spot_img

ಬಾಳೆಹಣ್ಣಿನ ಸಿಪ್ಪೆಯ ಅಚ್ಚರಿಯ ಪ್ರಯೋಜನಗಳು!

Date:

ಸಾಮಾನ್ಯವಾಗಿ ಕಸದ ಬುಟ್ಟಿಗೆ ಹೋಗುವ ಬಾಳೆಹಣ್ಣಿನ ಸಿಪ್ಪೆ ಈಗ ಆರೋಗ್ಯಪೂರ್ಣ ಜೀವನದ ಭಾಗವಾಗುತ್ತಿವೆ. ತಜ್ಞರ ಪ್ರಕಾರ, ಬಾಳೆಹಣ್ಣಿನ ಸಿಪ್ಪೆ ಚರ್ಮದ ಆರೋಗ್ಯ, ತುಟಿಗಳ ತೇಜಸ್ಸು ಹಾಗೂ ಹಲ್ಲುಗಳ ಸ್ವಚ್ಛತೆಗಾಗಿ ನೈಸರ್ಗಿಕ ಪರಿಹಾರವಾಗಿದೆ.

ಚರ್ಮದ ಪೋಷಣೆ:
ಒಣ ಚರ್ಮದಿಂದ ಬಳಲುವವರು ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಮೃದುವಾಗಿ ಉಜ್ಜಿದರೆ ಉತ್ತಮ ಪರಿಣಾಮ ದೊರೆಯುತ್ತದೆ. ಸಿಪ್ಪೆಯಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡಂಟ್‌ಗಳು ಚರ್ಮಕ್ಕೆ ತೇವಾಂಶವನ್ನು ಪೂರೈಸುತ್ತವೆ.

ತುಟಿಗಳ ಆರೈಕೆ:
ತುಟಿ ಬಿರುಕು ಬಿಟ್ಟಿರುವವರು ಬಾಳೆಹಣ್ಣಿನ ಸಿಪ್ಪೆ ಬಳಸುವುದರಿಂದ ನೈಸರ್ಗಿಕ ತೇವಾಂಶ ಸಿಗುತ್ತದೆ. ದಿನವೂ ರಾತ್ರಿಯಲ್ಲಿ ಬಳಸಿದರೆ ತುಟಿಗಳು ಮೃದು ಮತ್ತು ಹೊಳೆಯುವಂತಾಗುತ್ತವೆ.

ಹಲ್ಲು ಬಿಳುಪಿಗೆ ಸಹಾಯ:
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳಿಗೆ ಮೃದುವಾಗಿ ಉಜ್ಜಿದರೆ, ಸಿಪ್ಪೆಯಲ್ಲಿರುವ ಪೊಟ್ಯಾಸಿಯಂ ಹಾಗೂ ಮ್ಯಾಂಗನೀಸ್ ಹಲ್ಲುಗಳು ಬಿಳುಪಾಗುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ವಾರ ನಿರಂತರ ಬಳಸಿದರೆ ಪರಿಣಾಮ ಸ್ಪಷ್ಟವಾಗುತ್ತದೆ.

ತಜ್ಞರ ಶಿಫಾರಸು:
ಸೌಂದರ್ಯ ತಜ್ಞರು ಮತ್ತು ಆಯುರ್ವೇದ ತಜ್ಞರು ಈ ವಿಧಾನವನ್ನು ನೈಸರ್ಗಿಕ ಮತ್ತು ಯಾವುದೇ ಅಪಾಯವಿಲ್ಲದ ಮನೆಯ ಪರಿಹಾರವೆಂದು ಪರಿಗಣಿಸಿದ್ದಾರೆ. ಆದರೆ, ಚರ್ಮದ ಸಮಸ್ಯೆ ಉಲ್ಬಣವಾದರೆ ವೈದ್ಯರ ಸಲಹೆ ಅಗತ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಜಗೋಳಿ ವಲಯ ಮಟ್ಟದ ಕ್ರೀಡಾಕೂಟ: ಇರ್ವತ್ತೂರು ಶಾಲೆಗೆ ನಾಲ್ಕು ಪ್ರಥಮ ಪ್ರಶಸ್ತಿಗಳು

ಬಜಗೋಳಿ ವಲಯ ಮಟ್ಟದ 14 ವರ್ಷದೊಳಗಿನ ಬಾಲಕ-ಬಾಲಕಿಯರ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟದಲ್ಲಿ ಇರ್ವತ್ತೂರು ಶಾಲೆಯು ಭರ್ಜರಿ ಸಾಧನೆ ಮಾಡಿದೆ. ಸ್ಪರ್ಧಿಸಿದ ನಾಲ್ಕೂ ವಿಭಾಗಗಳಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶಾಲೆಯು ಹೊಸ ದಾಖಲೆಯನ್ನು ನಿರ್ಮಿಸಿದೆ.

ದಿನ ವಿಶೇಷ – ಕ್ಯಾಪ್ಟನ್ ವಿಕ್ರಮ್ ಬತ್ರಾ ಜನ್ಮದಿನ

ನಮ್ಮ ದೇಶದ ಇತಿಹಾಸದಲ್ಲಿ ದೇಶಭಕ್ತಿ ಮತ್ತು ಧೈರ್ಯದ ಸಂಕೇತವಾಗಿ ನಿಂತಿರುವ ಹೆಸರುಗಳಲ್ಲಿ ಕ್ಯಾಪ್ಟನ್ ವಿಕ್ರಮ್ ಬತ್ರಾ ಅವರದ್ದು ಅಮರ

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

‘ಸೇವಾ ಪಾಕ್ಷಿಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.