spot_img

ಬಾಳೆಹಣ್ಣಿನ ಸಿಪ್ಪೆಯ ಅಚ್ಚರಿಯ ಪ್ರಯೋಜನಗಳು!

Date:

ಸಾಮಾನ್ಯವಾಗಿ ಕಸದ ಬುಟ್ಟಿಗೆ ಹೋಗುವ ಬಾಳೆಹಣ್ಣಿನ ಸಿಪ್ಪೆ ಈಗ ಆರೋಗ್ಯಪೂರ್ಣ ಜೀವನದ ಭಾಗವಾಗುತ್ತಿವೆ. ತಜ್ಞರ ಪ್ರಕಾರ, ಬಾಳೆಹಣ್ಣಿನ ಸಿಪ್ಪೆ ಚರ್ಮದ ಆರೋಗ್ಯ, ತುಟಿಗಳ ತೇಜಸ್ಸು ಹಾಗೂ ಹಲ್ಲುಗಳ ಸ್ವಚ್ಛತೆಗಾಗಿ ನೈಸರ್ಗಿಕ ಪರಿಹಾರವಾಗಿದೆ.

ಚರ್ಮದ ಪೋಷಣೆ:
ಒಣ ಚರ್ಮದಿಂದ ಬಳಲುವವರು ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಮೃದುವಾಗಿ ಉಜ್ಜಿದರೆ ಉತ್ತಮ ಪರಿಣಾಮ ದೊರೆಯುತ್ತದೆ. ಸಿಪ್ಪೆಯಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡಂಟ್‌ಗಳು ಚರ್ಮಕ್ಕೆ ತೇವಾಂಶವನ್ನು ಪೂರೈಸುತ್ತವೆ.

ತುಟಿಗಳ ಆರೈಕೆ:
ತುಟಿ ಬಿರುಕು ಬಿಟ್ಟಿರುವವರು ಬಾಳೆಹಣ್ಣಿನ ಸಿಪ್ಪೆ ಬಳಸುವುದರಿಂದ ನೈಸರ್ಗಿಕ ತೇವಾಂಶ ಸಿಗುತ್ತದೆ. ದಿನವೂ ರಾತ್ರಿಯಲ್ಲಿ ಬಳಸಿದರೆ ತುಟಿಗಳು ಮೃದು ಮತ್ತು ಹೊಳೆಯುವಂತಾಗುತ್ತವೆ.

ಹಲ್ಲು ಬಿಳುಪಿಗೆ ಸಹಾಯ:
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳಿಗೆ ಮೃದುವಾಗಿ ಉಜ್ಜಿದರೆ, ಸಿಪ್ಪೆಯಲ್ಲಿರುವ ಪೊಟ್ಯಾಸಿಯಂ ಹಾಗೂ ಮ್ಯಾಂಗನೀಸ್ ಹಲ್ಲುಗಳು ಬಿಳುಪಾಗುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ವಾರ ನಿರಂತರ ಬಳಸಿದರೆ ಪರಿಣಾಮ ಸ್ಪಷ್ಟವಾಗುತ್ತದೆ.

ತಜ್ಞರ ಶಿಫಾರಸು:
ಸೌಂದರ್ಯ ತಜ್ಞರು ಮತ್ತು ಆಯುರ್ವೇದ ತಜ್ಞರು ಈ ವಿಧಾನವನ್ನು ನೈಸರ್ಗಿಕ ಮತ್ತು ಯಾವುದೇ ಅಪಾಯವಿಲ್ಲದ ಮನೆಯ ಪರಿಹಾರವೆಂದು ಪರಿಗಣಿಸಿದ್ದಾರೆ. ಆದರೆ, ಚರ್ಮದ ಸಮಸ್ಯೆ ಉಲ್ಬಣವಾದರೆ ವೈದ್ಯರ ಸಲಹೆ ಅಗತ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಿಜೆಪಿ ಉಡುಪಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರಿಗೆ ಸಂಸದ ಕೋಟ ಗೌರವಾರ್ಪಣೆ

ಬಿಜೆಪಿ ಉಡುಪಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಸಂಸದರ ಕಛೇರಿಯಲ್ಲಿ ಭೇಟಿಯಾದರು.

ವಿಮಾನ ದುರಂತದಲ್ಲಿ ಮೃತಪಟ್ಟ ನರ್ಸ್‌ ಮೇಲೆ ಅವಾಚ್ಯ ಪೋಸ್ಟ್ – ಕಾಸರಗೋಡು ಡೆಪ್ಯುಟಿ ತಹಶೀಲ್ದಾರ್ ಅಮಾನತು

ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳದ ನರ್ಸ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ನಿಂದನೆ ಹಾಗೂ ಜಾತಿ ಆಧಾರಿತ ಟೀಕೆಗಳನ್ನು ಮಾಡಿದ್ದ ಹಿನ್ನೆಲೆಯಲ್ಲಿ ಕಾಸರಗೋಡು ಡೆಪ್ಯುಟಿ ತಹಶೀಲ್ದಾರ್ ಪವಿತ್ರನ್ ಅವರನ್ನು ಅಮಾನತು ಮಾಡಲಾಗಿದೆ.

ಆಸ್ತಿಗಾಗಿ ತಾಯಿ ಜೀವಂತವಿದ್ದರೂ ಮರಣ ಪ್ರಮಾಣಪತ್ರ ಪಡೆದ ಮಗನ ಬಂಧನ ; ಪುರಸಭೆ ಅಧಿಕಾರಿಗೂ ನೋಟೀಸು ಜಾರಿ

ತಾಯಿ ಜೀವಂತ ಇರುವಾಗಲೇ ಆಕೆ ಸಾವಿನ ಪ್ರಮಾಣಪತ್ರ ಪಡೆದು, ಆಸ್ತಿಯನ್ನು ತನ್ನ ಹೆಸರಿಗೆ ಪಡೆಯಲು ಯತ್ನಿಸಿದ ಪುತ್ರನನ್ನು ಶಿಗ್ಗಾಂವಿಯ ಪೊಲೀಸರು ಬಂಧಿಸಿದ್ದಾರೆ.

ಅಹಮದಾಬಾದ್ ವಿಮಾನ ದುರಂತದ ಕೆಲವು ಗಂಟೆಗಳ ಮೊದಲು ಮಿಡ್‌ಡೇನಲ್ಲಿ ಪ್ರಕಟವಾದ ಜಾಹೀರಾತು ವಿವಾದಕ್ಕೆ ದಾರಿ

ಗುಜರಾತಿ ಭಾಷೆಯ ಜನಪ್ರಿಯ ದೈನಿಕ 'ಮಿಡ್‌ಡೇ' ಪತ್ರಿಕೆಯ ಜೂನ್ 12ರ ಮೊದಲ ಪುಟದಲ್ಲಿ ಪ್ರಕಟವಾದ ಒಂದು ಜಾಹೀರಾತು ಈಗ ತೀವ್ರ ವಿವಾದಕ್ಕೀಡಾಗಿದೆ.