
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ಲೋಕದ ದೇವರು ಎಂದೇ ಗುರುತಿಸಲ್ಪಟ್ಟವರು. ಕ್ರಿಕೆಟ್ ತಿಳಿದಿರಲಿ, ತಿಳಿಯದೆ ಇರಲಿ, ಆದರೆ ಸಚಿನ್ ಹೆಸರು ತಿಳಿದೇ ಇರುತ್ತದೆ ಅಷ್ಟರಮಟ್ಟಿಗೆ ಹೆಸರು ಮೂಡಿಸಿದವರು. ಶ್ರದ್ಧೆ, ಆಸಕ್ತಿ, ಪರಿಶ್ರಮ, ಹಾಗೂ ವಿನಯ ಮತ್ತು ಪ್ರಾಮಾಣಿಕತೆ ಈ ಗುಣಗಳಿದ್ದರೆ ಯಾವುದನ್ನು ಕೂಡ ನಾವು ಸಾಧ್ಯವಾಗಿಸಬಹುದು ಎನ್ನುವುದಕ್ಕೆ ಸಚಿನ್ ನಿದರ್ಶನ. 11ನೇ ವಯಸ್ಸಿಗೆ ಕ್ರಿಕೆಟಿಗೆ ಕಾಲಿಟ್ಟ ಇವರು ತನ್ನ ಹದಿನಾರನೆಯ ವಯಸ್ಸಿನಲ್ಲಿ ಭಾರತದ ಪ್ರತಿನಿಧಿಯಾಗಿ ಆಡಲು ತೊಡಗಿದ್ದಾರೆ. ಭಾರತ ರತ್ನ ಪಡೆದ ಮೊದಲ ಆಟಗಾರ ಹಾಗೂ ತನ್ನ ಅತ್ಯಂತ ಕಿರಿಯಸ್ಸಿನಲ್ಲಿಯೇ ಭಾರತ ರತ್ನವನ್ನು ಪಡೆದುಕೊಂಡ ಹೆಗ್ಗಳಿಕೆ ಕೂಡ ಇವರಿಗೆ ಇದೆ.

ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ಸರದಾರ ಎಂದೇ ಗುರುತಿಸಲ್ಪಟ್ಟಿದ್ದಾರೆ. 90ರ ಆಸು ಪಾಸಿನಲ್ಲಿ ಔಟ್ ಆಗುವುದರಿಂದ ಹಿಡಿದು ಶತಕಗಳ ತನಕ ಅಲ್ಲದೆ ಸಾವಿರಾರು ರನ್ನುಗಳ ದಾಖಲೆಗಳಿದೆ. ಅದೆಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಕೂಡ ಕೊನೆಯ ತನಕವು ವಿಧೇಯತೆಯಿಂದ ನಾಯಕನೊಂದಿಗೆ ಹಾಗೂ ತನ್ನ ಸಹ ಆಟಗಾರರೊಂದಿಗೆ ಬೆರೆತು ನಲಿಯುತ್ತಿದ್ದರು. ಎಲ್ಲಿಯೂ ಕೂಡ ಸಿಟ್ಟನ್ನು ಹಾಗೂ ಮನಸ್ಸಿನ ಹಿಡಿತವನ್ನು ತಪ್ಪಿಸಿಕೊಂಡು ವ್ಯವಹರಿಸಿದ್ದಿಲ್ಲ. ತಾಳ್ಮೆ ಹಾಗೂ ವಿನಯದ ಸಾಕಾರ ಮೂರ್ತಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ