spot_img

ದಿನ ವಿಶೇಷ – ಗುರುಪರಿವರ್ತನ

Date:

spot_img

ಗುರುಪರಿವರ್ತನ


ಇವತ್ತು ಗುರು ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಪಥವನ್ನು ಬದಲಿಸುತಿದ್ದಾನೆ. ಹೇಗೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಮತವನ್ನು ಬದಲಿಸುವುದಕ್ಕೆ ತಿಂಗಳು ಹಾಗೂ ವರ್ಷಗಳು ಉರುಳುತ್ತದೆಯೋ ಅದೇ ರೀತಿ ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಗುರುವಿನ ಕಾಲಮಾನದ ಪ್ರಕಾರ ಒಂದು ವರ್ಷ ಕಳೆದಿರುತ್ತದೆ. ಹೇಗೆ ಸೂರ್ಯನ ಸಂಚಾರ ಕ್ರಮ ಅನುಸರಿಸಿ ಸಂವತ್ಸರವನ್ನು ತೀರ್ಮಾನಿಸುತ್ತೇವೆಯೋ, ಅದೇ ರೀತಿಯಲ್ಲಿ ಗುರುವಿನ ಸಂಚಾರ ಕ್ರಮವನ್ನು ಅನುಸರಿಸಿ ತೀರ್ಮಾನಿಸುವ ಕಾಲಮಾನಕ್ಕೆ ಪರಿವತ್ಸರ ಎಂದು ಹೆಸರು.

ಆ ರೀತಿಯಲ್ಲಿ ನಾವು ಕಂಡುಕೊಂಡರೆ ಇವತ್ತು ಪರಿವತ್ಸರದ ಯುಗಾದಿ ಎಂದು ತಿಳಿದುಕೊಳ್ಳಬೇಕು. ಮಿಥುನ ರಾಶಿಯ ಗುರು, ಬುಧನ ಕ್ಷೇತ್ರದಲ್ಲಿ ಇರುವುದರಿಂದ ಬೌದ್ಧಿಕವಾದ ವಿಚಾರದಲ್ಲಿ ಬಹಳ ಬದಲಾವಣೆಯನ್ನು ತರುತ್ತಾನೆ. ಇನ್ನು ಒಂದು ವರ್ಷಗಳಷ್ಟು ಕಾಲ ಇಲ್ಲಿರುವ ಗುರು ಅವರವರ ರಾಶಿಯ ಪ್ರಕಾರ ಅನುಕೂಲ ಪ್ರತಿಕೂಲತೆಯ ಮೂಲಕ ಲಾಭಾಲಾಭಗಳನ್ನು ಸುಖ ದುಃಖಗಳನ್ನು ಒದಗಿಸಿಕೊಡುತ್ತಾನೆ. ಗುರುವಿನ ಅನುಕೂಲಗಳು ಎಲ್ಲರಿಗೂ ದೊರಕಲಿ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಜಿಲ್ಲೆಗೆ ವರುಣನ ಆರ್ಭಟ: ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಉಡುಪಿ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಂಗಾಪುರಕ್ಕೆ ಚೀನಾ ಮೂಲದ ಸೈಬರ್ ಭೀತಿ: ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಗಳ ಮೇಲೆ ಗುರಿ

ಸಿಂಗಾಪುರ ಪ್ರಸ್ತುತ ಅತಿ ಸಂಕೀರ್ಣವಾದ ಸೈಬರ್ ಆಕ್ರಮಣವನ್ನು ಎದುರಿಸುತ್ತಿದೆ, ಇದು ದೇಶದ ಭದ್ರತೆ ಮತ್ತು ಪ್ರಮುಖ ಸೇವೆಗಳ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡಿದೆ

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.