spot_img

ದಿನ ವಿಶೇಷ – ಗುರುಪರಿವರ್ತನ

Date:

ಗುರುಪರಿವರ್ತನ


ಇವತ್ತು ಗುರು ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಪಥವನ್ನು ಬದಲಿಸುತಿದ್ದಾನೆ. ಹೇಗೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಮತವನ್ನು ಬದಲಿಸುವುದಕ್ಕೆ ತಿಂಗಳು ಹಾಗೂ ವರ್ಷಗಳು ಉರುಳುತ್ತದೆಯೋ ಅದೇ ರೀತಿ ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಗುರುವಿನ ಕಾಲಮಾನದ ಪ್ರಕಾರ ಒಂದು ವರ್ಷ ಕಳೆದಿರುತ್ತದೆ. ಹೇಗೆ ಸೂರ್ಯನ ಸಂಚಾರ ಕ್ರಮ ಅನುಸರಿಸಿ ಸಂವತ್ಸರವನ್ನು ತೀರ್ಮಾನಿಸುತ್ತೇವೆಯೋ, ಅದೇ ರೀತಿಯಲ್ಲಿ ಗುರುವಿನ ಸಂಚಾರ ಕ್ರಮವನ್ನು ಅನುಸರಿಸಿ ತೀರ್ಮಾನಿಸುವ ಕಾಲಮಾನಕ್ಕೆ ಪರಿವತ್ಸರ ಎಂದು ಹೆಸರು.

ಆ ರೀತಿಯಲ್ಲಿ ನಾವು ಕಂಡುಕೊಂಡರೆ ಇವತ್ತು ಪರಿವತ್ಸರದ ಯುಗಾದಿ ಎಂದು ತಿಳಿದುಕೊಳ್ಳಬೇಕು. ಮಿಥುನ ರಾಶಿಯ ಗುರು, ಬುಧನ ಕ್ಷೇತ್ರದಲ್ಲಿ ಇರುವುದರಿಂದ ಬೌದ್ಧಿಕವಾದ ವಿಚಾರದಲ್ಲಿ ಬಹಳ ಬದಲಾವಣೆಯನ್ನು ತರುತ್ತಾನೆ. ಇನ್ನು ಒಂದು ವರ್ಷಗಳಷ್ಟು ಕಾಲ ಇಲ್ಲಿರುವ ಗುರು ಅವರವರ ರಾಶಿಯ ಪ್ರಕಾರ ಅನುಕೂಲ ಪ್ರತಿಕೂಲತೆಯ ಮೂಲಕ ಲಾಭಾಲಾಭಗಳನ್ನು ಸುಖ ದುಃಖಗಳನ್ನು ಒದಗಿಸಿಕೊಡುತ್ತಾನೆ. ಗುರುವಿನ ಅನುಕೂಲಗಳು ಎಲ್ಲರಿಗೂ ದೊರಕಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಧಾನಿ ಮೋದಿ ಪಂಜಾಬ್ ವಾಯುಸೇನಾ ತಾಣಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ

ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗಿನ ಜಾವ ಪಂಜಾಬ್‌ನ ಆದಂಪುರ ವಾಯುಸೇನಾ ತಾಣಕ್ಕೆ (AFS ಆದಂಪುರ) ಭೇಟಿ ನೀಡಿದರು

ಲವಂಗದ ನಿತ್ಯ ಸೇವನೆ: ಮಧುಮೇಹ ನಿಯಂತ್ರಣದಿಂದ ಹೃದಯಾರೋಗ್ಯದವರೆಗೆ ಅನೇಕ ಪ್ರಯೋಜನಗಳು

ಮಸಾಲೆ ಪದಾರ್ಥವಾದ ಲವಂಗವು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಅಮೂಲ್ಯವಾದ ಸಹಾಯಕ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಿಟ್ಟೆ ಕಾಲೇಜ್ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣ ಸರಕಾರ ಗಂಬೀರವಾಗಿ ಪರಿಗಣಿಸಿ ತನಿಖೆ ನಡೆಸುತಿದೆ

ನಿಟ್ಟೆ ವಿದ್ಯಾ ಸಂಸ್ಥೆಯ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣವನ್ನು ಸರಕಾರ ಗಂಬೀರವಾಗಿ ಪರಿಗಣಿಸಿದೆ

ಪಾಕ್ ಗಡಿಯಿಂದ ಆಂಧ್ರ-ತೆಲಂಗಾಣದ 476 ನಾಗರಿಕರ ರಕ್ಷಣೆ

ಪಾಕಿಸ್ತಾನ್‌ ಮತ್ತು ಭಾರತದ ನಡುವಿನ ಭಯೋತ್ಪಾದನಾ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ, ಗಡಿ ಪ್ರದೇಶಗಳಲ್ಲಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 476 ನಾಗರಿಕರನ್ನು ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ.