spot_img

ದಿನ ವಿಶೇಷ – ವಿಶ್ವ ಕಾವ್ಯ ದಿನ

Date:

spot_img

ಪ್ರಿಯಳಾದ ಸಖಿಯೊಬ್ಬಳು ಬಳುಕು ವಯ್ಯಾರದಿಂದ ತನ್ನ ಅಭಿಪ್ರಾಯವನ್ನು ತಿಳಿಸಿ, ನಮ್ಮಲ್ಲಿ ಅದನ್ನು ಕಾರ್ಯಗತಗೊಳಿಸುವ ಹಾಗೆ ಕವಿ ಕಾವ್ಯದ ಮೂಲಕ ಸಮಾಜವನ್ನು ತಿದ್ದುತ್ತಾನೆ. ಇದಕ್ಕೆ ಕಾಂತಾ ಸಂಹಿತೆ ಎಂದು ಹೆಸರು. ಸಮಾಜದಲ್ಲಿ ಕವಿಯಿಂದ ಸೃಷ್ಟಿಸಲ್ಪಡುವ ಕಾವ್ಯ ಬಹಳ ಮಹತ್ವಪೂರ್ಣವಾಗಿರುತ್ತದೆ. ದುಶ್ಯಂತ ಶಕುಂತಲೆಯರ ಸಣ್ಣ ಕಥೆ ಕಾಳಿದಾಸನಿಂದ ದೊಡ್ಡ ನಾಟಕವಾಗಿದೆ. ಹೀಗೆ ಸಣ್ಣ ವಿಚಾರಗಳು ಕೂಡ ಬಹಳ ಮಹತ್ವಪೂರ್ಣವನ್ನಾಗಿಸಿ ಸಮಾಜದ ಮುಂದೆ ತಂದು, ಆ ಮೂಲಕ ನೀತಿ, ನಿಯಮ, ಆಚಾರ, ವಿಚಾರವನ್ನು ಹಾಗೂ ಹೊಸ ಚಿಂತನೆಯನ್ನು ಸಮಾಜಕ್ಕೆ ಕೊಡುವ ದೊಡ್ಡ ಕಾರ್ಯ ಕಾವ್ಯದ ಮೂಲಕ ಕವಿ ಮಾಡುತ್ತಾನೆ. ಕಾವ್ಯ ಅದನ್ನು ನಡೆಸಿಕೊಡುತ್ತದೆ. ಅಂತಹ ಮಹಾಕಾವ್ಯಗಳ ನೆನಪಿಗಾಗಿ ಅದರ ಮೆಲುಕಿಗಾಗಿ 1999 ರಿಂದ ಈ ದಿನ ಮೀಸಲಿಟ್ಟಿದೆ. ಕಾವ್ಯ ಕಾಲವನ್ನು, ಕಾಲ ಗತಿಯನ್ನು, ಕಾಲ ಗತಿಯ ಜೀವನ ಪದ್ಧತಿಯನ್ನು, ಎಲ್ಲವನ್ನು ಉಳಿಸಿ ಮುಂದಿನ ಜನಾಂಗಕ್ಕೆ ತೋರಿಸುತ್ತದೆ. ಈ ದೇಶದ ರಾಮಾಯಣ ಆದಿ ಮಹಾ ಕಾವ್ಯವಾಗಿದೆ. ಜಗತ್ತಿಗೆ ದೊಡ್ಡ ಕಾಣಿಕೆಯಾಗಿದೆ. ಆದ್ದರಿಂದ ಈ ದಿವಸ ಕಾವ್ಯ ದಿನ ಎನ್ನುವುದಕ್ಕಿಂತಲೂ ರಾಮಾಯಣದ ದಿನವಾಗಿದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೈಲೂರು ಪರಶುರಾಮ ಥೀಮ್ ಪಾರ್ಕ್ ಸ್ಥಗಿತಗೊಂಡ ಕಾಮಗಾರಿ ಯಾವಾಗ ? : ಸುಮಿತ್ ಶೆಟ್ಟಿ ಕೌಡೂರು

ಬೈಲೂರಿನ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಾಣವಾಗುತ್ತಿದ್ದ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್‌ನ ಕಾಮಗಾರಿಯು ಸ್ಥಗಿತಗೊಂಡಿರುವ ಕುರಿತು ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಪೌರತ್ವ ತ್ಯಾಗ! : ವಿದೇಶಾಂಗ ಸಚಿವರಿಂದ ಮಾಹಿತಿ

ಕಳೆದ ಐದು ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ!

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕಾರವಾರದಲ್ಲಿ ಎನ್‌ಐಟಿಕೆಯ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿಯ ಪುತ್ರಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ.