
ಮಳೆಗಾಲ ಶುರುವಾದಾಗ ತಂಪಾದ ಹವಾಮಾನವು ತಾತ್ಕಾಲಿಕವಾಗಿ ತಾಜಾತನ ನೀಡಿದರೂ, ಈ ಅವಧಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರವರೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಂಟಲು ನೋವು, ಶೀತ-ಕೆಮ್ಮು, ತಲೆನೋವು ಮತ್ತು ಜ್ವರದಂತಹ ಸೋಂಕುಗಳು ಸಾಮಾನ್ಯ. ಇದನ್ನು ನಿರ್ಲಕ್ಷಿಸುವುದು ಅಥವಾ ತಡವಾಗಿ ಗಮನಿಸುವುದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಹವಾಮಾನ ಬದಲಾವಣೆ, ಮಳೆ ನೀರಿನಲ್ಲಿ ಒದ್ದೆ ಆಗುವುದು, ಆರ್ದ್ರತೆ, ಅಶುದ್ಧ ಆಹಾರ ಮತ್ತು ನೀರು ಈ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಕೇವಲ ಔಷಧಿಗಳ ಮೇಲೆ ಅವಲಂಬನೆಯಾಗದೆ, ಕೆಲವು ಮನೆಮದ್ದುಗಳನ್ನು ಅನುಸರಿಸುವುದರಿಂದ ಶೀಘ್ರ ಲಾಭವಾಗಬಹುದು.

ಮಳೆಗಾಲದಲ್ಲಿ ಅನುಸರಿಸಬೇಕಾದ ಮುಖ್ಯ ಮನೆಮದ್ದುಗಳು:
ಬಿಸಿನೀರು ಕುಡಿಯಿರಿ: ಕುದಿಸಿ, ಫಿಲ್ಟರ್ ಮಾಡಿದ ನೀರನ್ನೇ ಸೇವಿಸಿ.
ಓದದ ಬಟ್ಟೆ ಬದಲಾವಣೆ: ಹೆಚ್ಚುವರಿ ಬಟ್ಟೆ-ಸಾಕ್ಸ್ ಜೊತೆ ಇಟ್ಟುಕೊಳ್ಳಿ.
ಪಾದರಕ್ಷೆ ಸರಿಯಾಗಿ ಬಳಸಿ: ಮುಚ್ಚಿದ ಶೂ ಅಥವಾ ಸ್ಯಾಂಡಲ್ ಧರಿಸಿ.
ಭಾರವಾದ ಆಹಾರ ತಪ್ಪಿಸಿ: ಬೃಹತ್, ಭಜ್ಜಿ, ಮಿಠಾಯಿ ಕಡಿಮೆ ಸೇವನೆ.
ಮಸಾಲೆ ಬಳಕೆ: ಶುಂಠಿ, ಜೀರಿಗೆ, ಮೆಣಸು ಸೇರಿಸಿ ಆಹಾರ ತಯಾರಿ.
ಸಿಹಿ ತಿಂಡಿಯಲ್ಲಿ ಹಿತಕರ ಮಸಾಲೆಗಳು: ಜಾಯಿಕಾಯಿ, ಏಲಕ್ಕಿ, ಲವಂಗ ಸೇರಿಸಿ.
ದೈನಂದಿನ ಕಷಾಯ ಸೇವನೆ: ಶುಂಠಿ, ಕರಿಮೆಣಸು, ಅರಿಶಿನ, ದಾಲ್ಚಿನ್ನಿಯ ಕಷಾಯ.
ಊಟದ ಬಳಿಕ ಚಟ್ನಿ ಪುಡಿ ಸೇವನೆ: ಓಂಕಾಳು, ಬಡಿಸೋಪು, ಜ್ಯೇಷ್ಠಮಧು, ಜಾಯಿಕಾಯಿ.
ಬಿಸಿ ಮತ್ತು ತೆಳ್ಳಗಿನ ಆಹಾರ: ಗಂಜಿ, ತೊವ್ವೆ ನೀರು, ಸಾರು, ಮಜ್ಜಿಗೆ ಗೊಜ್ಜು.
ಗಾಯಗಳಿಗೆ ಚಿಕಿತ್ಸೆ ಅಗತ್ಯ: ವೈದ್ಯರನ್ನು ಸಂಪರ್ಕಿಸಿ.
ಸೊಳ್ಳೆ ನಿಯಂತ್ರಣ: ಬೆಳ್ಳುಳ್ಳಿ-ಈರುಳ್ಳಿ ಹೊಗೆ ಅಥವಾ ಕೀಟನಾಶಕ ಸಿಂಪಡಣೆ.
ಹಳಸು ಆಹಾರ ತಪ್ಪಿಸಿ: ಹೊಸ ಮತ್ತು ಬಿಸಿ ಆಹಾರ ಸೇವಿಸಿ.
ಓಂಕಾಳು ಗಂಟು: ಕರವಸ್ತ್ರದಲ್ಲಿ ಹಾಕಿ ಮೂಗಿನ ಬಳಿ ಇರಿಸಿ.
ಲಕ್ಷಣಗಳು ಉಲ್ಬಣವಾದರೆ: ತಕ್ಷಣ ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯದ ಬಗ್ಗೆ ಜಾಗೃತತೆ ಅನಿವಾರ್ಯ. ಸರಳ ಮನೆಮದ್ದುಗಳು ನಿಮ್ಮ ದೈನಂದಿನ ಅಭ್ಯಾಸಗಳಾಗಿ ರೂಪುಗೊಳ್ಳಲಿ ಮತ್ತು ಈ ಮಳೆಗಾಲ ನಿಮ್ಮ ಕುಟುಂಬದ ಆರೋಗ್ಯಕ್ಕೆ ಶಕ್ತಿವರ್ಧಕವಾಗಲಿ.