spot_img

ದಿನ ವಿಶೇಷ – ವಿಶ್ವ ಜಲ ದಿನ

Date:

ಯಾವುದನ್ನು ಬೇಕಾದರೂ ಬಿಟ್ಟು ಬದುಕಬಹುದು ಆದರೆ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನೀರಿಗೆ ಸಂಸ್ಕೃತದಲ್ಲಿ ಜೀವನ ಎಂದು ಹೆಸರು. ನಮಗೆ ಸಮೃದ್ಧಿಯ ಆರೋಗ್ಯ ಪೂರ್ಣವಾದ ಜೀವನ ಸಿಗಬೇಕಾದರೆ ನೀರು ಅತಿ ಪ್ರಮುಖವಾಗಿದೆ. ನಮ್ಮ ದೇಹದ ಬಹುಭಾಗ ವ್ಯಾಪಿಸಿರುವುದು ನಾವು ತಿಂದ ಆಹಾರ ಅಲ್ಲ ನಾವು ಕುಡಿದ ನೀರು ಮಾತ್ರ. ಪ್ರಪಂಚದಲ್ಲಿ ಭಾರತದಷ್ಟು ನದಿಗಳು ಎಲ್ಲಿಯೂ ಇಲ್ಲ.

ಅಷ್ಟೇ ಅಲ್ಲದೆ ನದಿಗಳನ್ನು ಈ ದೇಶಕ್ಕೆ ಕೊಟ್ಟು ಈ ದೇಶವನ್ನು ಸಮೃದ್ಧವಾಗಿಸಿದ ಹಿಮಾಲಯದಂತಹ ಪರ್ವತ ಶ್ರೇಣಿಗಳು ಪ್ರಪಂಚದಲ್ಲಿ ಬೇರೆ ಕಡೆ ಇಲ್ಲ. ಆದರೆ ದಿನ ಕಳೆದಂತೆ ವರ್ಷಗಳು ಉರುಳಿದಂತೆ ಹಿಮಗಳು ಕರಗಿ ಹೋಗುತ್ತಿವೆ ನದಿಗಳು ಬತ್ತಿ ಹೋಗುತ್ತಿವೆ. ಅದನ್ನು ಉಳಿಸಿ ಬೆಳೆಸಬೇಕು ಎನ್ನುವ ಕಾರಣದಿಂದ ಪ್ರಪಂಚ ಇವತ್ತು ವಿಶ್ವ ಜಲ ದಿನ ಎಂದು ಆಚರಿಸಿ ನೀರನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಗೆ ಜನರನ್ನು ಉತ್ತೇಜಿಸಬೇಕು ಎನ್ನುವ ದೃಷ್ಟಿಯನ್ನು ಇಟ್ಟು ಈ ದಿನವನ್ನು ಸೀಮಿತವಾಗಿಸಿದ್ದಾರೆ. ನಾವು ಕೂಡ ಈ ದೃಷ್ಟಿಯಲ್ಲಿ ನಮ್ಮ ಬದುಕು ನೀರಿನಿಂದ ಅದಕ್ಕಾಗಿ ನೀರಿಗಾಗಿ ನಮ್ಮ ಬದುಕಿನ ಸ್ವಲ್ಪ ಭಾಗವನ್ನಾದರೂ ಮೀಸಲಿಡುವ ಕಾರ್ಯವಾಗಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರಿಯಡ್ಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ!

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ ಹಿರಿಯಡ್ಕದ ಸೌಮ್ಯ ಕ್ಲಿನಿಕ್ ನ ಡಾ. ಶೋಭಿತಾ ಅವರು ಈ ವರ್ಷ 'ಕರ್ನಾಟಕ ಮಹಿಳಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ರಾಕಿ ರೈ: ಮುತ್ತಪ್ಪ ರೈ ಪುತ್ರನ ರಾಜಕೀಯ ನಂಟು ?

ಅಂಡರ್‌ವಲ್ಡ್ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಹಿರಿಯ ಪುತ್ರ ರಾಕಿ ರೈ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಭೇಟಿಗೆ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ದಿನಕ್ಕೆ ಒಂದು ಲೋಟ ಹಾಲು: ಆರೋಗ್ಯಕ್ಕೆ ಹತ್ತಿರದ ಅಮೃತ!

ಅತ್ಯಮೂಲ್ಯ ಪೋಷಕಾಂಶಗಳಿಂದ ತುಂಬಿರುವ ಹಾಲು, ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಅಮೃತತುಲ್ಯ ಪಾನೀಯ.