
ಹೋಲಿಕಾ ಎನ್ನುವ ರಾಕ್ಷಸಿಯನ್ನು ಕಲ್ಪಿಸಿಕೊಂಡು ಅವಳನ್ನು ಬೆಂಕಿಗೆ ಆಹುತಿಯನ್ನಾಗಿಸಿ ನಮ್ಮೊಳಗಿರುವ ಆಸುರೀ ಭಾವವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಹೋಳಿಕಾ ದಹನ. ಪ್ರಹ್ಲಾದನನ್ನು ಕೊಲ್ಲಬೇಕು ಎಂದುಕೊಂಡು ಅವನ ಒಟ್ಟಿಗೆ ಹೋಲಿಕಾಳನ್ನು ಕುಳ್ಳಿರಿಸಿ ಬೆಂಕಿಗೆ ಹಾಕಲಾಯಿತು. ಆದರೆ ಪ್ರಹ್ಲಾದ ಬದುಕಿ ಬಂದ ಹೋಲಿಕಾ ಬೆಂಕಿಗೆ ಆಹುತಿಯಾದಳು. ಅಂದಿನಿಂದ ಉತ್ತರ ಭಾರತದಲ್ಲಿ ಈ ದಿವಸವನ್ನು ಹೋಲಿಕ ದಹನ ಎಂದು ಆಚರಿಸುತ್ತಾರೆ. ದಕ್ಷಿಣದವರು ಹೆಚ್ಚಾಗಿ ಶಿವ ಕಾಮನನ್ನು ಸುಟ್ಟ ದಿವಸ ಎನ್ನುವ ಅನುಸಂಧಾನವನ್ನು ಇಟ್ಟುಕೊಂಡು ಕಾಮದಹನ ಎನ್ನುವುದಾಗಿ ಈ ದಿವಸವನ್ನು ಆಚರಿಸುತ್ತಾರೆ. ಒಟ್ಟು ಅರ್ಥದಲ್ಲಿ ಆಸೆಯಿಂದ ಹಿಡಿದು ಅದನ್ನು ಪಡೆದುಕೊಳ್ಳುವ ಸಲುವಾಗಿರುವ ನಾವು ಸಾಗುವ ಎಲ್ಲಾ ಕೆಟ್ಟ ಮನಸ್ಥಿತಿಯನ್ನು ನಮ್ಮಿಂದ ದೂರವಾಗಿಸಬೇಕು ಎನ್ನುವ ಸಂಕಲ್ಪದಲ್ಲಿ ಅದನ್ನು ಬೆಂಕಿಗೆ ಹಾಕುತ್ತಿದ್ದೇವೆ ಎನ್ನುವ ಅರ್ಥವನ್ನು ಇಟ್ಟುಕೊಂಡು ಇದನ್ನು ಆಚರಿಸಿದರೆ ಮಾತ್ರ ಈ ಹಬ್ಬ ಅರ್ಥಪೂರ್ಣವಗುತ್ತದೆ.