spot_img

ದಿನ ವಿಶೇಷ – ರಾಷ್ಟ್ರೀಯ ದಾದಿಯರ ದಿನ

Date:

ರಾಷ್ಟ್ರೀಯ ದಾದಿಯರ ದಿನ

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಂಗುವ ಪರಿಸ್ಥಿತಿ ಬಂದಾಗ ಸಾಧಾರಣ ಎಲ್ಲರಿಗೂ ಅಲ್ಲಿ ಬಹಳಷ್ಟು ಉಪಕಾರ ಮಾಡುವುದು ಅಲ್ಲಿಯ ನರ್ಸ್ ಗಳು. ಅದೆಷ್ಟೋ ದಾದಿಯರು ಸ್ವಂತ ಮನೆಯವರಂತೆ ರೋಗಿಗಳನ್ನು ನೋಡಿಕೊಳ್ಳುತ್ತಾರೆ. ಹೆಣ್ತನ ಎನ್ನುವುದೇ ತ್ಯಾಗ ಹಾಗೂ ಕ್ಷಮಾ ಗುಣಕ್ಕೆ ಪ್ರತೀಕ. ಆದ್ದರಿಂದ ಅವರಿಗೆ ಶುಶ್ರೂಷೆ ಮಾಡುವ ಗುಣ ರಕ್ತಗತವಾಗಿ ಬಂದಿರುತ್ತದೆ. ಅದರಲ್ಲೂ ಆಸ್ಪತ್ರೆಯ ದಾದಿಯರಂತೂ ತಮ್ಮನ್ನು ತಾವು ಮನೆಯಲ್ಲಿ ಮಾತ್ರ ಸಮರ್ಪಿಸಿಕೊಳ್ಳದೆ ವೃತ್ತಿ ಕ್ಷೇತ್ರದಲ್ಲೂ ಸೇವಾ ಮನೋಭಾವದಿಂದ ತಾಯ್ತನದ ಗುಣವನ್ನು ಉಣಬಡಿಸುತ್ತಾರೆ. ಆದ್ದರಿಂದ ಅವರ ಗೌರವದ ಪ್ರತೀಕವಾಗಿ ಹಾಗೂ ಅವರ ಬಗ್ಗೆ ಕಾಳಜಿಯ ಸಂಕೇತವಾಗಿ ಈ ದಿವಸವನ್ನು ಅವರಿಗಾಗಿ ಮೀಸಲಾಗಿಟ್ಟಿದೆ. ನೈಟಿಂಗೇಲ್ ಎನ್ನುವ ದಾದಿಯ ಸ್ವರ್ಣಾರ್ಥವಾಗಿ ಈ ದಿವಸವನ್ನು ತೀರ್ಮಾನಿಸಿದ್ದಾರೆ. ನಿಜವಾಗಿ ಈ ಬಗ್ಗೆ ಒಂದು ವಾರವನ್ನು ಮೀಸಲಿಟ್ಟಿದ್ದಾರೆ. ಅದರಲ್ಲಿ ಆರನೇ ತಾರೀಕು ಪ್ರಧಾನವಾಗಿ ಗುರುತಿಸಿಕೊಂಡಿದೆ.

ಅಮೆರಿಕದಂತಹ ದೇಶಗಳಲ್ಲಿ ತಮ್ಮನ್ನು ನೋಡಿಕೊಂಡ ದಾದಿಯರನ್ನು ಕಂಡು ಭೇಟಿಯಾಗಿ ಅವರಿಗೆ ಉಡುಗೊರೆಯನ್ನು ಕೊಟ್ಟು ಬರುವ ಸಂಪ್ರದಾಯವಿದೆ. ಇವತ್ತು ಮನುಷ್ಯ ಎಲ್ಲಿಗೆ ಬೇಕಾದರೂ ಹೋಗದೆ ಇರುತ್ತೇನೆ ಎಂದು ಕೂರಬಹುದು. ಆದರೆ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೂಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮನುಷ್ಯನ ಜೀವನದೊಂದಿಗೆ ಆಸ್ಪತ್ರೆ, ಹೊಸೆದುಕೊಂಡಿದೆ. ಆಸ್ಪತ್ರೆಯಲ್ಲಿ ನಮ್ಮನ್ನು ನೋಡಿಕೊಳ್ಳುವ ಎಲ್ಲಾ ಜವಾಬ್ದಾರಿ ಕೂಡ ದಾದಿಯರಿಗೆ ಸಂಬಂಧಪಟ್ಟದ್ದು ಆದರಿಂದ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲೇಬೇಕು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದುಬೈನಲ್ಲಿ ಹೃದಯಾಘಾತದಿಂದ ಉದ್ಯಮಿ ಎಡಕ್ಕಾನ ರಾಜಾರಾಮ ಭಟ್ ನಿಧನ

ಸುಳ್ಯ ತಾಲ್ಲೂಕಿನ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆಯ ಮೂಲವಾಸಿ ಉದ್ಯಮಿ ಎಡಕ್ಕಾನ ರಾಜಾರಾಮ ಭಟ್‌ ಅವರು ಇಂದು (ಮಂಗಳವಾರ) ಮುಂಜಾನೆ ದುಬೈನಲ್ಲಿ ಹೃದಯಾಘಾತದಿಂದ ಅಗಲಿದ್ದಾರೆ.

ದೈವಸೇವೆಯಲ್ಲಿದ್ದಾಗಲೇ ಇಹಲೋಕವನ್ನು ತ್ಯಜಿಸಿದ ಎಣ್ಣೆಹೊಳೆಯ ಕ್ಷೇತ್ರ ಪುರೋಹಿತ ಶ್ರೀ ಜಗದೀಶ್ ಭಟ್

ಕ್ಷೇತ್ರದ ಪವಿತ್ರ ಸೇವೆಯಲ್ಲಿ ನಿರತರಾಗಿದ್ದ ಪ್ರಖ್ಯಾತ ಪುರೋಹಿತ ಶ್ರೀ ಜಗದೀಶ್ ಭಟ್ ಅವರು ದೇವರ ಸೇವೆ ಮಾಡುತ್ತಿದ್ದ ಸಮಯದಲ್ಲೇ ಇಹಲೋಕವನ್ನು ತ್ಯಜಿಸಿದ್ದು, ಸಮಸ್ತ ಸಮುದಾಯದಲ್ಲಿ ದುಃಖದ ಅಲೆ.

ಮೇ 6 : ಜಿಲ್ಲಾ ವ್ಯಾಪ್ತಿಯಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಗಡಿಪಾರಿಗೆ ಕ್ರಮ ಕೈಗೊಳ್ಳಲು ಜಿಲ್ಲಾ ಬಿಜೆಪಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ.

ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು ತಕ್ಷಣ ಭಾರತದಿಂದ ತಮ್ಮ ದೇಶಕ್ಕೆ ತೆರಳುವಂತೆ ಕೇಂದ್ರ ಸರಕಾರ ಈಗಾಗಲೇ ಸೂಚನೆಯನ್ನು ನೀಡಿದೆ

ಕಾರ್ಕಳ ಬಂಟರ ಸಂಘದ ನೇತೃತ್ವದಲ್ಲಿ ಸುಹಾಸ್ ಶೆಟ್ಟಿ ಕುಟುಂಬಕ್ಕೆ 1 ಲಕ್ಷ ರೂ. ಸಹಾಯಧನ

ಮತಾಂಧರಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀ ಸುಹಾಸ್ ಶೆಟ್ಟಿ ಮನೆಗೆ ಕಾರ್ಕಳ ಬಂಟರ ಸಂಘದ ಪ್ರಮುಖರು ಭೇಟಿ ನೀಡಿದರು