spot_img

ದಿನ ವಿಶೇಷ – ವಿಶ್ವ ಕಾವ್ಯ ದಿನ

Date:

ಪ್ರಿಯಳಾದ ಸಖಿಯೊಬ್ಬಳು ಬಳುಕು ವಯ್ಯಾರದಿಂದ ತನ್ನ ಅಭಿಪ್ರಾಯವನ್ನು ತಿಳಿಸಿ, ನಮ್ಮಲ್ಲಿ ಅದನ್ನು ಕಾರ್ಯಗತಗೊಳಿಸುವ ಹಾಗೆ ಕವಿ ಕಾವ್ಯದ ಮೂಲಕ ಸಮಾಜವನ್ನು ತಿದ್ದುತ್ತಾನೆ. ಇದಕ್ಕೆ ಕಾಂತಾ ಸಂಹಿತೆ ಎಂದು ಹೆಸರು. ಸಮಾಜದಲ್ಲಿ ಕವಿಯಿಂದ ಸೃಷ್ಟಿಸಲ್ಪಡುವ ಕಾವ್ಯ ಬಹಳ ಮಹತ್ವಪೂರ್ಣವಾಗಿರುತ್ತದೆ. ದುಶ್ಯಂತ ಶಕುಂತಲೆಯರ ಸಣ್ಣ ಕಥೆ ಕಾಳಿದಾಸನಿಂದ ದೊಡ್ಡ ನಾಟಕವಾಗಿದೆ. ಹೀಗೆ ಸಣ್ಣ ವಿಚಾರಗಳು ಕೂಡ ಬಹಳ ಮಹತ್ವಪೂರ್ಣವನ್ನಾಗಿಸಿ ಸಮಾಜದ ಮುಂದೆ ತಂದು, ಆ ಮೂಲಕ ನೀತಿ, ನಿಯಮ, ಆಚಾರ, ವಿಚಾರವನ್ನು ಹಾಗೂ ಹೊಸ ಚಿಂತನೆಯನ್ನು ಸಮಾಜಕ್ಕೆ ಕೊಡುವ ದೊಡ್ಡ ಕಾರ್ಯ ಕಾವ್ಯದ ಮೂಲಕ ಕವಿ ಮಾಡುತ್ತಾನೆ. ಕಾವ್ಯ ಅದನ್ನು ನಡೆಸಿಕೊಡುತ್ತದೆ. ಅಂತಹ ಮಹಾಕಾವ್ಯಗಳ ನೆನಪಿಗಾಗಿ ಅದರ ಮೆಲುಕಿಗಾಗಿ 1999 ರಿಂದ ಈ ದಿನ ಮೀಸಲಿಟ್ಟಿದೆ. ಕಾವ್ಯ ಕಾಲವನ್ನು, ಕಾಲ ಗತಿಯನ್ನು, ಕಾಲ ಗತಿಯ ಜೀವನ ಪದ್ಧತಿಯನ್ನು, ಎಲ್ಲವನ್ನು ಉಳಿಸಿ ಮುಂದಿನ ಜನಾಂಗಕ್ಕೆ ತೋರಿಸುತ್ತದೆ. ಈ ದೇಶದ ರಾಮಾಯಣ ಆದಿ ಮಹಾ ಕಾವ್ಯವಾಗಿದೆ. ಜಗತ್ತಿಗೆ ದೊಡ್ಡ ಕಾಣಿಕೆಯಾಗಿದೆ. ಆದ್ದರಿಂದ ಈ ದಿವಸ ಕಾವ್ಯ ದಿನ ಎನ್ನುವುದಕ್ಕಿಂತಲೂ ರಾಮಾಯಣದ ದಿನವಾಗಿದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರಿಯಡ್ಕದ ಡಾ. ಶೋಭಿತಾ ಅವರಿಗೆ ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ!

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಗಾಗಿ ಹಿರಿಯಡ್ಕದ ಸೌಮ್ಯ ಕ್ಲಿನಿಕ್ ನ ಡಾ. ಶೋಭಿತಾ ಅವರು ಈ ವರ್ಷ 'ಕರ್ನಾಟಕ ಮಹಿಳಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿಯಾದ ರಾಕಿ ರೈ: ಮುತ್ತಪ್ಪ ರೈ ಪುತ್ರನ ರಾಜಕೀಯ ನಂಟು ?

ಅಂಡರ್‌ವಲ್ಡ್ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಹಿರಿಯ ಪುತ್ರ ರಾಕಿ ರೈ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಭೇಟಿಗೆ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ದಿನಕ್ಕೆ ಒಂದು ಲೋಟ ಹಾಲು: ಆರೋಗ್ಯಕ್ಕೆ ಹತ್ತಿರದ ಅಮೃತ!

ಅತ್ಯಮೂಲ್ಯ ಪೋಷಕಾಂಶಗಳಿಂದ ತುಂಬಿರುವ ಹಾಲು, ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಅಮೃತತುಲ್ಯ ಪಾನೀಯ.