spot_img

ಉಪ್ಪಿನ ಅತಿಯಾದ ಸೇವನೆ ಅಪಾಯಕಾರಿ !

Date:

spot_img

ಆಹಾರಕ್ಕೆ ರುಚಿ ನೀಡುವ ಉಪ್ಪು, ಅತಿಯಾದರೆ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಫೋಟಕ ವರದಿಯೊಂದನ್ನು ಬಹಿರಂಗಪಡಿಸಿದೆ. ಉಪ್ಪಿನ ಅತಿಯಾದ ಸೇವನೆಯು ಭಾರತದ ಹೆಚ್ಚಿನ ಜನಸಂಖ್ಯೆಯನ್ನು ಸಾಂಕ್ರಾಮಿಕ ರೋಗಗಳ ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು WHO ಎಚ್ಚರಿಸಿದೆ.

ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಅತಿಯಾದ ಉಪ್ಪು ಸೇವನೆಯೇ ಪ್ರಮುಖ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. WHO ಮಾರ್ಗಸೂಚಿಗಳ ಪ್ರಕಾರ, ವಯಸ್ಕರೊಬ್ಬರು ದಿನಕ್ಕೆ ಗರಿಷ್ಠ 5 ಗ್ರಾಂ ಉಪ್ಪನ್ನು ಮಾತ್ರ ಸೇವಿಸಬೇಕು. ಆದರೆ, ಭಾರತದಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳು ದಿನಕ್ಕೆ ಸರಾಸರಿ 9.2 ಗ್ರಾಂ ಉಪ್ಪನ್ನು ಸೇವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಸರಾಸರಿ 5.6 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಲಾಗುತ್ತಿದೆ, ಇದು ಸೂಚಿತ ಪ್ರಮಾಣಕ್ಕಿಂತ ಹೆಚ್ಚಾಗಿದೆ.

ಉಪ್ಪು ಸೇವನೆಯಲ್ಲಿ ಕೇವಲ ಸಣ್ಣ ಬದಲಾವಣೆ ಮಾಡುವುದರಿಂದಲೂ ರಕ್ತದೊತ್ತಡವನ್ನು ಸುಮಾರು 7/4 mmHg ರಷ್ಟು ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಪ್ಯಾಕ್ ಮಾಡಿದ ತಿಂಡಿಗಳು, ನೂಡಲ್ಸ್ ಮತ್ತು ಫಾಸ್ಟ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡುವಂತೆ ಹಾಗೂ ಬೇಯಿಸಿದ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಉಪ್ಪು ಆಹಾರಕ್ಕೆ ಅತ್ಯಗತ್ಯ ಅಂಶವಾಗಿದ್ದರೂ, ಹೆಚ್ಚು ಉಪ್ಪು ಸೇವಿಸುವುದರಿಂದ ಹಲವಾರು ಸಮಸ್ಯೆಗಳು ಉಂಟಾಗಬಹುದು. ಬಿಳಿ ಉಪ್ಪು, ಕಪ್ಪು ಉಪ್ಪು, ಕಲ್ಲು ಉಪ್ಪು ಮತ್ತು ಗುಲಾಬಿ ಉಪ್ಪು ಸೇರಿದಂತೆ ಯಾವುದೇ ವಿಧದ ಉಪ್ಪಿನ ಅತಿಯಾದ ಸೇವನೆಯು ದೇಹಕ್ಕೆ ಒಳ್ಳೆಯದಲ್ಲ ಎಂದು WHO ಕಳವಳ ವ್ಯಕ್ತಪಡಿಸಿದೆ. ಹೆಚ್ಚು ಉಪ್ಪಿಲ್ಲದ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ ಎಂಬ ಅಭ್ಯಾಸವು ಒಂದು ಹಂತದಲ್ಲಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂದು ಸಂಸ್ಥೆ ಎಚ್ಚರಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

NVIDIAಗೆ ಬ್ರಾಡ್‌ಕಾಮ್ ಸವಾಲು: ಹೊಸ ಟೊಮಾಹಾಕ್ ಅಲ್ಟ್ರಾ ನೆಟ್‌ವರ್ಕಿಂಗ್ ಚಿಪ್ ಬಿಡುಗಡೆ

ಬ್ರಾಡ್‌ಕಾಮ್ಸ್ (AVGO.O), ಮಂಗಳವಾರ ಹೊಸ ಟ್ಯಾಬ್ ಚಿಪ್ ಘಟಕವನ್ನು ಅನಾವರಣಗೊಳಿಸಿದೆ, ಇದು ಕೃತಕ ಬುದ್ಧಿಮತ್ತೆ ಡೇಟಾ ಕ್ರಂಚಿಂಗ್ ಅನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹೊಸ ನೆಟ್‌ವರ್ಕಿಂಗ್ ಪ್ರೊಸೆಸರ್ ಆಗಿದೆ

ಕಿವಿ ಹಣ್ಣು: ಆರೋಗ್ಯದ ಅಮೃತ, ತಪ್ಪದೇ ಸೇವಿಸಿ!!

ಕಿವಿ ಹಣ್ಣು, ಚೀನಾದ ಮಣ್ಣಿನಿಂದ ಹುಟ್ಟಿ, ನ್ಯೂಜಿಲೆಂಡ್‌ನಲ್ಲಿ ಜಾಗತಿಕವಾಗಿ ಬೆಳೆದು ನಿಂತಿರುವ ಒಂದು ಪುಟ್ಟ ಪೌಷ್ಟಿಕ ನಿಧಿ

ನೀರೆ ಗ್ರಾಮದಲ್ಲಿ ಪೊಲೀಸ್ ಜಾಗೃತಿ ಸಭೆ: ಸೈಬರ್ ಕ್ರೈಂ, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಉಮೇಶ್ ನಾಯಕ್

ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್‌ಸ್ಟೇಬಲ್) ಉಮೇಶ್ ನಾಯಕ್ ಅವರು ನೀರೆ ಗ್ರಾಮದ ಬೀಟ್ ಪೊಲೀಸ್ ಆಗಿ, ಹಗಲು ಗ್ರಾಮ ಗಸ್ತು ಸಮಯದಲ್ಲಿ ಮಹತ್ವದ ಕಾರ್ಯಕ್ರಮವೊಂದನ್ನು ನಡೆಸಿದರು.

ದಿನ ವಿಶೇಷ – ಜಾಗತಿಕ ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆ

ಈ ದಿನವು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಯನ್ನು ನೆನಪಿಸಿಕೊಳ್ಳುವುದರೊಂದಿಗೆ, ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಜಾಗೃತಿ ಮೂಡಿಸುತ್ತದೆ.