spot_img

ವಿಜೇತ ವಿಶೇಷ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಕಾರ್ಯಕ್ರಮ

Date:

ಅಯ್ಯಪ್ಪನಗರ, ಮಾರ್ಚ್ 7, 2025

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ (KSMC) ಮತ್ತು ಕೋಣಿ ವಿ.ಎಂ.ಎಸ್ ರಮೇಶ್ ಹೆಬ್ಬಾರ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು. ಈ ಸಂದರ್ಭದಲ್ಲಿ ರೆಮಿಡಿಯಲ್ ಥೆರಫಿ ಕೊಠಡಿ ಉದ್ಘಾಟನೆ, ಶಾಲಾ ವಾಹನ ಹಸ್ತಾಂತರ, ಸೆನ್ಸಾರಿ ಪಾತ್ ಉದ್ಘಾಟನೆ, ಮೋಪ್ ಮಾರುಕಟ್ಟೆಗೆ ಬಿಡುಗಡೆ ಹಾಗೂ ಶಾಲೆಯ 9ನೇ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಸಿ.ಎಸ್.ಆರ್ ಯೋಜನೆಯಡಿ
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ನ ನಿಕಟ ಪೂರ್ವ ಮ್ಯಾನೇಜಿಂಗ್ ಡೈರೆಕ್ಟರ್ ಜಯವಿಭವ ಸ್ವಾಮಿ (IAS) ಅವರು ರೆಮಿಡಿಯಲ್ ಥೆರಫಿ ಕೊಠಡಿ ಉದ್ಘಾಟನೆ ಮತ್ತು ಶಾಲಾ ವಾಹನದ ಕೀ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು. ಸರ್ಕಾರದಿಂದ ಕಲ್ಪಿಸಲಾದ ಮೂಲಭೂತ ಸೌಕರ್ಯಗಳು ವಿಶೇಷ ಚೇತನ ಮಕ್ಕಳಿಗೆ ಸದುಪಯೋಗವಾಗುತ್ತಿರುವುದರ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು.

ಕೋಣಿ ವಿ.ಎಂ.ಎಸ್ ರಮೇಶ್ ಹೆಬ್ಬಾರ್ ಟ್ರಸ್ಟ್ ಪ್ರಾಯೋಜಕತ್ವದ ಕೊಠಡಿ ಉದ್ಘಾಟನೆ
ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ವಿಜಯ್ ಕುಮಾರ್ ಇಡ್ಯಾ ಅವರು ಕೊಠಡಿ ಉದ್ಘಾಟನೆ ಮಾಡಿದರು. ಸಭಾಧ್ಯಕ್ಷರಾಗಿ ವಿಜೇತ ವಿಶೇಷ ಶಾಲೆಯ ಗೌರವಾಧ್ಯಕ್ಷರು ಹಾಗೂ ಶ್ರೀ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಅವರು ಸೇವೆ ಸಲ್ಲಿಸಿದರು. ಅವರು ದಾನಿಗಳನ್ನು ಅಭಿನಂದಿಸಿ, ಸಂಸ್ಥೆಯ ಸೇವೆಗಳನ್ನು ಪ್ರಶಂಸಿಸಿದರು.

ಸೆನ್ಸಾರಿ ಪಾತ್ ಉದ್ಘಾಟನೆ ಮತ್ತು ಮೋಪ್ ಬಿಡುಗಡೆ
ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅವರು ವಿಶೇಷ ಮಕ್ಕಳಿಗಾಗಿ ಸೆನ್ಸಾರಿ ಪಾತ್ ಉದ್ಘಾಟನೆ ಮಾಡಿದರು. ಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಿ ಪ್ರಶಂಸಿಸಿದ ಅವರು, ದೊಡ್ಡ ಮೊತ್ತದ ದೇಣಿಗೆ ನೀಡಿ ಪ್ರೋತ್ಸಾಹಿಸಿದರು. ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ತೆಲ್ಲಾರ್ ಅವರು ವಿಜೇತ ವಿಶೇಷ ಶಾಲೆಯ ಮಕ್ಕಳು ತಯಾರಿಸಿದ ಮೋಪ್ (ನೆಲ ಒರೆಸುವ ಕೋಲು) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳು ಹಾಗೂ ಗಣ್ಯರ ಸಹಭಾಗಿತ್ವ
ನಿವೃತ್ತ ಸಿ.ಎ. ಕಮಲಾಕ್ಷ ಕಾಮತ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ದೇಣಿಗೆ ನೀಡಿದರು. ಜನಪ್ರಿಯ ರೈಸ್ ಮಿಲ್ ಮಾಲೀಕ ಮಂಜುನಾಥ್, ಹಿತೈಷಿ ಹರೀಶ್ ಶೆಟ್ಟಿ ಪಡುಕುಡೂರು, ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ ಹಾಗೂ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿ ಮತ್ತು ಸೇವೆಗಳ ಗೌರವ
ಕೋಣಿ ವಿ.ಎಂ.ಎಸ್ ರಮೇಶ್ ಹೆಬ್ಬಾರ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ವಿಜಯ್ ಕುಮಾರ್ ಇಡ್ಯಾ ಅವರು ಸಂಸ್ಥೆಯ ಸಿಬ್ಬಂದಿ ಕು. ಶೋಭಾ ಪೂಜಾರಿ ಮತ್ತು ಶ್ರೀಮತಿ ಮಲ್ಲಿಕಾ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು
ಕು. ನಳಿನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರು ಸ್ವಾಗತ ಮಾತುಗಳನ್ನಾಡಿದರು. ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. ಶ್ರೀ ಸುನೀಲ್ ನೆಲ್ಲಿಗುಡ್ಡೆ ನೇತೃತ್ವದ ತೆಲಿಕೆದ ತೆನಾಲಿ ತಂಡವು ಸತೀಶ್ ಪೂಜಾರಿ ಬೆಳಪು ದುಬೈ ಅವರ ಪ್ರಾಯೋಜಕತ್ವದಲ್ಲಿ ತೆಲಿಕೆದ ಬರ್ಸ ಕಾಮಿಡಿ ಶೋ ನೀಡಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಿತು.

ಯಕ್ಷಗಾನ ಪ್ರದರ್ಶನ
ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರ ನಿರ್ದೇಶನದಲ್ಲಿ ಮತ್ತು ಉದ್ಯಮಿ ವಿಜಯ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ರುಕ್ಮಿಣಿ ಕಲ್ಯಾಣ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.