ಕಾರ್ಕಳದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನೊಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ಮಾತನಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದೊಂದು ಅಘಾತಕಾರಿ ಬೆಳವಣಿಗೆಯಾಗಿದೆ,
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಮಾತ್ಕಲ್ ಕೊರಗರ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಯೋಜನೆಯಡಿ ರೂ. 02.05 ಕೋಟಿ ಅನುದಾನ ಮಂಜೂರಾಗಿರುತ್ತದೆ ಎಂದು ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಅವರು ತಿಳಿಸಿರುತ್ತಾರೆ.
ಕಾರ್ಕಳದ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕವಿತಾ ಕೃಪಾಲಿನಿ ಎಂಬ ಮಹಿಳೆಗೆ ಕಾರ್ಕಳದ ಅತ್ತೂರು, ದೂಪದಕಟ್ಟೆ ನಿವಾಸಿ ರಾಘವೇಂದ್ರ. ಎಸ್. ಎಂಬುವವರು ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ 9.5 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.
ದಿನಾಂಕ 4-06-2025 ರಂದು ಶ್ರೀ ವಾಸುಶೆಟ್ಟಿ ಮತ್ತು ಅವರ ಸಹೋದರ ಶ್ರೀ ಹರೀಶ್ ಶೆಟ್ಟಿ ನರಕೆ, ನೆಲ್ಲಿಕಟ್ಟೆ ಇವರು ಸ. ಕಿ. ಪ್ರಾ. ಶಾಲೆ ನೆಲ್ಲಿಕಟ್ಟೆ ಹಿರ್ಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿರುತ್ತಾರೆ.