spot_img

ದಿನ ವಿಶೇಷ – ರಾಷ್ಟ್ರೀಯ ವ್ಯಾಯಾಮ ದಿನ

Date:

ರಾಷ್ಟ್ರೀಯ ವ್ಯಾಯಾಮ ದಿನ

ಯಾವ ವ್ಯಕ್ತಿ ದಿನದಲ್ಲಿ ಸ್ವಲ್ಪವೂ ಕೂಡ ವ್ಯಾಯಾಮ ಮಾಡುವುದಿಲ್ಲವೋ ಆತನಲ್ಲಿ ಉದಾಸೀನ ಮನೆ ಮಾಡಿರುತ್ತದೆ. ಅಷ್ಟೇ ಅಲ್ಲದೆ ತಿಂದ ಆಹಾರ ಕರಗದೆ ಕೊಬ್ಬು ಜಾಸ್ತಿಯಾಗಿ ಆರೋಗ್ಯ ಕೂಡ ಕೆಡುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲಂತೂ ಇವತ್ತಿನ ಆಹಾರಗಳು ಬಹಳ ಬೇಗನೆ ಕೊಬ್ಬುಗಳನ್ನು ತರುತ್ತದೆ. ಅಂತದ್ದರಲ್ಲಿ ಎಷ್ಟು ನಡೆಯುತ್ತೇವೆಯೋ ವ್ಯಾಯಾಮ ಮಾಡುತ್ತೇವೆಯೋ ಅಷ್ಟು ಆರೋಗ್ಯವಾಗಿರಬಹುದು. ಆ ಒಂದು ಉದ್ದೇಶದಿಂದ ಇವತ್ತಿನ ದಿನ ಮಟ್ಟದಲ್ಲಿ ವ್ಯಾಯಾಮದ ದಿವಸ ಎನ್ನುವ ಮೂಲಕ ವ್ಯಾಯಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ.

ಇತ್ತೀಚೆಗಿನ ತನಕವೂ ಕೂಡ ನಮ್ಮ ಮನೆಯ ಎಲ್ಲಾ ಕೆಲಸಗಳನ್ನು ಸ್ವಯಂ ನಾವೇ ಮಾಡುವ ಪರಿಪಾಠವಿತ್ತು. ಉದಾಹರಣೆಗೆ ನೆಲ ಒರೆಸುವುದು ಬಟ್ಟೆ ಒಗೆಯುವುದು, ಬೇಕಾದ ಸಾಮಾನುಗಳನ್ನು ತರುವುದು ಇತ್ಯಾದಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದ ಕಾಲ ಈಗ ಬದಲಾಗಿದೆ. ಎಲ್ಲದ್ದಕ್ಕೂ ಅದರದ್ದೆಯಾದ ಯಂತ್ರಗಳು ಹುಟ್ಟಿಕೊಂಡಿವೆ. ಆ ಮೂಲಕ ಮನೆಯ ಯಾವ ಕೆಲಸಗಳು ಕೂಡ ಮಾಡದೆ ಬೆಳೆಯುತ್ತಿದ್ದೇವೆ. ಆ ಕಾರಣದಿಂದಲೇ ವ್ಯಾಯಾಮಕ್ಕೆ ಇತ್ತು ಮಹತ್ವವಿರುವುದು. ಒಂದು ವೇಳೆ ನಮ್ಮ ಕೆಲಸಗಳನ್ನು ನಾವೇ ಮಾಡುವುದಿದ್ದರೆ ಇದಕ್ಕಿಂತ ದೊಡ್ಡ ವ್ಯಾಯಾಮ ಬೇರಿಲ್ಲ. ಅದಿಲ್ಲದೆ ಇರುವುದರಿಂದ ಕನಿಷ್ಠ ಪಕ್ಷ ವ್ಯಾಯಾಮವಲ್ಲದಿದ್ದರೆ ನಡೆಯುವುದನ್ನು ರೂಢಿಸಿಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಮೊದಲ ಮೆಟ್ಟಿಲು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕ್ಯಾಪ್ಟನ್ ವಿಕ್ರಮ್ ಬತ್ರಾ ಜನ್ಮದಿನ

ನಮ್ಮ ದೇಶದ ಇತಿಹಾಸದಲ್ಲಿ ದೇಶಭಕ್ತಿ ಮತ್ತು ಧೈರ್ಯದ ಸಂಕೇತವಾಗಿ ನಿಂತಿರುವ ಹೆಸರುಗಳಲ್ಲಿ ಕ್ಯಾಪ್ಟನ್ ವಿಕ್ರಮ್ ಬತ್ರಾ ಅವರದ್ದು ಅಮರ

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

‘ಸೇವಾ ಪಾಕ್ಷಿಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ, 'ಕ್ರಿಯೇಟಿವ್ ಗುರುದೇವೋಭವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.