spot_img

ದಿನ ವಿಶೇಷ – ವಿಶ್ವ ಪಿಯಾನೋ ದಿನ

Date:

ಇದು ಇಟಾಲಿಯ ಸಂಗೀತ ವಾದ್ಯ ವಿಶೇಷ. ಆ ಭಾಷೆಯಲ್ಲಿ ಮೃದು ಎಂಬ ಅರ್ಥದಲ್ಲಿ ಈ ಹೆಸರು ಪ್ರಯೋಗಿಸಲ್ಪಟ್ಟಿದೆ. ಅವರಿಗೆ ಇದರ ನಾದ ತುಂಬಾ ಮೃದುವಾಗಿ ಹಾಗೂ ಮನೋಹರವಾಗಿ ಅನುಭವಕ್ಕೆ ಬಂದಿರುವುದರಿಂದ ಈ ವಾದ್ಯಕ್ಕೆ ಬಹಳ ಮಹತ್ವವಿದೆ. ಬಾರ್ತಲೋಮ್ಯು ಕ್ರಿಷ್ಟೋಫರ್ ರವರು 1700 ರಲ್ಲಿ ಇದನ್ನು ಆವಿಷ್ಕರಿಸಿದರು ಎಂದು ಉಲ್ಲೇಖವಿದೆ. ಭಾರತದ ಹಾರ್ಮೋನಿಯಂತೆ ಕಾಣುವ ಇದು ಬಹಳ ದೊಡ್ಡದಾಗಿ ಹಾಗೂ ವಿಸ್ತಾರವಾದ ಕೀಲಿ ಮಣಿಗಳಿಂದ ಕೂಡಿದೆ. ಅದಕ್ಕೆ ಗೌರವದ ಉದ್ದೇಶದಿಂದ ಈ ದಿವಸವನ್ನು ಮೀಸಲಿಟ್ಟಿದ್ದಾರೆ.

ಭಾರತದ ಸಂಗೀತಕ್ಕೂ ಪಾಶ್ಚಾತ್ಯ ಸಂಗೀತಕ್ಕೂ ಇರುವ ದೊಡ್ಡ ವ್ಯತ್ಯಾಸ ಏನೆಂದರೆ ಈ ಪಿಯಾನೋ ಬಾರಿಸಲ್ಪಡುವುದು ಕುಣಿದು ತೇಲಾಡುವ ಪಾರ್ಟಿಗಳಲ್ಲಿ ಭಾರತದಲ್ಲಿ ಯಾವುದೇ ವಾದ್ಯಗಳು ಅಥವಾ ವಾದ್ಯ ಪರಿಕರಗಳು ಕೇವಲ ಮನೋರಂಜನೆಯ ಉದ್ದೇಶದಲ್ಲಿ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.ಇಲ್ಲಿ ಸುಖಕ್ಕೂ ಹಾಗೂ ಗೌರವಕ್ಕೂ ಮಾತ್ರ ಇರುವುದಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೂ ಕೂಡ ಸಾಧಾರಣ ಎಲ್ಲಾ ಆದ್ಯ ವಿಶೇಷಗಳು ಅನ್ವಯವಾಗುತ್ತದೆ. ಹಾಗೂ ಭಕ್ತಿಯನ್ನು ಹಾಗೂ ಸಾತ್ವಿಕ ಚಿಂತನೆಯನ್ನು ಜಾಗೃತಗೊಳಿಸುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.