spot_img

ದಿನ ವಿಶೇಷ – ಶಂಕರ ಜಯಂತಿ ರಾಮಾನುಜ ಜಯಂತಿ

Date:

spot_img

ಶಂಕರ ಜಯಂತಿ ರಾಮಾನುಜ ಜಯಂತಿ

ಭಾರತ ಕಾಲಕಾಲಕ್ಕೆ ಬದಲಾವಣೆಯನ್ನು ಪಡೆದುಕೊಂಡು ಸಾಗುವ ದೇಶ. ಈ ಬದಲಾವಣೆ ತರುವವರನ್ನು ಆಚಾರ್ಯರು ಎಂದು ಗುರುತಿಸುತ್ತದೆ. ಅಂತಹ ಆಚಾರ್ಯರಲ್ಲಿ ಮೊದಲಿಗರಾಗಿ ಶಂಕರರು ಹಾಗೂ ಎರಡನೇಯವರಾಗಿ ರಾಮಾನುಜರು ಗುರುತಿಸಲ್ಪಡುತ್ತಾರೆ. ಇಬ್ಬರ ಜಯಂತಿಯೂ ಕೂಡ ಇವತ್ತೇಯಾಗಿದೆ. ಭಾರತವನ್ನು ಹಾಗೂ ಸನಾತನ ಧರ್ಮವನ್ನು ಮೊತ್ತ ಮೊದಲು ಪರಕೀಯರಿಂದ ರಕ್ಷಿಸಿದವರು ಶಂಕರಾಚಾರ್ಯರು. ಅಷ್ಟೇ ಅಲ್ಲದೆ ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ತೀರ್ಥಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದವರು. ಭಾರತಕ್ಕೆ ಅದ್ವೈತ ಎನ್ನುವ ಹೊಸ ತತ್ವವನ್ನು ತೋರಿಸಿಕೊಟ್ಟರು. ಸನಾತನ ಧರ್ಮದ ಎಲ್ಲಾ ದೇವತೆಗಳಿಗೂ ಪ್ರಾಧಾನ್ಯತೆಯನ್ನು ಕೊಟ್ಟು ಆರಾಧನೆಗೆ ಬಹಳ ಮಹತ್ವವನ್ನು ಕೊಟ್ಟರು.

ತನ್ನ 32 ವರ್ಷದ ಅಲ್ಪಾಯುಷ್ಯದಲ್ಲಿಯೇ ಅದ್ಭುತ ಸಾಧನೆ ತೋರಿದವರು.
ಅನಂತರದಲ್ಲಿ ಬಂದ ರಾಮಾನುಜರು ವಿಷ್ಣುವಿನ ಪಾರಮ್ಯವನ್ನು ಹೇಳುವುದರೊಂದಿಗೆ ಹಲವಾರು ವೈಷ್ಣವ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದರು. ದೇಶದಲ್ಲಿ ಇವತ್ತು ಕಾಣುವ ಜಾತೀಯತೆಯ ವಿರುದ್ಧದ ಯಾವ ಹೋರಾಟವಿದೆಯೋ ಅದನ್ನು ಆ ಕಾಲದಲ್ಲಿ ಮಾಡಿದವರು ರಾಮಾನುಜರು. ಸುಮಾರು 120 ವರ್ಷಗಳ ಸುದೀರ್ಘ ಜೀವನವನ್ನು ನಡೆಸಿ ಇವತ್ತಿಗೂ ದೇಹ ರೂಪದಲ್ಲಿ ಶ್ರೀರಂಗದಲ್ಲಿದ್ದಾರೆ ಎಂದುವ ನಂಬಿಕೆ ಇದೆ. ಈ ದೇಶದ ವಿಶಿಷ್ಟತೆ ಇದೇಯಾಗಿದೆ. ಯಾವ ಕಾಲಕ್ಕೆ ಧರ್ಮಚ್ಯುತಿಯಾಗುವ ಸಂದರ್ಭ ಬರುತ್ತದೆಯೋ ಆವಾಗಲೆಲ್ಲ ಆಚಾರ್ಯರು ಹುಟ್ಟಿ ಬರುತ್ತಾರೆ. ಈಗವು ಕೂಡ ಹಿಂದೂ ಎಂದರೆ ಸಾಯುವ ಸಂದರ್ಭದಲ್ಲಿದ್ದೇವೆ. ದಿವ್ಯ ಶಕ್ತಿಗಳು ಆಚಾರ್ಯ ರೂಪದಲ್ಲಿ ಹುಟ್ಟಿ ಬರಬೇಕು ಎನ್ನುವ ಪ್ರಾರ್ಥನೆ ಮಾಡೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.

ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಇಂದಿನಿಂದ ಆರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆ

ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.