spot_img

ಆಮಲಕಿ ಏಕಾದಶಿ

Date:

ಚಿತ್ರರಥ ಎನ್ನುವ ರಾಜ ಏಕಾದಶಿಯ ದಿವಸ ನದಿಯ ದಂಡೆಯಲ್ಲಿರುವ ನೆಲ್ಲಿಕಾಯಿಯ ಮರದ ಕೆಳಗೆ ತನ್ನವರನ್ನು ಹಾಗೆಯೇ ಬೇಟೆಗಾರರನ್ನು ಕೂಡ ಕೂಡಿಕೊಂಡು ಏಕಾದಶಿ ವ್ರತದ ಆಚರಣೆಯನ್ನು ಧ್ಯಾನ ಪ್ರವಚನಗಳ ಮೂಲಕ ನಡೆಸಿದನು. ಈ ಪುಣ್ಯದ ಕಾರಣದಿಂದ ಆತ ವಸುರಥ ಎನ್ನುವ ಅಭಿಧಾನದಿಂದ ಪುನರ್ಜನ್ಮವನ್ನು ಪಡೆದು ಕೀರ್ತಿವಂತನಾಗುತ್ತಾನೆ. ಆದ್ದರಿಂದ ಈ ಏಕಾದಶಿಗೆ ಆಮಲಕಿ ಏಕಾದಶಿ ಎಂದು ಕರೆಯುವುದು.

ನೆಲ್ಲಿಕಾಯಿ ತಿನ್ನುವಾಗ ಹುಳಿಯಾಗಿದ್ದರೂ ಕೂಡ ಆಮೇಲೆ ಕುಡಿದ ನೀರು ಸಿಹಿಯಾಗಿರುವುದನ್ನು ನಾವು ಅನುಭವಿಸಿದ್ದೇವೆಯಲ್ಲವೇ. ನೀರಿಗೆ ಜೀವನ ಎಂದು ಹೆಸರು ಯಾಕೆಂದರೆ ಅದು ನಮಗೆ ಜೀವನವನ್ನು ಕೊಡುತ್ತದೆ. ಹಾಗೆಯೇ ಕರ್ಮ ಕಹಿಯಾಗಿದ್ದರು ಆ ಮೇಲಿನ ಜೀವನ ಸಿಹಿಯಾಗಿರುತ್ತದೆ ಎನ್ನುವ ಸಂದೇಶ ಈ ಏಕಾದಶಿಯ ಮೂಲಕ ಕಾಣುತ್ತೇವೆ. ಉಪವಾಸ ನಮ್ಮೆಲ್ಲಾ ದೋಷಗಳನ್ನು ದೂರವಾಗಿಸುತ್ತದೆ. ಈ ದಿನದ ಗೋವಿಂದರೂಪಿ ಭಗವಂತನನ್ನು ನಮಗೆ ಹತ್ತಿರವಾಗಿಸುತ್ತದೆ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪರ್ಕಳದಲ್ಲಿ ಮತ್ತೆ ಚಿರತೆ ಆತಂಕ: ಹಗಲೇ ಕೋಳಿ, ನಾಯಿ ಎಳೆದೊಯ್ದ ಘಟನೆ!

ಉಡುಪಿ ಜಿಲ್ಲೆಯ ಪರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆಯಾಗಿರುವ ಘಟನೆ ಮತ್ತೆ ವರದಿಯಾಗಿದೆ.

ಅಮಿತ್ ಶಾ ರಾಜ್ಯಕ್ಕೆ ಭೇಟಿ – ಯಡಿಯೂರಪ್ಪರವರ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಜೂನ್ 8) ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಭೇಟಿಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಕುತೂಹಲ ಉಂಟಾಗಿದೆ.

ದಿನ ವಿಶೇಷ – ಕಿರಣ್ ಬೇಡಿ: ಮೊದಲ ಮಹಿಳಾ IPS

ಜೂನ್ 8 ಎಂಬ ದಿನಾಂಕ ಕಿರಣ್ ಬೇಡಿಯವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದ ಪ್ರಮುಖ ದಿನ.

ಕಾರ್ಕಳದ ಜನತೆಗೆ ರುಚಿಕರ ಸುದ್ದಿ: ಜೂನ್ 8ರಂದು ‘ದೊನ್ನೆ ಬಿರಿಯಾನಿ ಗ್ರಾಂಡ್ – ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್’ ಶುಭಾರಂಭ

ಕಾರ್ಕಳದ ಜೋಡುರಸ್ತೆಯ ವಿಜಯ ಕಾಂಪ್ಲೆಕ್ಸ್‌ನಲ್ಲಿ ಬಹು ನಿರೀಕ್ಷಿತ 'ದೊನ್ನೆ ಬಿರಿಯಾನಿ ಗ್ರಾಂಡ್ – ನಾಟಿ ಸ್ಟೈಲ್ ಫ್ಯಾಮಿಲಿ ರೆಸ್ಟೋರೆಂಟ್' ಜೂನ್ 8, 2025ರ ಆದಿತ್ಯವಾರ ಶುಭಾರಂಭಗೊಳ್ಳಲಿದೆ.