spot_img

ದಿನ ವಿಶೇಷ – ಪೊಹೆಲಾ ಬೋಯಿಶಾಖ್

Date:

ಪೊಹೆಲಾ ಬೋಯಿಶಾಖ್

ಈ ದಿವಸ ಪಶ್ಚಿಮ ಬಂಗಾಳ, ತ್ರಿಪುರಾ, ಜಾರ್ಖಂಡ್ ಮತ್ತು ಅಸ್ಸಾಂ (ಬರಾಕ್ ಕಣಿವೆ) ಗಳಲ್ಲಿ ಏಪ್ರಿಲ್ 15 ರಂದು ಚಂದ್ರಸೌರ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಬಂಗಾಳಿ ವ್ಯವಹಾರ ವರ್ಗವು ತನ್ನ ಹಣಕಾಸು ವರ್ಷವನ್ನು ಸಹ ಈ ದಿನದಂದು ಪ್ರಾರಂಭಿಸುತ್ತದೆ. ಈ ದೇಶದ ಸಂಸ್ಕೃತಿ ಹೇಗೆ ಒಂದಕ್ಕೆ ಒಂದು ಬೆಸೆದು ಕೊಂಡಿದೆ ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷಿಗಳೊಂದಿಗೆ ಇದು ಕೂಡ ಗಮನೀಯವಾದದ್ದು.

ಹಿಂದಿಯಲ್ಲಿ ಪೆಹಲಾ ಎಂದರೆ ಮೊದಲು ಎಂದು ಅರ್ಥ ಹಾಗೆಯೇ ಸಂಸ್ಕೃತದ ವೈಶಾಖ ಅಪಬ್ರ0ಶವಾಗಿ ಬೋಯಿಶಾಖ್ ಎಂದಾಗಿದೆ. ಆದ್ದರಿಂದ ವೈಶಾಖ ಮಾಸದ ಮೊದಲ ದಿವಸ ಎನ್ನುವುದು ಈ ಶಬ್ದದ ಹಿಂದಿರುವ ಅರ್ಥ. ಬಾಂಗ್ಲಾದೇಶ ಕೂಡ ಈ ದೇಶದ ಭಾಗವಾದ್ದರಿಂದ ಈ ದಿವಸವನ್ನು ವಿಶೇಷವಾಗಿ ಆಚರಿಸುತ್ತಾರೆ. ನಮ್ಮಲ್ಲಿ ಮೇಲೆ ಹೇಳಿದ ರಾಜ್ಯಗಳಲ್ಲಿ ನಮ್ಮ ಯುಗಾದಿಯ ವಾತಾವರಣ ಕಂಡುಬರುತ್ತದೆ. ನಮ್ಮ ದೇಶದ ಹೊಸ ವರ್ಷದ ದಿನಗಳು ಹೇಗೆ ಪ್ರಕೃತಿಗೆ ಪೂರಕವಾಗಿದೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಷ್ಟೇ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಗುಡ್ ಬ್ಯಾಡ್ ಅಗ್ಲಿ’ ಹಿಟ್ ಆಗುತ್ತಿದ್ದಂತೇ ಕಾನೂನು ಸಂಕಷ್ಟ! ಇಳಯರಾಜರಿಂದ ಅಜಿತ್ ಚಿತ್ರತಂಡಕ್ಕೆ ನೋಟೀಸ್

ಟಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅಭಿನಯಿಸಿರುವ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ನಡೆಸುತ್ತಿರುವ ನಡುವೆಯೇ ಕಾನೂನು ಸವಾಲನ್ನು ಎದುರಿಸಿದೆ.

ದಿನ ವಿಶೇಷ – ಭಾರತದಲ್ಲಿ ಮೊದಲು ರೈಲು ಓಡಿದ ದಿವಸ

ಭಾರತದ ಬಹು ಮುಖ್ಯ ಭಾಗವಾಗಿ ಗುರುತಿಸಿಕೊಂಡಿರುವುದು ರೈಲು ವ್ಯವಸ್ಥೆ.1853 ರ ಏಪ್ರಿಲ್ 16 ರಂದು, ಮೊದಲ ಪ್ರಯಾಣಿಕ ರೈಲು ಮುಂಬಯಿಯ ಬೋರಿ ಬಂದರ್ ಮತ್ತು ಥಾಣೆ ನಡುವೆ 34 ಕಿ.ಮೀ ದೂರದಲ್ಲಿ ಓಡಿತು.

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್: ಭದ್ರತೆ ಹೆಚ್ಚಳ, ತನಿಖೆ ಪ್ರಾರಂಭ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರವನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಂದ ಬೆದರಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸೈಬರ್ ಪೊಲೀಸರಿಂದ ತನಿಖೆ ಆರಂಭವಾಗಿದೆ.

ಮಳೆಗಾಲಕ್ಕೆ ಮುನ್ನೆಚ್ಚರಿಕಾ ಸನ್ನದ್ಧತೆ: ಉಡುಪಿಯಲ್ಲಿ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಕಾಲಿಕ ತಯಾರಿ ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಅವರು ಉಡುಪಿ ನಗರಸಭೆಯ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಸೂಚನೆ ನೀಡಿದ್ದಾರೆ.