spot_img

ದಿನ ವಿಶೇಷ – ರಾಷ್ಟ್ರೀಯ ದಾದಿಯರ ದಿನ

Date:

spot_img

ರಾಷ್ಟ್ರೀಯ ದಾದಿಯರ ದಿನ

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಂಗುವ ಪರಿಸ್ಥಿತಿ ಬಂದಾಗ ಸಾಧಾರಣ ಎಲ್ಲರಿಗೂ ಅಲ್ಲಿ ಬಹಳಷ್ಟು ಉಪಕಾರ ಮಾಡುವುದು ಅಲ್ಲಿಯ ನರ್ಸ್ ಗಳು. ಅದೆಷ್ಟೋ ದಾದಿಯರು ಸ್ವಂತ ಮನೆಯವರಂತೆ ರೋಗಿಗಳನ್ನು ನೋಡಿಕೊಳ್ಳುತ್ತಾರೆ. ಹೆಣ್ತನ ಎನ್ನುವುದೇ ತ್ಯಾಗ ಹಾಗೂ ಕ್ಷಮಾ ಗುಣಕ್ಕೆ ಪ್ರತೀಕ. ಆದ್ದರಿಂದ ಅವರಿಗೆ ಶುಶ್ರೂಷೆ ಮಾಡುವ ಗುಣ ರಕ್ತಗತವಾಗಿ ಬಂದಿರುತ್ತದೆ. ಅದರಲ್ಲೂ ಆಸ್ಪತ್ರೆಯ ದಾದಿಯರಂತೂ ತಮ್ಮನ್ನು ತಾವು ಮನೆಯಲ್ಲಿ ಮಾತ್ರ ಸಮರ್ಪಿಸಿಕೊಳ್ಳದೆ ವೃತ್ತಿ ಕ್ಷೇತ್ರದಲ್ಲೂ ಸೇವಾ ಮನೋಭಾವದಿಂದ ತಾಯ್ತನದ ಗುಣವನ್ನು ಉಣಬಡಿಸುತ್ತಾರೆ. ಆದ್ದರಿಂದ ಅವರ ಗೌರವದ ಪ್ರತೀಕವಾಗಿ ಹಾಗೂ ಅವರ ಬಗ್ಗೆ ಕಾಳಜಿಯ ಸಂಕೇತವಾಗಿ ಈ ದಿವಸವನ್ನು ಅವರಿಗಾಗಿ ಮೀಸಲಾಗಿಟ್ಟಿದೆ. ನೈಟಿಂಗೇಲ್ ಎನ್ನುವ ದಾದಿಯ ಸ್ವರ್ಣಾರ್ಥವಾಗಿ ಈ ದಿವಸವನ್ನು ತೀರ್ಮಾನಿಸಿದ್ದಾರೆ. ನಿಜವಾಗಿ ಈ ಬಗ್ಗೆ ಒಂದು ವಾರವನ್ನು ಮೀಸಲಿಟ್ಟಿದ್ದಾರೆ. ಅದರಲ್ಲಿ ಆರನೇ ತಾರೀಕು ಪ್ರಧಾನವಾಗಿ ಗುರುತಿಸಿಕೊಂಡಿದೆ.

ಅಮೆರಿಕದಂತಹ ದೇಶಗಳಲ್ಲಿ ತಮ್ಮನ್ನು ನೋಡಿಕೊಂಡ ದಾದಿಯರನ್ನು ಕಂಡು ಭೇಟಿಯಾಗಿ ಅವರಿಗೆ ಉಡುಗೊರೆಯನ್ನು ಕೊಟ್ಟು ಬರುವ ಸಂಪ್ರದಾಯವಿದೆ. ಇವತ್ತು ಮನುಷ್ಯ ಎಲ್ಲಿಗೆ ಬೇಕಾದರೂ ಹೋಗದೆ ಇರುತ್ತೇನೆ ಎಂದು ಕೂರಬಹುದು. ಆದರೆ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೂಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮನುಷ್ಯನ ಜೀವನದೊಂದಿಗೆ ಆಸ್ಪತ್ರೆ, ಹೊಸೆದುಕೊಂಡಿದೆ. ಆಸ್ಪತ್ರೆಯಲ್ಲಿ ನಮ್ಮನ್ನು ನೋಡಿಕೊಳ್ಳುವ ಎಲ್ಲಾ ಜವಾಬ್ದಾರಿ ಕೂಡ ದಾದಿಯರಿಗೆ ಸಂಬಂಧಪಟ್ಟದ್ದು ಆದರಿಂದ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲೇಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.

ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಇಂದಿನಿಂದ ಆರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆ

ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.