
ಇರಲು ಸರಿಯಾದ ಮನೆ, ಹೊತ್ತಿಗೆ ತಿನ್ನಲು ಸರಿಯಾದ ಆಹಾರವಿಲ್ಲದಿದ್ದರೂ ಈತನಿಗೆ ರನ್ ಗಳ ಹಸಿವಿದೆ. ಕೇವಲ ಮುರ್ನಾಲ್ಕು ವರ್ಷ ಕಾದುನೋಡಿ, ಈ ಹುಡುಗ ಭಾರತೀಯ ಕ್ರಿಕೆಟ್ ನ ದಂತಕತೆಯಾಗುತ್ತಾನೆ!’’
– ಹೀಗೊಂದು ಮಾತು ಕೇಳಿ ಬಂದಿರುವುದು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಭರವಸೆಯ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಬಗ್ಗೆ. ಹೌದು, ಕೋಚ್ ಜ್ವಾಲಾ ಸಿಂಗ್ ಅವರು ಸುದ್ದಿಮೂಲವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಶಸ್ವಿ ಜೈಸ್ವಾಲ್ ಅವರ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮುಂಬೈನ ಆಝಾದ್ ಮೈದಾನದಲ್ಲಿ ನೂರಾರು ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡಿರುವ ಜ್ವಾಲಾ ಸಿಂಗ್ ಅವರು ಯಶಸ್ವಿ ಜೈಸ್ವಾಲ್ ಅವರನ್ನು ಭವಿಷ್ಯದ ತಾರೆ ಎಂದೇ ಬಣ್ಣಿಸಿದ್ದಾರೆ.