spot_img

ಬಾಳೆ ಹೂವು: ಆರೋಗ್ಯಕ್ಕೆ ಅಮೃತ, ರುಚಿಗೆ ರಾಜ

Date:

spot_img
spot_img

ಸಾಮಾನ್ಯವಾಗಿ ಬಾಳೆಹಣ್ಣು ಮತ್ತು ಬಾಳೆಕಾಯಿ ಮಾತ್ರ ಬಳಕೆ ಮಾಡಲಾಗುತ್ತದೆ. ಆದರೆ, ಬಾಳೆ ಹೂವಿನಲ್ಲಿ (ಬಾಳೆ ಕುಂಡಿಗೆ) ಹಲವು ಬಗೆಯ ರುಚಿಕರ ಮತ್ತು ಆರೋಗ್ಯಕರ ಖಾದ್ಯಗಳನ್ನು ತಯಾರಿಸಬಹುದು. ಪಲ್ಯ, ಚಟ್ನಿ, ಪಕೋಡ ಮಾತ್ರವಲ್ಲದೆ, ಪತ್ರೊಡೆಯಂತಹ ಹೂವೊಡೆ, ಗರಿಗರಿಯಾದ ಫಿಂಗರ್ ಚಿಪ್ಸ್ ಕೂಡ ಇದರಿಂದ ಮಾಡಬಹುದು.

ಖಾದ್ಯ ತಯಾರಿಸುವ ವಿಧಾನಗಳು

  • ಬಾಳೆ ಹೂವಿನ ಫಿಂಗರ್ ಚಿಪ್ಸ್: ಬಾಳೆ ಹೂವಿನ ಎಸಳಿನಲ್ಲಿರುವ ಶಲಾಕೆಗಳನ್ನು ತೆಗೆದು, ಉಪ್ಪು, ಖಾರ, ಮಸಾಲೆ, ಜೋಳದ ಹಿಟ್ಟು ಹಾಕಿ ಮಿಶ್ರಣ ಮಾಡಿ. ಬಿಸಿಯಾದ ಎಣ್ಣೆಯಲ್ಲಿ ಬಿಡಿಬಿಡಿಯಾಗಿ ಹುರಿದರೆ ಗರಿಗರಿಯಾದ ಚಿಪ್ಸ್ ಸಿದ್ಧ. ಇದನ್ನು ಟೊಮೆಟೋ ಕೆಚಪ್ ಅಥವಾ ಪುದೀನಾ ಚಟ್ನಿಯೊಂದಿಗೆ ಸವಿಯಬಹುದು.
  • ಬಾಳೆ ಹೂ ಪಕೋಡ: ಸಣ್ಣಗೆ ಹೆಚ್ಚಿದ ಬಾಳೆ ಹೂವಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಹಸಿಮೆಣಸು, ಶುಂಠಿ, ಈರುಳ್ಳಿ ಮತ್ತು ಉಪ್ಪನ್ನು ಸೇರಿಸಿ ಕಲಸಿ. ಬಿಸಿ ಎಣ್ಣೆಯಲ್ಲಿ ಪಕೋಡದ ಹಾಗೆ ಕರಿದರೆ ಸಂಜೆಗೆ ಸೂಕ್ತವಾದ ಗರಂ ಗರಂ ತಿನಿಸು ಸಿದ್ಧ.
  • ಬಾಳೆ ಹೂವಿನ ಪಲ್ಯ: ಸಣ್ಣಗೆ ಹೆಚ್ಚಿದ ಬಾಳೆ ಹೂವಿಗೆ ಉಪ್ಪು, ಬೆಲ್ಲ, ಮೆಣಸಿನ ಪುಡಿ ಮತ್ತು ಹುಣಸೆ ರಸ ಸೇರಿಸಿ ಬೇಯಿಸಿ. ನಂತರ ತೆಂಗಿನಕಾಯಿ ತುರಿ, ಉದ್ದಿನಬೇಳೆ, ಕರಿಬೇವಿನೊಂದಿಗೆ ಒಗ್ಗರಣೆ ಕೊಟ್ಟರೆ ರುಚಿಕರವಾದ ಪಲ್ಯ ಸಿದ್ಧ. ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ತಿನ್ನಬಹುದು.
  • ಬಾಳೆ ಕುಂಡಿಗೆ ಚಟ್ನಿ: ಬೇಯಿಸಿದ ಬಾಳೆ ಹೂವಿಗೆ ಕೆಂಪು ಮೆಣಸು, ಹುಣಸೆಹುಳಿ, ಬೆಲ್ಲ ಮತ್ತು ಉಪ್ಪು ಸೇರಿಸಿ ರುಬ್ಬಿ, ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರೆ ಚಟ್ನಿ ಸಿದ್ಧ. ಇದನ್ನು ಗಂಜಿಯೊಂದಿಗೆ ಸೇವಿಸಿದರೆ ಅತ್ಯಂತ ರುಚಿಕರ.
  • ಬಾಳೆ ಹೂವಿನ ರೊಟ್ಟಿ: ಬಾಳೆ ಕುಂಡಿಗೆಯನ್ನು ಸಣ್ಣಗೆ ಹೆಚ್ಚಿ ಅಕ್ಕಿ ಹಿಟ್ಟಿನೊಂದಿಗೆ ಕಲಸಿ, ಬಾಳೆ ಎಲೆಯ ಮೇಲೆ ತಟ್ಟಿಕೊಂಡು ರೊಟ್ಟಿ ಮಾಡಬಹುದು.

ತಯಾರಿ ಕುರಿತ ವಿಶೇಷ ಟಿಪ್ಸ್: ಬಾಳೆ ಹೂವನ್ನು ಹೆಚ್ಚುವಾಗ ನೂಲಿನಂಶ ಮತ್ತು ಕಪ್ಪಾಗುವುದನ್ನು ತಡೆಯಲು ಹೆಚ್ಚಿದ ಹೋಳುಗಳನ್ನು ಒಂದು ಚಮಚ ಎಣ್ಣೆ ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿದ ನೀರಿಗೆ ಹಾಕಿ. ಹಾಗೆಯೇ, ಪ್ರತಿ ಎಸಳಿನಲ್ಲಿರುವ ಗಟ್ಟಿಯಾದ ಶಲಾಕೆಗಳನ್ನು ತಾಳ್ಮೆಯಿಂದ ತೆಗೆದು ಹಾಕುವುದು ಅಗತ್ಯ.

ಔಷಧೀಯ ಉಪಯೋಗಗಳು

ರಂಭಾ ಪುಷ್ಪ, ಕದಲೀ ಪುಷ್ಪ ಎಂದು ಕರೆಯಲ್ಪಡುವ ಬಾಳೆ ಕುಂಡಿಗೆಯು ಔಷಧೀಯ ಗುಣಗಳನ್ನು ಹೊಂದಿದೆ.

  • ಬಾಳೆ ಹೂವು ಸಿಹಿ ಮತ್ತು ಒಗರು ರುಚಿಯನ್ನು ಹೊಂದಿದ್ದು, ತಂಪಿನ ಗುಣವನ್ನು ಹೊಂದಿದೆ. ಇದು ವಾತ ಮತ್ತು ಪಿತ್ತ ದೋಷಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
  • ಆಯುರ್ವೇದದ ಪ್ರಕಾರ, ಇದನ್ನು ರಕ್ತಪಿತ್ತ, ಮಧುಮೇಹ ಮತ್ತು ಕ್ಷಯ ರೋಗಗಳ ನಿವಾರಣೆಗೆ ಬಳಸುತ್ತಾರೆ.
  • ಅಧಿಕ ಮುಟ್ಟಿನ ಸ್ರಾವವಿದ್ದರೆ, ಇದನ್ನು ಮೊಸರಿನ ಜೊತೆ ಸೇರಿಸಿ ಸೇವಿಸಿದರೆ ನಿಯಂತ್ರಣಕ್ಕೆ ಬರುತ್ತದೆ.
  • ಬಾಳೆ ಹೂವು ಪೊಟ್ಯಾಶಿಯಂ, ಟ್ಯಾನಿನ್‌, ವಿಟಮಿನ್ ಸಿ, ಬಿ, ಮತ್ತು ಲವಣಾಂಶಗಳಿಂದ ಸಮೃದ್ಧವಾಗಿದೆ.
  • ಇದರ ಒಳಗಿನ ಎಳೆ ತಿರುಳನ್ನು ಜಗಿಯುವುದರಿಂದ ಬಾಯಿ ಹುಣ್ಣು, ದುರ್ವಾಸನೆ ಮತ್ತು ಒಸಡಿನ ರಕ್ತಸ್ರಾವ ಶಮನಗೊಳ್ಳುತ್ತದೆ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ

ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಗೆ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ SDMC ಪ್ರಶಸ್ತಿ ಲಭಿಸಿತು.

ದೀಪಾವಳಿ ಪ್ರಯುಕ್ತ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಕೊಂಡಾಡಿ ಭಜನೆಕಟ್ಟೆಯಲ್ಲಿ ಗೂಡುದೀಪ ಸ್ಪರ್ಧೆ

ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರ ವತಿಯಿಂದ ಗೂಡುದೀಪ ಸ್ಪರ್ಧೆಯು ನಡೆಯಲಿದೆ.

ನೋಡೋಕಷ್ಟೆ ಮುಳ್ಳು; ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಪಾಪಸ್​ ಕಳ್ಳಿ!

ಪಾಪಸ್ ಕಳ್ಳಿ (Cereus Night Bloom Cactus) ನೋಡುವುದಕ್ಕೆ ಮುಳ್ಳುಗಳಿಂದ ಕೂಡಿದ್ದರೂ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಬರ್ಬರ ಹತ್ಯೆ

ರಾಜಧಾನಿಯ ಶ್ರೀರಾಂಪುರ ಪ್ರದೇಶದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.