spot_img

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 14 ತ್ವರಿತ ಮನೆಮದ್ದುಗಳು!

Date:

ಮಳೆಗಾಲ ಶುರುವಾದಾಗ ತಂಪಾದ ಹವಾಮಾನವು ತಾತ್ಕಾಲಿಕವಾಗಿ ತಾಜಾತನ ನೀಡಿದರೂ, ಈ ಅವಧಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರವರೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಂಟಲು ನೋವು, ಶೀತ-ಕೆಮ್ಮು, ತಲೆನೋವು ಮತ್ತು ಜ್ವರದಂತಹ ಸೋಂಕುಗಳು ಸಾಮಾನ್ಯ. ಇದನ್ನು ನಿರ್ಲಕ್ಷಿಸುವುದು ಅಥವಾ ತಡವಾಗಿ ಗಮನಿಸುವುದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಹವಾಮಾನ ಬದಲಾವಣೆ, ಮಳೆ ನೀರಿನಲ್ಲಿ ಒದ್ದೆ ಆಗುವುದು, ಆರ್ದ್ರತೆ, ಅಶುದ್ಧ ಆಹಾರ ಮತ್ತು ನೀರು ಈ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಕೇವಲ ಔಷಧಿಗಳ ಮೇಲೆ ಅವಲಂಬನೆಯಾಗದೆ, ಕೆಲವು ಮನೆಮದ್ದುಗಳನ್ನು ಅನುಸರಿಸುವುದರಿಂದ ಶೀಘ್ರ ಲಾಭವಾಗಬಹುದು.

ಮಳೆಗಾಲದಲ್ಲಿ ಅನುಸರಿಸಬೇಕಾದ ಮುಖ್ಯ ಮನೆಮದ್ದುಗಳು:

ಬಿಸಿನೀರು ಕುಡಿಯಿರಿ: ಕುದಿಸಿ, ಫಿಲ್ಟರ್ ಮಾಡಿದ ನೀರನ್ನೇ ಸೇವಿಸಿ.

ಓದದ ಬಟ್ಟೆ ಬದಲಾವಣೆ: ಹೆಚ್ಚುವರಿ ಬಟ್ಟೆ-ಸಾಕ್ಸ್ ಜೊತೆ ಇಟ್ಟುಕೊಳ್ಳಿ.

ಪಾದರಕ್ಷೆ ಸರಿಯಾಗಿ ಬಳಸಿ: ಮುಚ್ಚಿದ ಶೂ ಅಥವಾ ಸ್ಯಾಂಡಲ್ ಧರಿಸಿ.

ಭಾರವಾದ ಆಹಾರ ತಪ್ಪಿಸಿ: ಬೃಹತ್, ಭಜ್ಜಿ, ಮಿಠಾಯಿ ಕಡಿಮೆ ಸೇವನೆ.

ಮಸಾಲೆ ಬಳಕೆ: ಶುಂಠಿ, ಜೀರಿಗೆ, ಮೆಣಸು ಸೇರಿಸಿ ಆಹಾರ ತಯಾರಿ.

ಸಿಹಿ ತಿಂಡಿಯಲ್ಲಿ ಹಿತಕರ ಮಸಾಲೆಗಳು: ಜಾಯಿಕಾಯಿ, ಏಲಕ್ಕಿ, ಲವಂಗ ಸೇರಿಸಿ.

ದೈನಂದಿನ ಕಷಾಯ ಸೇವನೆ: ಶುಂಠಿ, ಕರಿಮೆಣಸು, ಅರಿಶಿನ, ದಾಲ್ಚಿನ್ನಿಯ ಕಷಾಯ.

ಊಟದ ಬಳಿಕ ಚಟ್ನಿ ಪುಡಿ ಸೇವನೆ: ಓಂಕಾಳು, ಬಡಿಸೋಪು, ಜ್ಯೇಷ್ಠಮಧು, ಜಾಯಿಕಾಯಿ.

ಬಿಸಿ ಮತ್ತು ತೆಳ್ಳಗಿನ ಆಹಾರ: ಗಂಜಿ, ತೊವ್ವೆ ನೀರು, ಸಾರು, ಮಜ್ಜಿಗೆ ಗೊಜ್ಜು.

ಗಾಯಗಳಿಗೆ ಚಿಕಿತ್ಸೆ ಅಗತ್ಯ: ವೈದ್ಯರನ್ನು ಸಂಪರ್ಕಿಸಿ.

ಸೊಳ್ಳೆ ನಿಯಂತ್ರಣ: ಬೆಳ್ಳುಳ್ಳಿ-ಈರುಳ್ಳಿ ಹೊಗೆ ಅಥವಾ ಕೀಟನಾಶಕ ಸಿಂಪಡಣೆ.

ಹಳಸು ಆಹಾರ ತಪ್ಪಿಸಿ: ಹೊಸ ಮತ್ತು ಬಿಸಿ ಆಹಾರ ಸೇವಿಸಿ.

ಓಂಕಾಳು ಗಂಟು: ಕರವಸ್ತ್ರದಲ್ಲಿ ಹಾಕಿ ಮೂಗಿನ ಬಳಿ ಇರಿಸಿ.

ಲಕ್ಷಣಗಳು ಉಲ್ಬಣವಾದರೆ: ತಕ್ಷಣ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯದ ಬಗ್ಗೆ ಜಾಗೃತತೆ ಅನಿವಾರ್ಯ. ಸರಳ ಮನೆಮದ್ದುಗಳು ನಿಮ್ಮ ದೈನಂದಿನ ಅಭ್ಯಾಸಗಳಾಗಿ ರೂಪುಗೊಳ್ಳಲಿ ಮತ್ತು ಈ ಮಳೆಗಾಲ ನಿಮ್ಮ ಕುಟುಂಬದ ಆರೋಗ್ಯಕ್ಕೆ ಶಕ್ತಿವರ್ಧಕವಾಗಲಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.