spot_img

ತೂಕ ಇಳಿಸಲು ಲವಂಗವೇ ನೈಸರ್ಗಿಕ ಆಯ್ದ ಪರಿಹಾರ!

Date:

ತೂಕ ಇಳಿಸಲು ಶ್ರಮಿಸುವವರು ಈಗ ಅಡುಗೆ ಮನೆಯಲ್ಲೇ ಇರುವ ಲವಂಗವನ್ನು ನೈಸರ್ಗಿಕ ಪರಿಹಾರವಾಗಿ ಬಳಸಬಹುದು ಎಂಬ ವಿಷಯ ಅಧ್ಯಯನಗಳಿಂದ ದೃಢವಾಗಿದೆ. ಲವಂಗವು ದೇಹದ ಮೆಟಬಾಲಿಸಂ (ಚಯಾಪಚಯ ಕ್ರಿಯೆ) ಅನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದ ಸಕ್ಕರೆ ಮಟ್ಟವನ್ನು ಸಮತೋಲದಲ್ಲಿ ಇಡಲು ಸಹಕಾರಿಯಾಗಿದೆ.

ಲವಂಗದಲ್ಲಿ ಯುಜೆನೋಲ್ ಎನ್ನುವ ಶಕ್ತಿಶಾಲಿ ಅಂಶವಿದ್ದು, ಅದು ದೇಹದ ಕೊಬ್ಬು ಕರಗಿಸುವ ಕ್ರಿಯೆಗೆ ಸಹಾಯಕವಾಗುತ್ತದೆ. ಇದಲ್ಲದೆ, ಲವಂಗವು ವಿಟಮಿನ್ ಸಿ, ವಿಟಮಿನ್ ಇ, ಬಿ, ಕೆ ಮುಂತಾದ ಪೋಷಕಾಂಶಗಳನ್ನು ಹೊಂದಿದ್ದು, ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ.

ಲವಂಗ ಬಳಸುವ ಕೆಲ ಪರಿಣಾಮಕಾರಿ ವಿಧಾನಗಳು:

ಬೆಳಿಗ್ಗೆ ಖಾಲಿ ಹೊಟ್ಟೆಗೆ ಲವಂಗ ಹಾಕಿದ ಬಿಸಿ ನೀರು ಕುಡಿಯುವುದು

ಲವಂಗ, ಜೇನು ಮತ್ತು ನಿಂಬೆ ಸೇರಿಸಿದ ಚಹಾ ಸೇವನೆ

ಸ್ಮೂದಿಗಳಲ್ಲಿ ಲವಂಗ ಸೇರಿಸಿ ಪಾನೀಯ ತಯಾರಿಸುವುದು

ಆಹಾರದಲ್ಲಿ ದಾಲ್ಚಿನ್ನಿ, ಜೀರಿಗೆ, ಅಜ್ವೈನ್ ಜೊತೆಗೆ ಲವಂಗ ಬಳಕೆ

ಊಟದ ನಂತರ ಬಾಯಿಗೆ ಲವಂಗ ಹಾಕಿ ಚೀಪುವುದು

ಲವಂಗದ ತೀವ್ರ ಪರಿಮಳ ಹಾಗೂ ಅದರಲ್ಲಿರುವ ಕೆಮಿಕಲ್‌ಗಳು ಹಸಿವನ್ನು ನಿಯಂತ್ರಿಸುತ್ತವೆ ಮತ್ತು ಬೇಡವಾದ ಆಹಾರ ಸೇವನೆಯ ಇಚ್ಛೆಯನ್ನು ಕಡಿಮೆ ಮಾಡುತ್ತವೆ. ದಿನನಿತ್ಯದ ಆಹಾರದಲ್ಲಿ ಲವಂಗವನ್ನು ಸರಿಯಾಗಿ ಬಳಸಿದರೆ ಅದು ತೂಕ ಇಳಿಕೆಯ ನೈಸರ್ಗಿಕ ಮಾರ್ಗವಾಗಿ ಉಪಯೋಗವಾಗಿತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

‘ಸೇವಾ ಪಾಕ್ಷಿಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ, 'ಕ್ರಿಯೇಟಿವ್ ಗುರುದೇವೋಭವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಕಾರ್ಕಳ ಜ್ಞಾನಸುಧಾ – ಶಿಕ್ಷಕರ ದಿನಾಚರಣೆಸಾವಧಾನದ ಮನಸ್ಥಿತಿ ಗೌರವದ ಉಪಸ್ಥಿತಿ : ವಸಂತ್ ಆಚಾರ್

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.