spot_img

ದಿನ ವಿಶೇಷ – ಸುಮಿತ್ರಾನಂದನ್ ಪಂತ್

Date:

ಸುಮಿತ್ರಾನಂದನ್ ಪಂತ್

ಹಿಂದಿ ಭಾಷೆಯ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮಹಾ ಕವಿ ಸುಮಿತ್ರಾನಂದನ್ ಪಂತ್. 1900 ಮೇ 20ರಂದು ಈಗಿನ ಉತ್ತರಾಖಂಡ ರಾಜ್ಯದ ಕೌಸಾನಿ ಎಂಬ ಜಿಲ್ಲೆಯಲ್ಲಿ ಹುಟ್ಟಿದರು. ತನ್ನ ಕಾಲೇಜ್ ವಿದ್ಯಾಭ್ಯಾಸದ ಸಮಯದಲ್ಲಿ ಸರೋಜಿನಿ ನಾಯ್ಡು ಹಾಗೂ ರವೀಂದ್ರನಾಥ ಟ್ಯಾಗೋರ್ ಇವರಿಂದ ಬಹಳ ಪ್ರಭಾವಿತರಾಗಿ ಕಾವ್ಯ ಲೋಕಕ್ಕೆ ಕಾಲಿಟ್ಟರು. ಭಾರತದ ಪ್ರಾಕೃತಿಕವಾದ ಸೌಂದರ್ಯ ಹಾಗೂ ಗ್ರಾಮೀಣ ಪ್ರದೇಶದ ಮೇಲೆ ಬಹಳಷ್ಟು ಅಭಿಮಾನ ಹೊಂದಿದ್ದ ಇವರು, ತನ್ನ ಕೃತಿಗಳಲ್ಲಿ ಇದರ ಕುರಿತಾಗಿ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದರು.

9 ವರ್ಷಗಳಷ್ಟು ಕಾಲ ಪ್ರಕೃತಿಯೊಂದಿಗೆ ಏಕಾಂತ ಜೀವನವನ್ನು ಸನ್ಯಾಸಿಯಂತೆ ಕಳೆದವರು. ನಂತರ ಗಾಂಧಿಯ ಚಿಂತನೆಗಳಿಗೆ ತನ್ನನ್ನು ಸಮರ್ಪಿಸಿಕೊಂಡು ಕೊನೆಗೆ ಅರವಿಂದ ಘೋಷರ ಶಿಷ್ಯನಾಗಿ ಪಾಂಡಿಚೆರಿಯ ಅವರ ಆಶ್ರಮದಲ್ಲಿ ಬಹಳಷ್ಟು ಕಾಲ ತಂಗಿದ್ದರು. ಸುಮಾರು 28 ಸ್ವಂತ ಕೃತಿಗಳನ್ನು ಬರೆದ ಇವರು 1968ರಲ್ಲಿ ಚಿದಂಬರ ಎನ್ನುವ ಕವನ ಸಂಕಲಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡರು. ಇದಲ್ಲದೆ ಪದ್ಮಭೂಷಣ ಇತ್ಯಾದಿ ಅನೇಕ ಮಹಾಪ್ರಶಸ್ತಿಗಳನ್ನು ಪಡೆದುಕೊಂಡವರು. ತನ್ನ ಕೊನೆಯ ವರ್ಷಗಳನ್ನು ಪ್ರಯಾಗರಾಜದಲ್ಲಿ ಕಳೆದ ಇವರು 1977 ಡಿಸೆಂಬರ್ 28ರಂದು ಇಹಲೋಕ ತ್ಯಜಿಸಿದರು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪೊಲೀಸ್ ಸೇವೆಯ ಹೆಗ್ಗಳಿಕೆ: ಉಡುಪಿ ನಾಲ್ವರ ಕನಸಿಗೆ ರಾಜ್ಯದ ಗೌರವ!

ರಾಜ್ಯ ಪೊಲೀಸ್ ಇಲಾಖೆಯಿಂದ ಸೇವಾ ಶ್ರೇಷ್ಠತೆಗಾಗಿ ಈವರ್ಷ ಪ್ರಾರಂಭಿಸಲಾದ 'ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ' ಪ್ರಶಸ್ತಿಗೆ ಉಡುಪಿ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ತೆರಿಗೆ ಹಣ ಎಲ್ಲಿಗೆ ಹೋಯಿತು? – ಕುಮಾರಸ್ವಾಮಿ

ಬೆಂಗಳೂರು ನಗರದ ಅಸಹನೀಯ ಜಲಜಂಕಾಟ ಮತ್ತು ಮೂಲಸೌಕರ್ಯ ಸ್ಥಿತಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ಟೀಕೆ ನಡೆಸಿದ್ದಾರೆ.

ಪಾಕಿಸ್ತಾನದ ಮುಖವಾಡ ಕಿತ್ತೊಗೆಯಲು ಸಿದ್ಧ! ಕನ್ನಡಿಗ ಸಂಸದರ ಹೋರಾಟ!

ಪಾಕಿಸ್ತಾನದಿಂದ ಪ್ರಾಯೋಜಿತ ಭಯೋತ್ಪಾದನೆಯ ನಿಜವಾದ ಮುಖವನ್ನು ಜಗತ್ತಿಗೆ ಬಹಿರಂಗಪಡಿಸಲು ಮತ್ತು ಭಾರತದ ರಾಜತಾಂತ್ರಿಕ ನಿಲುವನ್ನು ವಿಶ್ವದ ಮುಂದೆ ವಿವರಿಸಲು ಕೇಂದ್ರ ಸರ್ಕಾರ ಸರ್ವಪಕ್ಷೀಯ ಸಂಸದರ ನಿಯೋಗಗಳನ್ನು ರಚಿಸಿದೆ

ಧರ್ಮಸ್ಥಳದ ಯುವತಿಯ ಆತ್ಮಹತ್ಯೆ: ಪ್ರಾಧ್ಯಾಪಕನೊಂದಿಗಿನ ಪ್ರೇಮ ವೈಫಲ್ಯ ಕಾರಣ?

ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ (27) ಅವರ ನಿಗೂಢ ಸಾವಿನ ಹಿಂದೆ ಪ್ರೇಮ ವೈಫಲ್ಯವೇ ಕಾರಣವಿರಬಹುದು ಎಂದು ಪೊಲೀಸರು ತನಿಖೆಯಲ್ಲಿ ಬಯಲು ಮಾಡಿದ್ದಾರೆ