spot_img

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನ ಖ್ಯಾತ ಯೂಟ್ಯೂಬರ್ “ಸಾಲು ಕಿಂಗ್” ಬಂಧನ

Date:

spot_img

ಕಾಸರಗೋಡು: ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ. ಕೊಡಿಯಮ್ಮೆ ಚೆಪ್ಪಿನಡ್ಕದ ನಿವಾಸಿಯಾಗಿರುವ, “ಸಾಲು ಕಿಂಗ್” ಎಂದೇ ಖ್ಯಾತನಾಗಿರುವ ಮೊಹಮ್ಮದ್ ಸಾಲಿ (35) ಬಂಧಿತ ಆರೋಪಿ. ವಿದೇಶದಿಂದ ಹಿಂದಿರುಗುತ್ತಿದ್ದಾಗ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಇತನನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಸುಮಾರು 7 ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ “ಸಾಲು ಕಿಂಗ್ ಮೀಡಿಯಾ”, “ಸಾಲು ಕಿಂಗ್ ವ್ಲಾಗ್ಸ್”, “ಸಾಲು ಕಿಂಗ್ ಫ್ಯಾಮಿಲಿ” ಮುಂತಾದ ಹೆಸರುಗಳಲ್ಲಿ ಸಕ್ರಿಯನಾಗಿದ್ದ ಸಾಲು ಕಿಂಗ್, ಇಂಟರ್ನೆಟ್‌ನಲ್ಲಿ ಗಮನಾರ್ಹ ಅಭಿಮಾನಿ ಬಳಗವನ್ನು ಹೊಂದಿದ್ದನು. 2016ರಲ್ಲಿ ವಿವಾಹವಾಗಿದ್ದ ಈತನಿಗೆ 3 ಮಕ್ಕಳಿದ್ದಾರೆ.

ಪತ್ನಿಯೊಂದಿಗಿನ ಸಂಬಂಧದಲ್ಲಿ ಬಿರುಕು ಉಂಟಾದ ಸಮಯದಲ್ಲಿ, ಸಾಲು ಕಿಂಗ್‌ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ 15 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ನಂತರ ಆ ಬಾಲಕಿಗೆ ಮದುವೆಯ ಭರವಸೆ ನೀಡಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಆರೋಪಿಯು ವಿದೇಶಕ್ಕೆ ಪರಾರಿಯಾಗಿದ್ದನು. ಕೊಯಿಲಾಂಡಿ ಪೊಲೀಸರು ಈತನನ್ನು ಬಂಧಿಸಲು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಶನಿವಾರ ಬೆಳಿಗ್ಗೆ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಕೊಯಿಲಾಂಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೂಗಲ್ ಮ್ಯಾಪ್​ನ ತಪ್ಪು ನಿರ್ದೇಶನ: ಮುಂಬೈನ ಕಂದಕಕ್ಕೆ ಜಾರಿದ ಕಾರು

ತಂತ್ರಜ್ಞಾನದ ಮುಂದುವರಿದ ಬೆಳವಣಿಗೆಗಳು ಜೀವನವನ್ನು ಸರಳಗೊಳಿಸಿರುವ ಜೊತೆಗೆ, ಕೆಲವು ಅನಿರೀಕ್ಷಿತ ಅಪಾಯಗಳಿಗೂ ಕಾರಣವಾಗುತ್ತಿವೆ.

ಜಾರ್ಖಂಡ್ ನ ಗುಮ್ಲಾ ಕಾಡಿನಲ್ಲಿ ಮೂವರು PLFI ನಕ್ಸಲರ ಎನ್‌ಕೌಂಟರ್, ಶಸ್ತ್ರಾಸ್ತ್ರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ PLFI ಸಂಘಟನೆಯ ಮೂವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಯಶಸ್ವಿ

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಸಾರಥಿ: ಉಷಾ ಅಂಚನ್‌ಗೆ ಅಧ್ಯಕ್ಷ ಪಟ್ಟ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ನೆಲ್ಯಾಡಿಯ ಹಿರಿಯ ಕಾಂಗ್ರೆಸ್ ನಾಯಕಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಪ್ರಸ್ತುತ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ.

ಸಮುದ್ರ ಪಾಲಾದ ಮೀನುಗಾರರ ಕುಟುಂಬಕ್ಕೆ ಪರಿಹಾರ: ತಿಂಗಳುಗಟ್ಟಲೆ ಕಾಯುವಿಕೆ, ಕಾಗದಪತ್ರಗಳ ಅಲೆದಾಟ

ಸಮುದ್ರದಲ್ಲಿ ಜೀವ ಹರಣವಾಗಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಪರಿಹಾರ ತಲುಪಲು ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.