
ಕರ ಕರಿ ಫ್ರೆಂಡ್ಸ್ ಸೇವಾ ಬಳಗ (ರಿ )ಕರ್ನಾಟಕ ಇದರ 81ನೇ ಸೇವಾ ಯೋಜನೆಯಾಗಿ ಆಸರೆ ಮನೆಯ ಹಸ್ತಾಂತರ ಮಾಡಲಾಯಿತು
ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಕಾರದಿಂದ ರಾಜೀವ್ ನಗರ ಹಿರ್ಗಾನ ದಿನೇಶ್ ರವರು 12 ವರ್ಷದ ಹಿಂದೆ ನಿರ್ಮಾಣ ಮಾಡಿರುವ ಮನೆಗೆ ಮೂಲಭೂತ ಸೌಕರ್ಯವಿಲ್ಲದೆ ಬಹಳ ಆರ್ಥಿಕವಾಗಿ ನೊಂದಿರುವ ಕುಟುಂಬಕ್ಕೆ ಆಸರೆಯಾಗಿ ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ತಂಡ ಕೈ ಜೋಡಿಸಿ ಮನೆಯ ಸಂಪೂರ್ಣ ಕೆಲಸವನ್ನು ಮಾಡಿಕೊಟ್ಟಿರುತ್ತದೆ,
ದಿನೇಶ್ ರವರ ಧರ್ಮಪತ್ನಿ ಕ್ಯಾನ್ಸರ್ ಎಂಬ ಗಂಭೀರ ಕಾಯಿಲೆ ಯಿಂದ ಬಳಲುತ್ತಿ ದ್ದು ಆರೋಗ್ಯ ಬಹಳ ಚಿಂತಾಜನಕವಾಗಿರುವುದರಿಂದ ಈ ಮನೆಯ ಸಂಪೂರ್ಣ ಕೆಲಸವನ್ನು ಮುಗಿಸಿ ಆಸರೆ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಕರಕರಿ ಫ್ರೆಂಡ್ಸ್ ಸೇವಾ ಬಳಗದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಆಸರೆಯ ಮನೆಯ ಉದ್ಘಾಟನೆ ಮತ್ತು ಆಸರೆಯ ಮನೆಯ ಹಸ್ತಾಂತರವನ್ನು ಸನ್ಮಾನ್ಯ ಶ್ರೀ ವಿ ಸುನಿಲ್ ಕುಮಾರ್ ವರು ನೆರವೇರಿಸಿದರು
ಕಾರ್ಯಕ್ರಮದಲ್ಲಿ ಹಿರ್ಗಾನ ಪಂಚಾಯತ್ ಅಧ್ಯಕ್ಷರಾದ ಸುನಿತಾ, ಮಾಜಿ ಅಧ್ಯಕ್ಷರಾದ ಸಂತೋಷ್, ತಾಲೂಕ್ ಪಂಚಾಯತ್ ಸದಸ್ಯರಾದ ರವೀಂದ್ರ ಮಡಿವಾಳ, ನಿಕಟ ಪರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ, ಸದಾನಂದ ಸಾಲಿಯಾನ್ ಕೆರ್ವಾಷೆ, ಬೈಲೂರು ಟೈಗರ್ಸ್ ತಂಡದ ಪ್ರಮುಖರಾದ ಅಖಿಲೇಶ್ ಮಾಸ್ಟರ್,ಮನೆಯ ಮಾಲೀಕರಾದ ದಿನೇಶ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮನೆಯ ಸಂಪೂರ್ಣ ಕಾಮಗಾರಿ ಗಾಗಿ ಸೇವೆ ನೀಡಿದ ಸದಸ್ಯರನ್ನು ಗುರುತಿಸಿ ಅಭಿನಂದಿಸಲಾಯಿತು. ಹಾಗೂ ಈ ಕಾಮಗಾರಿಪೂರ್ಣಗೊಳ್ಳಲು ಸಹಕರಿಸಿದ ಪ್ರತಿಯೊಬ್ಬರ ವಿವರವನ್ನು ಓದಿ ತಿಳಿಸಲಾಯಿತು. ಹಾಗೂ ಸಹಕರಿಸಿದ ದಾನಿಗಳನ್ನು ನಾಲ್ಕನೇ ವರ್ಷದ ಸಂಭ್ರಮಾಚರಣೆಯಲ್ಲಿ ಗುರುತಿಸುವುದಾಗಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತು ಹಾಗೂ ಸ್ವಾಗತವನ್ನು ಆನಂದ್ ಮಾಸ್ಟರ್ ಬೈಲೂರು ಇವರು ನಡೆಸಿಕೊಟ್ಟರು.
ಅಭಿನಂದನಾ ಕಾರ್ಯಕ್ರಮವನ್ನು ಮಂಜುನಾಥ್ ಬೈಲೂರ್ ಇವರು ನಿರ್ವಹಿಸಿಕೊಟ್ಟರು.
ದಾನಿಗಳ ಪಟ್ಟಿಯನ್ನು ವಿಜೇಶ್ ಗೋವಿಂದೂರು ಇವರು ಮುಂದಿಟ್ಟರು
ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು ಸೌಮ್ಯಶೆಟ್ಟಿ ನಡೆಸಿಕೊಟ್ಟರು.