spot_img

ಹುರುಳಿಕಾಳು: ಆರೋಗ್ಯದ ಕನಸನ್ನು ನನಸು ಮಾಡುವ ಪೌಷ್ಟಿಕ ಧಾನ್ಯ!

Date:

spot_img

ನಮ್ಮ ಅಡುಗೆಮನೆಯಲ್ಲೇ ಇರುವ ಸಾಮಾನ್ಯ ಧಾನ್ಯವಾದ ಹುರುಳಿಕಾಳು ದೇಹಕ್ಕೆ ಪೋಷಣೆಯ ಒಳ್ಳೆಯ ಬಂಡವಾಳವನ್ನು ಒದಗಿಸುವ ಆಹಾರವಾಗಿದೆ. ಆಯುರ್ವೇದ ಶಾಸ್ತ್ರದಲ್ಲಿಯೂ ಹುರುಳಿಕಾಳಿನ ಮಹತ್ವವನ್ನು ವಿಶದವಾಗಿ ವಿವರಿಸಲಾಗಿದೆ. ಆದರೆ ಇದರ ಪ್ರಯೋಜನಗಳ ಜೊತೆಗೆ ಕೆಲವರೆಗೂ ಇದು ವಿಪರೀತ ಪರಿಣಾಮ ನೀಡಬಹುದೆಂಬ ಎಚ್ಚರಿಕೆಯನ್ನು ವೈದ್ಯಕೀಯ ವಲಯದಲ್ಲಿ ನೀಡಲಾಗುತ್ತಿದೆ.

ಹುರುಳಿಕಾಳಿನ ಆರೋಗ್ಯ ಲಾಭಗಳು:

  • ಪ್ರೋಟೀನ್‌ನ ಭಂಡಾರ: ಹುರುಳಿಕಾಳು ಪ್ರೋಟೀನ್ ಮತ್ತು ಪೋಷಕಾಂಶಗಳಲ್ಲಿ ತುಂಬಿರುತ್ತದೆ. ದೇಹ ದುರ್ಬಲವಾಗಿರುವವರು, ಶಕ್ತಿಹೀನತೆಯಿಂದ ಬಳಲುವವರು ಇದನ್ನು ನಿಯಮಿತವಾಗಿ ಸೇವಿಸಿದರೆ ಶಕ್ತಿ ಪುನಃ ಸಿಗುತ್ತದೆ.
  • ಕಿಡ್ನಿ ಕಲ್ಲಿಗೆ ಪರಿಹಾರ: ಆಯುರ್ವೇದದಲ್ಲಿ ಇದನ್ನು ಅಸ್ಮರಿ ಛೇದಕ ಎಂದೇ ಕರೆಯಲಾಗಿದ್ದು, ಮಲಮೂತ್ರದ ಮಾರ್ಗವನ್ನು ಸ್ವಚ್ಛಗೊಳಿಸಿ ಕಿಡ್ನಿ ಕಲ್ಲನ್ನು ಹೊರಹಾಕುವಲ್ಲಿಯೂ ಸಹಕಾರಿ.
  • ಜೀರ್ಣಕ್ರಿಯೆ ಉತ್ತಮಗೊಳಿಸಿ: ವಾತ ನಿಗ್ರಹಿಸಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಮಲಬದ್ದತೆಯ ಸಮಸ್ಯೆ ಇರುವವರು ಇದರಿಂದ ಲಾಭ ಪಡೆಯಬಹುದು.
  • ಕಣ್ಣುಗಳಿಗೆ ಲಾಭ: ದೃಷ್ಠಿ ಶಕ್ತಿಗೆ ಸಹಕಾರಿಯಾಗುತ್ತದೆ. ನುಗ್ಗೆಕಾಯಿ ಸೊಪ್ಪು ಮತ್ತು ವಿಟಮಿನ್ ಎಯುಳ್ಳ ಆಹಾರಗಳ ಜೊತೆ ಸೇವಿಸಿದರೆ ಪರಿಣಾಮ ಇನ್ನೂ ಉತ್ತಮ.
  • ಸ್ನಾಯು ಬಲವರ್ಧನೆ: ಗಂಟುಗಳನ್ನು ಬಲಿಷ್ಠಗೊಳಿಸುವ ಶಕ್ತಿ ಇದೆ.

ಯಾರಿಗೆ ಹುರುಳಿಕಾಳು ಸೂಕ್ತವಲ್ಲ?:

  • ಹುಳಿತೇಗು ಹಾಗೂ ಹುಣ್ಣು ಸಮಸ್ಯೆ: ಉಷ್ಣತೆಯ ಸ್ವಭಾವ ಇರುವ ಹುರುಳಿಕಾಳು, ದೇಹದಲ್ಲಿ ಉರಿಯೂತ, ಚರ್ಮದ ಸಮಸ್ಯೆ ಇರುವವರಿಗೆ ಸೂಕ್ತವಲ್ಲ.
  • ಅತಿರಕ್ತಸ್ರಾವ: ಋತುಚಕ್ರದಲ್ಲಿ ಹೆಚ್ಚು ರಕ್ತಸ್ರಾವವಿರುವ ಮಹಿಳೆಯರು ಈ ಧಾನ್ಯದಿಂದ ದೂರವಿರಬೇಕು.
  • ಮೂಲವ್ಯಾಧಿ: ರಕ್ತ ಬರುವ ಪೈಲ್ಸ್ ಇರುವವರು ಇದನ್ನು ಸೇವನೆ ಮಾಡದಿರುವುದೇ ಉತ್ತಮ.
  • ಸೀಮಿತ ಸೇವನೆ ಅನಿವಾರ್ಯ: ಬೇಸಿಗೆಯ ಉಷ್ಣತೆಯಲ್ಲಿ ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಹೆಚ್ಚು ಉಷ್ಣತೆ ಮೂಡಬಹುದು.

ಹುರುಳಿಕಾಳು ಬಳಕೆಯ ಕೆಲ ಪವರ್‌ಫುಲ್ ಮಾರ್ಗಗಳು:

  • ಪಲ್ಯ, ಸಾಂಬಾರಿನಲ್ಲಿ ಸೇರಿಸಿ ಸೇವನೆ
  • ಮೊಳಕೆ ಹಾಕಿ ಸಲಾಡ್ ರೂಪದಲ್ಲಿ ಉಪಯೋಗ
  • ಸೂಪ್ ರೂಪದಲ್ಲಿ ಆರೈಕೆ
  • ರುಚಿಗೆ ಅನುಗುಣವಾಗಿ ಉಪಾಹಾರ

ಆಯುರ್ವೇದವೂ ಶ್ಲಾಘಿಸಿದ ಹುರುಳಿಕಾಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿ ಆರೋಗ್ಯವಂತರಾಗಿರೋಣ …..

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಪರಾಷ್ಟ್ರಪತಿ ಸ್ಥಾನಕ್ಕೆ ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹೆಸರು ಮುಂಚೂಣಿಯಲ್ಲಿ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ಅನಿರೀಕ್ಷಿತವಾಗಿ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಈ ಮಹೋನ್ನತ ಹುದ್ದೆಗೆ ಕರ್ನಾಟಕದ ಹೆಮ್ಮೆಯ ಪುತ್ರ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಧರ್ಮಸ್ಥಳ ದುರಂತಗಳ ಆಳಕ್ಕೆ ಇಳಿಯಲು ಸಹಾಯವಾಣಿ ಸ್ಥಾಪನೆಗೆ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವ ವಿಲೇವಾರಿ ಪ್ರಕರಣವು ಇದೀಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೋಳದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸಿದ ಬಿಜೆಪಿ ಗ್ರಾ. ಪಂ ಸದಸ್ಯರ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿ ಪಂಚಾಯತ್ ಸದಸ್ಯರ ದುರ್ನಡತೆಯ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಬೋಳ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಬೋಳ ಗ್ರಾಮ ಪಂಚಾಯತ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಎಂ.ಆರ್.ಐ. ಯಂತ್ರದಿಂದ ಲೋಹದ ಆಭರಣ ಧರಿಸಿದ ವ್ಯಕ್ತಿಯ ಸಾವು!

ವೈದ್ಯಕೀಯ ಜಗತ್ತಿನಲ್ಲಿ ಅಪರೂಪದ ಆದರೆ ಅತ್ಯಂತ ಗಂಭೀರವಾದ ದುರಂತವೊಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಂಭವಿಸಿದ್ದು, ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ.) ಸ್ಕ್ಯಾನ್ ಯಂತ್ರದ ಪ್ರಬಲ ಕಾಂತೀಯ ಕ್ಷೇತ್ರಕ್ಕೆ ಸೆಳೆದುಕೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ