spot_img

ಪ್ರಯಾಣದ ವೇಳೆ ವಾಂತಿ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದುಗಳು

Date:

spot_img

ನೀವು ಪ್ರಯಾಣ ಮಾಡುವಾಗ ವಾಂತಿ ಅಥವಾ ವಾಕರಿಕೆ ಸಮಸ್ಯೆ ಎದುರಿಸುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ, ವಾಹನದ ಚಲನೆ ಮತ್ತು ದೇಹದ ಸಮತೋಲನದಲ್ಲಿನ ವ್ಯತ್ಯಾಸ. ಇದು ಪ್ರಯಾಣದ ಆನಂದವನ್ನು ಹಾಳು ಮಾಡುತ್ತದೆ. ಆದರೆ, ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ವಾಕರಿಕೆ ಮತ್ತು ವಾಂತಿಗೆ ಪರಿಣಾಮಕಾರಿ ಪರಿಹಾರಗಳು

  • ಶುಂಠಿ: ಸ್ವಲ್ಪ ಶುಂಠಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ ಅಥವಾ ಶುಂಠಿಯನ್ನು ನೀರಿನಲ್ಲಿ ಕದಿಸಿ ಕುಡಿಯುವುದರಿಂದ ವಾಂತಿ ನಿಯಂತ್ರಣಕ್ಕೆ ಬರುತ್ತದೆ.
  • ನಿಂಬೆ ಮತ್ತು ಉಪ್ಪು: ನಿಂಬೆಹಣ್ಣನ್ನು ಬಾಯಿ ಹಾಕಿ ಸವಿಯುವುದರಿಂದ ಅಥವಾ ಉಪ್ಪು ಮತ್ತು ಸಕ್ಕರೆ ಬೆರೆಸಿದ ನಿಂಬೆ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯುವುದರಿಂದ ಪರಿಹಾರ ಸಿಗುತ್ತದೆ.
  • ಲವಂಗ: ಒಂದು ಚಮಚ ಲವಂಗವನ್ನು ಒಂದು ಕಪ್ ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಪ್ರಯಾಣದ ವಾಂತಿಯಿಂದ ಮುಕ್ತಿ ಸಿಗುತ್ತದೆ.
  • ಸೋಂಪು: ಒಂದೆರಡು ಸೋಂಪು ಕಾಳುಗಳನ್ನು ನಿಧಾನವಾಗಿ ಜಗಿದು ತಿನ್ನುವುದು ಅಥವಾ ಸೋಂಪು ನೀರನ್ನು ಕುಡಿಯುವುದು ಕೂಡ ಉತ್ತಮ ಪರಿಹಾರ.
  • ಕಿತ್ತಳೆ ಹಣ್ಣು: ಪ್ರಯಾಣದ ಸಮಯದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಅಥವಾ ಕಿತ್ತಳೆ ರಸವನ್ನು ಕುಡಿಯುವುದರಿಂದ ವಾಂತಿ ಬರುವುದಿಲ್ಲ.
  • ಆಳವಾದ ಉಸಿರಾಟ: ವಾಕರಿಕೆಯಾದಾಗ ಗಾಡಿ ನಿಲ್ಲಿಸಿ ಆಳವಾದ ಉಸಿರು ತೆಗೆದುಕೊಳ್ಳಿ. ಈ ವಿಧಾನವು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮಗೆ ಹಿತ ನೀಡುತ್ತದೆ.
  • ನೀರು ಕುಡಿಯುವುದು: ವಾಂತಿಯಾದಾಗ ಒಮ್ಮೆಲೆ ಹೆಚ್ಚು ನೀರು ಕುಡಿಯದೆ, ಸ್ವಲ್ಪ ಸ್ವಲ್ಪವೇ ನೀರನ್ನು ಕುಡಿಯಿರಿ.

ಈ ಮನೆಮದ್ದುಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದು. ಜೊತೆಗೆ, ಪ್ರಯಾಣದ ಸಮಯದಲ್ಲಿ ಸ್ವಚ್ಛವಾದ ಆಹಾರವನ್ನು ಸೇವಿಸುವುದು ಮತ್ತು ಅನಗತ್ಯವಾಗಿ ಭಾರೀ ಆಹಾರವನ್ನು ತಿನ್ನುವುದನ್ನು ತಪ್ಪಿಸುವುದು ಮುಖ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಅಗಸ್ಟ್ 30 ಕ್ಕೆ ಶಶೀಲ್ ಜಿ ನಮೋಶಿ

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ 13 ನೇ ಪದವಿ ಪ್ರದಾನ ಸಮಾರಂಭವು ಆಗಸ್ಟ್ 30, 2025 ರ ಶನಿವಾರ ಬೆಳಿಗ್ಗೆ 10:00 ಗಂಟೆಗೆ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೇಂದ್ರ (ಎಸ್‌ಎಸಿ) ಪಿಡಿಎ ಸಭಾಂಗಣದಲ್ಲಿ ನಡೆಯಲಿದೆ.

ಭುವನೇಶ್ವರದಲ್ಲಿ ಭೀಕರ ಘಟನೆ: ಮಹಿಳೆಯನ್ನು ಅಪಹರಿಸಿ 6 ತಿಂಗಳು ಸಾಮೂಹಿಕ ಅತ್ಯಾಚಾರ

ಮಹಿಳೆಯೊಬ್ಬರನ್ನು ಅಪಹರಿಸಿ, ಆರು ತಿಂಗಳ ಕಾಲ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಭೀಕರ ಘಟನೆಯು ಭುವನೇಶ್ವರದಲ್ಲಿ ಬೆಳಕಿಗೆ ಬಂದಿದೆ.

ವರದಕ್ಷಿಣೆ ಕಿರುಕುಳ: ಬೆಂಗಳೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು, ಪತಿ ಪೋಲೀಸರ ವಶಕ್ಕೆ

ಮದುವೆಯಾಗಿ ಕೇವಲ ಮೂರೇ ವರ್ಷಕ್ಕೆ 26 ವರ್ಷದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ.

ಅರ್ಧ ರಾತ್ರಿವರೆಗೂ ಧ್ವನಿವರ್ಧಕ ಗಲಾಟೆ: ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್

ನಿಯಮ ಮೀರಿ ಧ್ವನಿವರ್ಧಕ ಬಳಸಿದ ಆರೋಪದ ಮೇಲೆ ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ, ಪುಂಜಾಲಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.