spot_img

ದಿನ ವಿಶೇಷ – ದಮನಕ ಚತುರ್ದಶಿ

Date:

ದಮನಕ ಚತುರ್ದಶಿ

ಚೈತ್ರ ಮಾಸದ 14ನೆಯ ದಿವಸವನ್ನು ದಮನಕ ಚತುರ್ದಶಿ ಎಂದು ಆಚರಿಸುತ್ತಾರೆ. ದಮನಕ ಎಂದರೆ ವಿಷ್ಣುವಿನ ಹೆಸರು. ನಮ್ಮೊಳಗಿನ ಎಲ್ಲಾ ದೋಷವನ್ನು ನಾಶ ಮಾಡುವವ ಎನ್ನುವ ಅನುಸಂಧಾನದಲ್ಲಿ ಈ ಹೆಸರಿನಿಂದ ಭಗವಾನ್ ಮಹಾವಿಷ್ಣುವನ್ನು ಮಹಾರಾಷ್ಟ್ರ ಒರಿಸ್ಸಾ ಗುಜರಾತ್ ಇತ್ಯಾದಿ ರಾಜ್ಯಗಳಲ್ಲಿ ಈ ದಿವಸದ ಸಂಶಯಕಾಲದಲ್ಲಿ ವಿಶೇಷವಾಗಿ ಆರಾಧಿಸುತ್ತಾರೆ.

ಇನ್ನು ಕೆಲವು ಕಡೆ ಜಗನ್ಮಾತೆ ಹಿಂಗುಲಾಂಬಿಕೆಯನ್ನು ಕೂಡ ಈ ದಿವಸ ಅಗ್ನಿಯ ಮೂಲಕವಾಗಿ ಆರಾಧಿಸುವ ಪದ್ಧತಿ ಇದೆ. ಅಗ್ನಿ ವಸ್ತುಗಳನ್ನು ಸುಡುವಂತೆ, ನಮ್ಮೊಳಗಿನ ಬೇಡದ ವಿಚಾರಗಳನ್ನೆಲ್ಲ ಅಗ್ನಿ ಸುಟ್ಟು ಹಾಕಲಿ ಎನ್ನುವ ಉದ್ದೇಶವಷ್ಟೇ. ಅದೇನೇ ಇರಲಿ ಆರಾಧನೆ ಅಲ್ಲದೆ ಕೇವಲ ವಿಚಾರಧಾರೆಯಿಂದಲೂ ಭಗವಂತ ನಮ್ಮನ್ನು ಅನುಗ್ರಹಿಸುತ್ತಾನೆ ಆದ್ದರಿಂದ ನಮ್ಮಲ್ಲಿ ಅಷ್ಟಾಗಿ ಆಚರಣೆಯಲ್ಲಿಲ್ಲದ ಈ ವಿಚಾರವನ್ನು ತಿಳಿದುಕೊಂಡಾದರೂ ಭಗವಂತನ ಅನುಗ್ರಹದಿಂದ ನಾವು ಪಾಪ ವಿಮುಕ್ತರಾಗೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

'ಮುದ್ದು ಸೊಸೆ' ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ.

ಅಪರೂಪದ ನಾಯಿ ಖರೀದಿಗೆ 50 ಕೋಟಿ? ಬೆಂಗಳೂರು ಶ್ವಾನ ಪ್ರೇಮಿಯ ಮನೆಗೆ ಇಡಿ ದಾಳಿ!

ಬೆಂಗಳೂರು ಶ್ವಾನ ಪ್ರೇಮಿ ಎಸ್. ಸತೀಶ್ ತನ್ನಿಂದ 50 ಕೋಟಿ ರೂ. ಮೊತ್ತದಲ್ಲಿ ನಾಯಿ ಖರೀದನೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಹೇಳಿಕೆ ಇದೀಗ ಇಡಿ (ಅನ್ವೇಷಣಾ ನಿರ್ದೇಶನಾಲಯ) ತನಿಖೆಗೆ ಕಾರಣವಾಗಿದೆ.

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ.

ಕಾರ್ಕಳದಲ್ಲಿ ಮಕ್ಕಳ ರಂಗಶಿಬಿರ ಆರಂಭ: ಪ್ರತಿಭೆಗಳ ಅನಾವರಣಕ್ಕೆ ವೇದಿಕೆ – ಶಾಸಕರಿಂದ ಪ್ರೋತ್ಸಾಹ

ಬುಧವಾರ ಕಾರ್ಕಳದ ಯಕ್ಷ ರಂಗಾಯಣ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.