹೆಚ್ಚಳ ಮಾಡಬಹುದು.

3️⃣ ಜೀರ್ಣಕ್ರಿಯೆಗೆ ತೊಂದರೆ:
ರಾತ್ರಿ ಹೊತ್ತಿನಲ್ಲಿ ಅನ್ನ ಸೇವನೆಯಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ಉಬ್ಬರ ಉಂಟಾಗಬಹುದು. ಇದು ನಿದ್ರೆಗೆ ಅಡ್ಡಿಯಾಗಬಹುದು.

4️⃣ ಹೊಟ್ಟೆಯ ಕೊಬ್ಬು ಹೆಚ್ಚಳ:
ಬಿಳಿ ಅಕ್ಕಿಯಲ್ಲಿ ಫೈಬರ್ ಕಡಿಮೆ ಇರುವ ಕಾರಣ, ಇದನ್ನು ಹೆಚ್ಚಾಗಿ ಸೇವಿಸಿದರೆ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.

ರಾತ್ರಿ ಊಟಕ್ಕೆ ಉತ್ತಮ ಆಯ್ಕೆಗಳೇನು?
ಅನ್ನದ ಬದಲು ಫೈಬರ್ ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ
✅ ಚಪಾತಿ, ರೊಟ್ಟಿ
✅ ರಾಗಿ ಮುದ್ದೆ
✅ ತರಕಾರಿ ಸೂಪ್
✅ ಸಲಾಡ್ ಮತ್ತು ಹಸಿರು ತರಕಾರಿ

ಆರೋಗ್ಯಕರ ಜೀವನಶೈಲಿಗೆ ಸಂತುಲಿತ ಆಹಾರ ಸೇವನೆ ಅವಶ್ಯಕ. ಆದ್ದರಿಂದ ರಾತ್ರಿ ಊಟದ ವೇಳೆಯಲ್ಲಿ ಅನ್ನ ಸೇವನೆಯನ್ನು ನಿಯಂತ್ರಿಸಿ ಎಂದು ತಜ್ಞರು ಹೇಳುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಜಿಲ್ಲೆಗೆ ವರುಣನ ಆರ್ಭಟ: ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಉಡುಪಿ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಂಗಾಪುರಕ್ಕೆ ಚೀನಾ ಮೂಲದ ಸೈಬರ್ ಭೀತಿ: ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಗಳ ಮೇಲೆ ಗುರಿ

ಸಿಂಗಾಪುರ ಪ್ರಸ್ತುತ ಅತಿ ಸಂಕೀರ್ಣವಾದ ಸೈಬರ್ ಆಕ್ರಮಣವನ್ನು ಎದುರಿಸುತ್ತಿದೆ, ಇದು ದೇಶದ ಭದ್ರತೆ ಮತ್ತು ಪ್ರಮುಖ ಸೇವೆಗಳ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡಿದೆ

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.