spot_img

ಹುರುಳಿಕಾಳು: ಆರೋಗ್ಯದ ಕನಸನ್ನು ನನಸು ಮಾಡುವ ಪೌಷ್ಟಿಕ ಧಾನ್ಯ!

Date:

ನಮ್ಮ ಅಡುಗೆಮನೆಯಲ್ಲೇ ಇರುವ ಸಾಮಾನ್ಯ ಧಾನ್ಯವಾದ ಹುರುಳಿಕಾಳು ದೇಹಕ್ಕೆ ಪೋಷಣೆಯ ಒಳ್ಳೆಯ ಬಂಡವಾಳವನ್ನು ಒದಗಿಸುವ ಆಹಾರವಾಗಿದೆ. ಆಯುರ್ವೇದ ಶಾಸ್ತ್ರದಲ್ಲಿಯೂ ಹುರುಳಿಕಾಳಿನ ಮಹತ್ವವನ್ನು ವಿಶದವಾಗಿ ವಿವರಿಸಲಾಗಿದೆ. ಆದರೆ ಇದರ ಪ್ರಯೋಜನಗಳ ಜೊತೆಗೆ ಕೆಲವರೆಗೂ ಇದು ವಿಪರೀತ ಪರಿಣಾಮ ನೀಡಬಹುದೆಂಬ ಎಚ್ಚರಿಕೆಯನ್ನು ವೈದ್ಯಕೀಯ ವಲಯದಲ್ಲಿ ನೀಡಲಾಗುತ್ತಿದೆ.

ಹುರುಳಿಕಾಳಿನ ಆರೋಗ್ಯ ಲಾಭಗಳು:

  • ಪ್ರೋಟೀನ್‌ನ ಭಂಡಾರ: ಹುರುಳಿಕಾಳು ಪ್ರೋಟೀನ್ ಮತ್ತು ಪೋಷಕಾಂಶಗಳಲ್ಲಿ ತುಂಬಿರುತ್ತದೆ. ದೇಹ ದುರ್ಬಲವಾಗಿರುವವರು, ಶಕ್ತಿಹೀನತೆಯಿಂದ ಬಳಲುವವರು ಇದನ್ನು ನಿಯಮಿತವಾಗಿ ಸೇವಿಸಿದರೆ ಶಕ್ತಿ ಪುನಃ ಸಿಗುತ್ತದೆ.
  • ಕಿಡ್ನಿ ಕಲ್ಲಿಗೆ ಪರಿಹಾರ: ಆಯುರ್ವೇದದಲ್ಲಿ ಇದನ್ನು ಅಸ್ಮರಿ ಛೇದಕ ಎಂದೇ ಕರೆಯಲಾಗಿದ್ದು, ಮಲಮೂತ್ರದ ಮಾರ್ಗವನ್ನು ಸ್ವಚ್ಛಗೊಳಿಸಿ ಕಿಡ್ನಿ ಕಲ್ಲನ್ನು ಹೊರಹಾಕುವಲ್ಲಿಯೂ ಸಹಕಾರಿ.
  • ಜೀರ್ಣಕ್ರಿಯೆ ಉತ್ತಮಗೊಳಿಸಿ: ವಾತ ನಿಗ್ರಹಿಸಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಮಲಬದ್ದತೆಯ ಸಮಸ್ಯೆ ಇರುವವರು ಇದರಿಂದ ಲಾಭ ಪಡೆಯಬಹುದು.
  • ಕಣ್ಣುಗಳಿಗೆ ಲಾಭ: ದೃಷ್ಠಿ ಶಕ್ತಿಗೆ ಸಹಕಾರಿಯಾಗುತ್ತದೆ. ನುಗ್ಗೆಕಾಯಿ ಸೊಪ್ಪು ಮತ್ತು ವಿಟಮಿನ್ ಎಯುಳ್ಳ ಆಹಾರಗಳ ಜೊತೆ ಸೇವಿಸಿದರೆ ಪರಿಣಾಮ ಇನ್ನೂ ಉತ್ತಮ.
  • ಸ್ನಾಯು ಬಲವರ್ಧನೆ: ಗಂಟುಗಳನ್ನು ಬಲಿಷ್ಠಗೊಳಿಸುವ ಶಕ್ತಿ ಇದೆ.

ಯಾರಿಗೆ ಹುರುಳಿಕಾಳು ಸೂಕ್ತವಲ್ಲ?:

  • ಹುಳಿತೇಗು ಹಾಗೂ ಹುಣ್ಣು ಸಮಸ್ಯೆ: ಉಷ್ಣತೆಯ ಸ್ವಭಾವ ಇರುವ ಹುರುಳಿಕಾಳು, ದೇಹದಲ್ಲಿ ಉರಿಯೂತ, ಚರ್ಮದ ಸಮಸ್ಯೆ ಇರುವವರಿಗೆ ಸೂಕ್ತವಲ್ಲ.
  • ಅತಿರಕ್ತಸ್ರಾವ: ಋತುಚಕ್ರದಲ್ಲಿ ಹೆಚ್ಚು ರಕ್ತಸ್ರಾವವಿರುವ ಮಹಿಳೆಯರು ಈ ಧಾನ್ಯದಿಂದ ದೂರವಿರಬೇಕು.
  • ಮೂಲವ್ಯಾಧಿ: ರಕ್ತ ಬರುವ ಪೈಲ್ಸ್ ಇರುವವರು ಇದನ್ನು ಸೇವನೆ ಮಾಡದಿರುವುದೇ ಉತ್ತಮ.
  • ಸೀಮಿತ ಸೇವನೆ ಅನಿವಾರ್ಯ: ಬೇಸಿಗೆಯ ಉಷ್ಣತೆಯಲ್ಲಿ ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಹೆಚ್ಚು ಉಷ್ಣತೆ ಮೂಡಬಹುದು.

ಹುರುಳಿಕಾಳು ಬಳಕೆಯ ಕೆಲ ಪವರ್‌ಫುಲ್ ಮಾರ್ಗಗಳು:

  • ಪಲ್ಯ, ಸಾಂಬಾರಿನಲ್ಲಿ ಸೇರಿಸಿ ಸೇವನೆ
  • ಮೊಳಕೆ ಹಾಕಿ ಸಲಾಡ್ ರೂಪದಲ್ಲಿ ಉಪಯೋಗ
  • ಸೂಪ್ ರೂಪದಲ್ಲಿ ಆರೈಕೆ
  • ರುಚಿಗೆ ಅನುಗುಣವಾಗಿ ಉಪಾಹಾರ

ಆಯುರ್ವೇದವೂ ಶ್ಲಾಘಿಸಿದ ಹುರುಳಿಕಾಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿ ಆರೋಗ್ಯವಂತರಾಗಿರೋಣ …..

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.