spot_img

ತಲೆ ತಂಪಾಗಲಿ, ಆರೋಗ್ಯ ಉತ್ತಮವಾಗಲಿ – ಮನೆಮದ್ದು ಮೆಂತ್ಯೆ ಕಾಳು!

Date:

ಬೇಸಿಗೆಯಲ್ಲಿ ದೇಹದ ಉಷ್ಣತೆ ಹತೋಟಿಯಲ್ಲಿಡಲು ಅಡುಗೆ ಮನೆಯಲ್ಲಿರುವ ಒಂದು ಸಾಮಾನ್ಯ ಮಸಾಲೆ ಪದಾರ್ಥವಾದ ಮೆಂತ್ಯೆ ಕಾಳು ಬಹುಪಯೋಗಿಯಾಗಿ ಬಳಕೆಯಾಗುತ್ತದೆ. ಈ ಮೆಂತ್ಯೆ ಕಾಳು ಆರೋಗ್ಯದ ಹಲವಾರು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಒದಗಿಸುತ್ತದೆ.

ಚರ್ಮದ ಆರೋಗ್ಯದಿಂದ ಹಿಡಿದು, ತೂಕ ಇಳಿಕೆ, ಸಕ್ಕರೆ ಕಾಯಿಲೆ ನಿಯಂತ್ರಣ, ತಲೆಹೊಟ್ಟು ನಿವಾರಣೆ, ಅಜೀರ್ಣ ಶಮನ, ಋತುಚಕ್ರದ ಹೊಟ್ಟೆನೋವು, ಬೆನ್ನುನೋವು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಇದು ಫಲಕಾರಿಯಾಗುತ್ತದೆ.

  • ಅಜೀರ್ಣ ಸಮಸ್ಯೆ ಇದ್ದರೆ, ಒಂದು ಚಮಚ ಮೆಂತ್ಯೆ ಕಾಳನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಶಮನಕಾರಿಯಾಗಿ ಕೆಲಸ ಮಾಡುತ್ತದೆ.
  • ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ, ಒಂದು ಚಮಚ ಮೆಂತ್ಯೆ ಕಾಳನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಅದರ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಪರಿಣಾಮಕಾರಿಯಾಗಿದೆ.
  • ಗ್ಯಾಸ್ಟ್ರಿಕ್ ಸಮಸ್ಯೆಗೂ ಇದು ಉತ್ತಮ ಪರಿಹಾರ.
  • ನೆನೆಸಿದ ಮೆಂತ್ಯೆ ಕಾಳುಗಳನ್ನು ನೇರವಾಗಿ ತಿಂದರೂ ಸಹ ಆರೋಗ್ಯ ಲಾಭ ಸಿಗುತ್ತದೆ.
  • ಮೆಂತ್ಯೆ ಕಾಳುಗಳನ್ನು ನುಣ್ಣಗೆ ರುಬ್ಬಿ ತಲೆಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೆ ದೇಹಕ್ಕೆ ತಂಪು ನೀಡುತ್ತದೆ.

ಈ ಬೇಸಿಗೆಯಲ್ಲಿ ಔಷಧೀಯ ಗುಣವಿರುವ ಮೆಂತ್ಯೆ ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಆರೋಗ್ಯಕರ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಕೇಂದ್ರದಿಂದ ಪರವಾನಿಗೆ! ಸೆಟಲೈಟ್ ಇಂಟರ್ನೆಟ್ ಸೇವೆಗೆ ಮತ್ತೊಂದು ಹೆಜ್ಜೆ

ಅಮೆರಿಕದ ಆಂತರಿಕ್ಷ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಸ್ಪೇಸ್ ಎಕ್ಸ್‌ಗೆ ಸೇರಿದ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಂಸ್ಥೆಗೆ ಭಾರತದಲ್ಲಿ ಸೆಟಲೈಟ್ ಕಮ್ಯೂನಿಕೇಶನ್ ಸೇವೆ ನೀಡಲು ದೂರಸಂಪರ್ಕ ಇಲಾಖೆಯಿಂದ (DoT) ಪರವಾನಿಗೆ ನೀಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಯ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್!

ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರಿನ ಸಾಗರ್ ಆಚಾರ್ಯರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರು

ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರಿನ ಸಾಗರ್ ಆಚಾರ್ಯರವರಿಗೆ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರುರವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ