spot_img

ಬಾಳೆ ಹೂವು: ಆರೋಗ್ಯಕ್ಕೆ ಅಮೃತ, ರುಚಿಗೆ ರಾಜ

Date:

spot_img

ಸಾಮಾನ್ಯವಾಗಿ ಬಾಳೆಹಣ್ಣು ಮತ್ತು ಬಾಳೆಕಾಯಿ ಮಾತ್ರ ಬಳಕೆ ಮಾಡಲಾಗುತ್ತದೆ. ಆದರೆ, ಬಾಳೆ ಹೂವಿನಲ್ಲಿ (ಬಾಳೆ ಕುಂಡಿಗೆ) ಹಲವು ಬಗೆಯ ರುಚಿಕರ ಮತ್ತು ಆರೋಗ್ಯಕರ ಖಾದ್ಯಗಳನ್ನು ತಯಾರಿಸಬಹುದು. ಪಲ್ಯ, ಚಟ್ನಿ, ಪಕೋಡ ಮಾತ್ರವಲ್ಲದೆ, ಪತ್ರೊಡೆಯಂತಹ ಹೂವೊಡೆ, ಗರಿಗರಿಯಾದ ಫಿಂಗರ್ ಚಿಪ್ಸ್ ಕೂಡ ಇದರಿಂದ ಮಾಡಬಹುದು.

ಖಾದ್ಯ ತಯಾರಿಸುವ ವಿಧಾನಗಳು

  • ಬಾಳೆ ಹೂವಿನ ಫಿಂಗರ್ ಚಿಪ್ಸ್: ಬಾಳೆ ಹೂವಿನ ಎಸಳಿನಲ್ಲಿರುವ ಶಲಾಕೆಗಳನ್ನು ತೆಗೆದು, ಉಪ್ಪು, ಖಾರ, ಮಸಾಲೆ, ಜೋಳದ ಹಿಟ್ಟು ಹಾಕಿ ಮಿಶ್ರಣ ಮಾಡಿ. ಬಿಸಿಯಾದ ಎಣ್ಣೆಯಲ್ಲಿ ಬಿಡಿಬಿಡಿಯಾಗಿ ಹುರಿದರೆ ಗರಿಗರಿಯಾದ ಚಿಪ್ಸ್ ಸಿದ್ಧ. ಇದನ್ನು ಟೊಮೆಟೋ ಕೆಚಪ್ ಅಥವಾ ಪುದೀನಾ ಚಟ್ನಿಯೊಂದಿಗೆ ಸವಿಯಬಹುದು.
  • ಬಾಳೆ ಹೂ ಪಕೋಡ: ಸಣ್ಣಗೆ ಹೆಚ್ಚಿದ ಬಾಳೆ ಹೂವಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಹಸಿಮೆಣಸು, ಶುಂಠಿ, ಈರುಳ್ಳಿ ಮತ್ತು ಉಪ್ಪನ್ನು ಸೇರಿಸಿ ಕಲಸಿ. ಬಿಸಿ ಎಣ್ಣೆಯಲ್ಲಿ ಪಕೋಡದ ಹಾಗೆ ಕರಿದರೆ ಸಂಜೆಗೆ ಸೂಕ್ತವಾದ ಗರಂ ಗರಂ ತಿನಿಸು ಸಿದ್ಧ.
  • ಬಾಳೆ ಹೂವಿನ ಪಲ್ಯ: ಸಣ್ಣಗೆ ಹೆಚ್ಚಿದ ಬಾಳೆ ಹೂವಿಗೆ ಉಪ್ಪು, ಬೆಲ್ಲ, ಮೆಣಸಿನ ಪುಡಿ ಮತ್ತು ಹುಣಸೆ ರಸ ಸೇರಿಸಿ ಬೇಯಿಸಿ. ನಂತರ ತೆಂಗಿನಕಾಯಿ ತುರಿ, ಉದ್ದಿನಬೇಳೆ, ಕರಿಬೇವಿನೊಂದಿಗೆ ಒಗ್ಗರಣೆ ಕೊಟ್ಟರೆ ರುಚಿಕರವಾದ ಪಲ್ಯ ಸಿದ್ಧ. ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ತಿನ್ನಬಹುದು.
  • ಬಾಳೆ ಕುಂಡಿಗೆ ಚಟ್ನಿ: ಬೇಯಿಸಿದ ಬಾಳೆ ಹೂವಿಗೆ ಕೆಂಪು ಮೆಣಸು, ಹುಣಸೆಹುಳಿ, ಬೆಲ್ಲ ಮತ್ತು ಉಪ್ಪು ಸೇರಿಸಿ ರುಬ್ಬಿ, ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರೆ ಚಟ್ನಿ ಸಿದ್ಧ. ಇದನ್ನು ಗಂಜಿಯೊಂದಿಗೆ ಸೇವಿಸಿದರೆ ಅತ್ಯಂತ ರುಚಿಕರ.
  • ಬಾಳೆ ಹೂವಿನ ರೊಟ್ಟಿ: ಬಾಳೆ ಕುಂಡಿಗೆಯನ್ನು ಸಣ್ಣಗೆ ಹೆಚ್ಚಿ ಅಕ್ಕಿ ಹಿಟ್ಟಿನೊಂದಿಗೆ ಕಲಸಿ, ಬಾಳೆ ಎಲೆಯ ಮೇಲೆ ತಟ್ಟಿಕೊಂಡು ರೊಟ್ಟಿ ಮಾಡಬಹುದು.

ತಯಾರಿ ಕುರಿತ ವಿಶೇಷ ಟಿಪ್ಸ್: ಬಾಳೆ ಹೂವನ್ನು ಹೆಚ್ಚುವಾಗ ನೂಲಿನಂಶ ಮತ್ತು ಕಪ್ಪಾಗುವುದನ್ನು ತಡೆಯಲು ಹೆಚ್ಚಿದ ಹೋಳುಗಳನ್ನು ಒಂದು ಚಮಚ ಎಣ್ಣೆ ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿದ ನೀರಿಗೆ ಹಾಕಿ. ಹಾಗೆಯೇ, ಪ್ರತಿ ಎಸಳಿನಲ್ಲಿರುವ ಗಟ್ಟಿಯಾದ ಶಲಾಕೆಗಳನ್ನು ತಾಳ್ಮೆಯಿಂದ ತೆಗೆದು ಹಾಕುವುದು ಅಗತ್ಯ.

ಔಷಧೀಯ ಉಪಯೋಗಗಳು

ರಂಭಾ ಪುಷ್ಪ, ಕದಲೀ ಪುಷ್ಪ ಎಂದು ಕರೆಯಲ್ಪಡುವ ಬಾಳೆ ಕುಂಡಿಗೆಯು ಔಷಧೀಯ ಗುಣಗಳನ್ನು ಹೊಂದಿದೆ.

  • ಬಾಳೆ ಹೂವು ಸಿಹಿ ಮತ್ತು ಒಗರು ರುಚಿಯನ್ನು ಹೊಂದಿದ್ದು, ತಂಪಿನ ಗುಣವನ್ನು ಹೊಂದಿದೆ. ಇದು ವಾತ ಮತ್ತು ಪಿತ್ತ ದೋಷಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
  • ಆಯುರ್ವೇದದ ಪ್ರಕಾರ, ಇದನ್ನು ರಕ್ತಪಿತ್ತ, ಮಧುಮೇಹ ಮತ್ತು ಕ್ಷಯ ರೋಗಗಳ ನಿವಾರಣೆಗೆ ಬಳಸುತ್ತಾರೆ.
  • ಅಧಿಕ ಮುಟ್ಟಿನ ಸ್ರಾವವಿದ್ದರೆ, ಇದನ್ನು ಮೊಸರಿನ ಜೊತೆ ಸೇರಿಸಿ ಸೇವಿಸಿದರೆ ನಿಯಂತ್ರಣಕ್ಕೆ ಬರುತ್ತದೆ.
  • ಬಾಳೆ ಹೂವು ಪೊಟ್ಯಾಶಿಯಂ, ಟ್ಯಾನಿನ್‌, ವಿಟಮಿನ್ ಸಿ, ಬಿ, ಮತ್ತು ಲವಣಾಂಶಗಳಿಂದ ಸಮೃದ್ಧವಾಗಿದೆ.
  • ಇದರ ಒಳಗಿನ ಎಳೆ ತಿರುಳನ್ನು ಜಗಿಯುವುದರಿಂದ ಬಾಯಿ ಹುಣ್ಣು, ದುರ್ವಾಸನೆ ಮತ್ತು ಒಸಡಿನ ರಕ್ತಸ್ರಾವ ಶಮನಗೊಳ್ಳುತ್ತದೆ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ ಬಡ್ಡಿ ವ್ಯಾಪಾರಿ ಹತ್ಯೆ, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧನ

ಕಾರ್ಕಳದ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಬಸ್ ಚಾಲಕನನ್ನು ಬಂಧಿಸಲಾಗಿದೆ.

ಉಡುಪಿ ಉಚ್ಚಿಲ ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಜರಗಲಿರುವ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಬಿಡುಗಡೆಗೊಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಲ್ಕು ಬಾರಿ ಕರೆ ಮಾಡಿದರೂ ಉತ್ತರಿಸದ ಮೋದಿ: ವರದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚಿನ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ನಾಲ್ಕು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಜರ್ಮನ್‌ನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.

ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಂದ ಸೊಸೆ

ಪ್ರಿಯಕರನ ಜೊತೆ ಸೇರಿ ಸೊಸೆಯೊಬ್ಬಳು ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದಲ್ಲಿ ನಡೆದಿದೆ.