
ಕಾರ್ಲ್ ಮಾರ್ಕ್ಸ್
ಬುದ್ಧಿಜೀವಿಗಳು ಮಾತೆತ್ತಿದರೆ ಸಾಕು, ಎಡಪಂಥೀಯವಾದ ಅಥವಾ ಮಾರ್ಕ್ಸ್ ವಾದ ಎನ್ನುವ ಮಾತನ್ನು ಹೇಳುತ್ತಾರೆ. ಸರ್ವೇಸಾಧಾರಣ ಎಲ್ಲರೂ ಕೇಳಿರುತ್ತೀರಿ. ಇದಕ್ಕೆ ಮೂಲ ಪುರುಷನಾದ ಕಾಲ್ ಮಾರ್ಕ್ಸ್ ಹುಟ್ಟಿದ್ದು 1818 ಮೇ 5 ರಂದು. ಇವರು ಹುಟ್ಟಿದ ಕೆಲವೇ ವರ್ಷದಲ್ಲಿ ಇವರ ಇಡೀ ಕುಟುಂಬ ಕ್ರೈಸ್ತ ಮತಕ್ಕೆ ಮತಾಂತರವಾಯಿತು. ಅಲ್ಲಿಂದ ಕಟ್ಟಾ ಕ್ರೈಸ್ತನಾಗಿ ಸಮತಾವಾದ ಎನ್ನುವ ಹೊಸ ಚಿಂತನೆ ಎಂದು ಕೊಟ್ಟರು. ಬಾಬು ಯಾವುದನ್ನು ಇವತ್ತು ಕಮ್ಯುನಿಸ್ಟ್ ಸಿದ್ದಾಂತ ಎಂದು ಕರೆಯುತ್ತೇವೆಯೋ ಅದರ ಪ್ರಾರಂಭವನ್ನು ಮಾಡಿದವ ಈ ಮಹನೀಯ. ಆದ್ದರಿಂದಲೇ ನಾವು ಒಂದು ವಿಚಾರವನ್ನು ತಿಳಿದುಕೊಳ್ಳಬಹುದು.

ಆ ಕಾಲದಲ್ಲಿ ವಿದೇಶದಲ್ಲಿ ಅದೆಷ್ಟರ ಮಟ್ಟಿಗೆ ಅಸಮತೋಲನಗಳು ತಾಂಡವ ಮಾಡುತ್ತಿದ್ದವು ಎನ್ನುವುದನ್ನು ಇದರ ಸೃಷ್ಟಿಯಿಂದಲೇ ನಾವು ಕಂಡುಕೊಳ್ಳಬಹುದು. ಈ ಕಾಲ್ ಮಾರ್ಕ್ಸ್ ಬಹಳ ಬುದ್ಧಿವಂತ ಹಾಗೂ ತುಂಬಾ ಅಧ್ಯಯನಶೀಲತೆಯುಳ್ಳವನಾಗಿದ್ದ. ಹಲವಾರು ಭಾಷೆಗಳನ್ನು ಬಲ್ಲವನಾಗಿದ್ದ. ಈತ ಬರೆದ ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್ ಎನ್ನುವ ಗ್ರಂಥ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಅದೇನೆ ಇರಲಿ ಈತನಿಂದ ಸ್ಥಾಪಿಸಲ್ಪಟ್ಟಂತಹ ಈ ಸಿದ್ಧಾಂತ ಭಾರತದಲ್ಲಂತೂ ಅಗತ್ಯವಿಲ್ಲದೆ ಚಾಲ್ತಿಯಲ್ಲಿದ್ದುಕೊಂಡು ತುಂಬಾ ಉಪದ್ರಕಾರಿಯಾಗಿರುವುದಂತೂ ಸತ್ಯ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ