ನಿಮ್ಮ ಹಿತ್ತಲಲ್ಲೇ ಅರಿಯದ ಅಚ್ಚರಿಯ ಔಷಧ! – ತುಂಬೆ ಗಿಡದ ಆರೋಗ್ಯ ಗುಣಗಳು

Date:

spot_img

“ಹಿತ್ತಲ ಗಿಡ ಮದ್ದಲ್ಲ” ಎಂಬ ಮಾತಿಗೆ ತಕ್ಕಂತೆ, ನಮ್ಮ ಮನೆಗಳ ಹಿತ್ತಲಲ್ಲೇ ಇದ್ದರೂ ಲೆಕ್ಕವಿಲ್ಲದೆ ಬೆಳೆಯುವ ತುಂಬೆ ಗಿಡದ ಔಷಧೀಯ ಮಹತ್ವ ಅನೇಕರಿಗೆ ತಿಳಿದಿಲ್ಲ. ಬಿಳಿ ತುಂಬೆ (White Balsam) ಗಿಡ ವಿಶಿಷ್ಟವಾದ ಆರೋಗ್ಯ ಗುಣಗಳನ್ನು ಹೊಂದಿದ್ದು, ಜ್ವರದಿಂದ ಹಿಡಿದು ತಲೆನೋವಿನವರೆಗಿನ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದಾಗಿದೆ.

ಜ್ವರ ನಿವಾರಣೆಗೆ ಶ್ರೇಷ್ಠ ಮನೆಮದ್ದು
ತುಂಬೆ ಗಿಡದ ಎಲೆಯಿಂದ ತಯಾರಿಸಿದ ಕಷಾಯವು ಜ್ವರದ ತಾಪಮಾನವನ್ನು ಅರ್ಧಗಂಟೆಯೊಳಗೆ ನಿಯಂತ್ರಣಕ್ಕೆ ತರುವ ಸಾಮರ್ಥ್ಯ ಹೊಂದಿದೆ. ಕರಿಮೆಣಸಿನ ಪುಡಿಯನ್ನು ಸೇರಿಸಿ ಕುದಿಸಿದ ಈ ಕಷಾಯ ದೇಹವನ್ನು ತಂಪು ಮತ್ತು ಉತ್ಸಾಹದಿಂದ ಕೂಡಿರಿಸುತ್ತದೆ.

ಕಣ್ಣಿನ ಕೆಳಗಿನ ಕಪ್ಪು ವಲಯಗಳ ಸಮಸ್ಯೆಗೆ ಸಹಾಯಕ
ಒತ್ತಡ, ನಿದ್ರಾಭಾವ, ಗ್ಯಾಜೆಟ್ ಬಳಕೆಯಿಂದ ಬರುವ ಡಾರ್ಕ್ ಸರ್ಕಲ್ಸ್‌ ಸಮಸ್ಯೆಗೆ ತುಂಬೆ ಗಿಡದ ರಸ ಉತ್ತಮ ಪರಿಹಾರ. ಇದರ ರಸವನ್ನು ಹಾಲಿನಲ್ಲಿ ಅಥವಾ ನೀರಿನಲ್ಲಿ ಮಿಶ್ರ ಮಾಡಿ ಮುಖ ತೊಳೆಯುವದರಿಂದ ತಂಪು ಮತ್ತು ಕಾಂತಿಯುತ ಚರ್ಮ ಸಿಗುತ್ತದೆ.

ಜೀರ್ಣಕ್ರಿಯೆಗೆ ಬಲ ನೀಡುವುದು
ಅಜೀರ್ಣತೆ, ಹೊಟ್ಟೆ ನೋವು, ವಾಂತಿ ಸಮಸ್ಯೆಗಳಿಗೆ ತುಂಬೆ ಗಿಡದ ಕಷಾಯವು ಅತ್ಯುತ್ತಮ. ಬಿಸಿ ನೀರಿನಲ್ಲಿ ಕುದಿಸಿ ಚಿಟಿಕೆ ಉಪ್ಪು ಸೇರಿಸಿದರೆ, ಇದು ಪಚನ ಕ್ರಿಯೆ ಸುಧಾರಿಸುತ್ತದೆ.

ಸಂಧಿ ನೋವಿಗೆ ಉಪಯುಕ್ತವಾದ ಸೂಕ್ತ ಮನೆಮದ್ದು
ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ, ಬಟ್ಟೆಗೆ ಆ ನೀರನ್ನು ಚಿಮುಕಿಸಿ ನೋವು ಇರುವ ಜಾಗಕ್ಕೆ ಹಚ್ಚಿದರೆ ಸಡಿಲತನ ಮತ್ತು ಆರಾಮ ಸಿಗುತ್ತದೆ. ಹಳೆಯ ಕಾಲಿನ ನೋವಿಗೆ ಇದು ಶ್ರೇಷ್ಠ ಪರಿಹಾರ.

ತಲೆನೋವಿಗೆ ಬೇಗನೆ ಪರಿಹಾರ
ತುಂಬೆ ಗಿಡದ ಬೇರು, ಎಲೆ, ಕಾಂಡದಿಂದ ತಯಾರಿಸಿದ ಕಷಾಯದ ಹಬೆಯಿಂದ ತಲೆನೋವು ಶಮನವಾಗುತ್ತದೆ. ಇದು ಯಾವುದೇ ಅಡ್ಡ ಪರಿಣಾಮವಿಲ್ಲದ ಸೌಮ್ಯ ಮದ್ದು.

ಸಂಸ್ಕೃತದಲ್ಲಿ “ದ್ರೋಣ ಪುಷ್ಟ” ಎಂದು ಹೆಸರು ಪಡೆದಿರುವ ಈ ಗಿಡದ ಉಪಯೋಗಗಳನ್ನು ಆಯುರ್ವೇದದಲ್ಲಿಯೂ ವಿವರಿಸಲಾಗಿದೆ. ನಮ್ಮ ಸುತ್ತಮುತ್ತಲಿನಲ್ಲಿ ಇದ್ದರೂ ಅಷ್ಟಾಗಿ ಗಮನಿಸದ ಈ ತುಂಬೆ ಗಿಡ ಆರೋಗ್ಯದ ಗೆಳೆಯ ಎನಿಸಿಕೊಳ್ಳುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.