spot_img

ರಾತ್ರಿ ಊಟಕ್ಕೆ ಅನ್ನ ಸೇವನೆ ಆರೋಗ್ಯಕರವೇ? ತಜ್ಞರ ಸಲಹೆ ಇಲ್ಲಿದೆ!

Date:

ಅನ್ನ ಬಹುತೇಕ ಪ್ರತಿಯೊಬ್ಬರಿಗೂ ನೆಚ್ಚಿನ ಆಹಾರ. ಅನೇಕರು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನವನ್ನು ಸೇವನೆ ಮಾಡುತ್ತಾರೆ. ಆದರೆ ರಾತ್ರಿ ವೇಳೆಯಲ್ಲಿ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಏನನ್ನು ಸಲಹೆ ಮಾಡುತ್ತಾರೆ? ಇದರ ಪರಿಣಾಮಗಳೇನು? ಈ ಬಗ್ಗೆ ತಿಳಿಯಿರಿ.

ಅನ್ನ ಸೇವನೆಯ ಹಾನಿಕಾರ ಪರಿಣಾಮಗಳು
1️⃣ ತೂಕ ಹೆಚ್ಚಳ:
ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ರಾತ್ರಿ ಅನ್ನ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಈ ಹೆಚ್ಚುವರಿ ಕ್ಯಾಲೊರಿ ದೇಹದಲ್ಲಿ ಕೊಬ್ಬಾಗಿ ಸಂಗ್ರಹವಾಗುತ್ತದೆ.

2️⃣ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ:
ಅನ್ನದಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ಏರಿಸುವ ಸಾಧ್ಯತೆ ಇದೆ. ಇದು ಮಧುಮೇಹಕ್ಕೆ ಹೆಚ್ಚಳ ಮಾಡಬಹುದು.

3️⃣ ಜೀರ್ಣಕ್ರಿಯೆಗೆ ತೊಂದರೆ:
ರಾತ್ರಿ ಹೊತ್ತಿನಲ್ಲಿ ಅನ್ನ ಸೇವನೆಯಿಂದ ಗ್ಯಾಸ್ಟ್ರಿಕ್, ಆಮ್ಲೀಯತೆ, ಉಬ್ಬರ ಉಂಟಾಗಬಹುದು. ಇದು ನಿದ್ರೆಗೆ ಅಡ್ಡಿಯಾಗಬಹುದು.

4️⃣ ಹೊಟ್ಟೆಯ ಕೊಬ್ಬು ಹೆಚ್ಚಳ:
ಬಿಳಿ ಅಕ್ಕಿಯಲ್ಲಿ ಫೈಬರ್ ಕಡಿಮೆ ಇರುವ ಕಾರಣ, ಇದನ್ನು ಹೆಚ್ಚಾಗಿ ಸೇವಿಸಿದರೆ ಹೊಟ್ಟೆಯ ಸುತ್ತಲೂ ಕೊಬ್ಬು ಸೇರುತ್ತದೆ.

ರಾತ್ರಿ ಊಟಕ್ಕೆ ಉತ್ತಮ ಆಯ್ಕೆಗಳೇನು?
ಅನ್ನದ ಬದಲು ಫೈಬರ್ ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ
✅ ಚಪಾತಿ, ರೊಟ್ಟಿ
✅ ರಾಗಿ ಮುದ್ದೆ
✅ ತರಕಾರಿ ಸೂಪ್
✅ ಸಲಾಡ್ ಮತ್ತು ಹಸಿರು ತರಕಾರಿ

ಆರೋಗ್ಯಕರ ಜೀವನಶೈಲಿಗೆ ಸಂತುಲಿತ ಆಹಾರ ಸೇವನೆ ಅವಶ್ಯಕ. ಆದ್ದರಿಂದ ರಾತ್ರಿ ಊಟದ ವೇಳೆಯಲ್ಲಿ ಅನ್ನ ಸೇವನೆಯನ್ನು ನಿಯಂತ್ರಿಸಿ ಎಂದು ತಜ್ಞರು ಹೇಳುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗಾಜಾದಲ್ಲಿ 5 ರೂಪಾಯಿಯ ಪಾರ್ಲೆಜಿ ಬಿಸ್ಕತ್ ಬೆಲೆ 2,300 ರೂಪಾಯಿ !

ಗಾಜಾ ಪಟ್ಟಣದಲ್ಲಿ, ಆಹಾರ ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳ ಲಭ್ಯತೆ ಕುಸಿದಿದೆ. ಈ ಭೀಕರ ಪರಿಸ್ಥಿತಿಯಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ₹5ಕ್ಕೆ ಲಭ್ಯವಿರುವ ಪಾರ್ಲೆ-ಜಿ ಬಿಸ್ಕತ್ ಗಾಜಾದಲ್ಲಿ ₹2,300ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವ ವರದಿ ವೈರಲ್ ಆಗಿದೆ.

ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಕೇಂದ್ರದಿಂದ ಪರವಾನಿಗೆ! ಸೆಟಲೈಟ್ ಇಂಟರ್ನೆಟ್ ಸೇವೆಗೆ ಮತ್ತೊಂದು ಹೆಜ್ಜೆ

ಅಮೆರಿಕದ ಆಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಸ್ಪೇಸ್ ಎಕ್ಸ್‌ಗೆ ಸೇರಿದ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಂಸ್ಥೆಗೆ ಭಾರತದಲ್ಲಿ ಸೆಟಲೈಟ್ ಕಮ್ಯೂನಿಕೇಶನ್ ಸೇವೆ ನೀಡಲು ದೂರಸಂಪರ್ಕ ಇಲಾಖೆಯಿಂದ (DoT) ಪರವಾನಿಗೆ ನೀಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಯ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್!

ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.