spot_img

ಕಾಲ್ಬೆರಳುಗಳ ನಡುವೆ ಉಂಟಾಗುವ ತುರಿಕೆ ಮತ್ತು ಅಲರ್ಜಿ ನಿವಾರಣೆಗೆ ಪ್ರಯೋಜನಕಾರಿ ಮನೆಮದ್ದುಗಳು !

Date:

ಮಳೆಗಾಲ ಆರಂಭವಾದರೆ ಅಲರ್ಜಿ, ತುರಿಕೆ ಮತ್ತು ಫಂಗಲ್ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಕಾಲ್ಬೆರಳುಗಳ ಮಧ್ಯೆ ಉಂಟಾಗುವ ತುರಿಕೆ ಜನರಿಗೆ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತದೆ. ಧೀರ್ಘ ಕಾಲದ ಬೆವರುವಿಕೆ , ಕೊಳಚೆ ನೀರಿನ ಸಂಪರ್ಕ ಮತ್ತು ಸ್ವಚ್ಚತೆಯ ಕೊರತೆಯಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಇವುಗಳಿಗೆ ಮನೆಯಲ್ಲೇ ಇರುವ ಸಾಮಾನ್ಯ ವಸ್ತುಗಳಿಂದ ಪರಿಹಾರ ಪಡೆಯಬಹುದು.

ಮನೆಮದ್ದುಗಳ ಪಟ್ಟಿ:

ಅಡಿಗೆ ಸೋಡಾ (Baking Soda)
ಅಡಿಗೆ ಸೋಡಾ ತುರಿಕೆಗೆ ಉತ್ತಮ ಮನೆಮದ್ದು. ಇದು ತಂಪು ತಕ್ಷಣ ನೀಡುತ್ತದೆ ಮತ್ತು ಸೋಂಕು ಹರಡುವುದನ್ನು ತಡೆಯುತ್ತದೆ.
➡ 2 ಕಪ್ ಬಿಸಿ ನೀರಿಗೆ 2 ಚಮಚ ಅಡಿಗೆ ಸೋಡಾ ಹಾಕಿ ಕಾಲನ್ನು 15-20 ನಿಮಿಷ ನೆನೆಸಿರಿ.

ಬೇವಿನ ಎಲೆಗಳು (Neem Leaves)
ಬೇವಿನ ಎಲೆಗಳಲ್ಲಿ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ನಾಶಕ ಗುಣಗಳಿವೆ.
➡ ಬೇವಿನ ಎಲೆಗಳನ್ನು ಕುದಿಸಿ, ತಣ್ಣಗಾದ ನೀರನ್ನು ಅಲರ್ಜಿ ಪ್ರದೇಶಕ್ಕೆ ಹಚ್ಚಿರಿ.

ಟೀ ಟ್ರೀ ಎಣ್ಣೆ (Tea Tree Oil)
ಟೀ ಟ್ರೀ ಎಣ್ಣೆ ಚರ್ಮದ ಸೋಂಕು ನಿವಾರಣೆಗೆ ಉತ್ತಮ.
➡ 5 ಹನಿ ಟೀ ಟ್ರೀ ಎಣ್ಣೆಯನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಹಚ್ಚಿರಿ.

ಆಪಲ್ ಸೈಡರ್ ವಿನೆಗರ್ (Apple Cider Vinegar)
ಇದು ಫಂಗಲ್ ಸೋಂಕು ನಿವಾರಣೆಗೆ ಒಳ್ಳೆಯದು.
➡ ಸಮ ಪ್ರಮಾಣದ ಆಪಲ್ ಸೈಡರ್ ವಿನೆಗರ್ ಮತ್ತು ನೀರಿನಲ್ಲಿ ಕಾಲುಗಳನ್ನು 15-20 ನಿಮಿಷ ನೆನೆಸಿ.

ತೆಂಗಿನ ಎಣ್ಣೆ (Coconut Oil)
ತೆಂಗಿನ ಎಣ್ಣೆ ತುರಿಕೆ ಮತ್ತು ಒಣತನೆಯನ್ನು ನಿವಾರಿಸುತ್ತದೆ.
➡ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿರಿ.

ಮುಖ್ಯ ಸಲಹೆ:
ಚರ್ಮವು ಒದ್ದೆಯಾಗಿ ಇರುವುದನ್ನು ತಪ್ಪಿಸಿ, ಪದೇಪದೇ ತೊಳೆಯುವುದು ಮತ್ತು ಒಣಗಿಸುವುದು ಮುಖ್ಯ. ಕಾಲುಗಳಿಗೆ ಗಾಳಿಯು ಸಿಗುವಂತಹ ಶೂಗಳನ್ನು ಧರಿಸಿ. ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಅತಿವೇಗದಿಂದ ಬಸ್ ಚಲಾಯಿಸಿದ ಚಾಲಕನ ಬಂಧನ – ಬಸ್ಸು ವಶಕ್ಕೆ

ಉಡುಪಿ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಖಾಸಗಿ ಬಸ್ಸು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಇಸ್ರೇಲ್‌ಗೆ ಡೇಟಾ ಸೋರಿಕೆ ಶಂಕೆ: ಜನರಿಗೆ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಲು ಸೂಚಿಸಿದ ಇರಾನ್

ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಇಸ್ರೇಲ್‌ಗೆ ಸೋರಿಸುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಇರಾನಿನ ಸರ್ಕಾರಿ ದೂರದರ್ಶನವು ದೇಶದ ನಾಗರಿಕರಿಗೆ ವಾಟ್ಸಾಪ್ ಅನ್ನು ತಮ್ಮ ಮೊಬೈಲ್‌ಗಳಿಂದ ಡಿಲೀಟ್ ಮಾಡಿಕೊಳ್ಳುವಂತೆ ಮಂಗಳವಾರ ಎಚ್ಚರಿಕೆ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಾಳಿ: ಗಾಂಜಾ, ಮೊಬೈಲ್, ನಗದು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೋಮವಾರ ಬೆಳಿಗ್ಗೆ ಸಿಸಿಬಿ (ಸಿಟಿ ಕ್ರೈಮ್ ಬ್ರಾಂಚ್) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿದೆ.

ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ₹3,000ಕ್ಕೆ ವಾರ್ಷಿಕ ಪಾಸ್ ಘೋಷಣೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸದಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ.