spot_img

ಪಾಣಾಜೆ ಗ್ರಾಮದಲ್ಲಿ ಯುವಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆ: ಇಬ್ಬರು ಆರೋಪಿ ಪರಾರಿ

Date:

ಪುತ್ತೂರು : ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಪರಿಚಯಸ್ಥರೆಂದು ಹೇಳಲಾಗುತ್ತಿರುವ ಇಬ್ಬರು ಯುವಕರು 28 ವರ್ಷದ ಯುವಕನೊಬ್ಬನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೇ 25ರ ರಾತ್ರಿ ನಡೆದಿದೆ.

ಆರ್ಲಪದವು ನಿವಾಸಿ ಪ್ರಕಾಶ್ ಎಂಬವರು ಹಲ್ಲೆಗೊಳಗಾದವರಾಗಿದ್ದು, ಧನಂಜಯ ಮತ್ತು ಪುನೀತ್ ಎಂಬುವವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.

ಅದರಂತೆ, ಬೆಳಗ್ಗೆ ಬಿಯರ್ ಖರೀದಿಸಿ ಪಾಣಾಜೆಯ ವೈನ್ ಶಾಪ್‌ ಬಳಿ ಇರುವ ಶೆಡ್‌ನಲ್ಲಿ ಕುಳಿತು ಸೇವಿಸುತ್ತಿದ್ದ ಪ್ರಕಾಶ್‌ ಅವರ ಬಳಿ ರಾತ್ರಿ ಸುಮಾರು 8.30ಕ್ಕೆ ಆರೋಪಿಗಳು ಬಂದು, ಹೇಳಿಕೇಳದೆ ಬೈಯ್ಯಲು ಪ್ರಾರಂಭಿಸುತ್ತಾರೆ. ತಕ್ಷಣವೇ ಧನಂಜಯ ಬಿಯರ್ ಬಾಟಲಿಯಿಂದ ಪ್ರಕಾಶ್ ಅವರ ತಲೆಗೆ ಹೊಡೆದು, ಪುನೀತ್ ಅವರು ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

ನೋವಿನಿಂದ ಬೊಬ್ಬೆ ಹಾಕುತ್ತಿದ್ದ ಪ್ರಕಾಶ್‌ರವರನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ, ಪ್ರಕಾಶ್ ಅವರ ಅಣ್ಣ ಸ್ಥಳಕ್ಕಾಗಮಿಸಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾನೆ.

ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ IPC ಕಲಂ 115(2), 118(1), 352 ಮತ್ತು 3(5) BNS ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮದುವೆಯಾಗದ ಹತಾಶೆಯಲ್ಲಿ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಮದುವೆಯಾಗದ ಕಾರಣದಿಂದ ಹತಾಶರಾದ ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು

ಆದಾಯಕ್ಕೆ ಮೀರಿದ ಸಂಪತ್ತು! ಕಾರ್ಕಳದ ಅಧಿಕಾರಿ ಗಿರೀಶ್ ರಾವ್ ಗೆ ಲೋಕಾಯುಕ್ತರ ಶಾಕ್

ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಕಳ ಮೆಸ್ಕಾಂ ಸಂಸ್ಥೆಯ ಅಕೌಂಟೆಂಟ್ ಆಫೀಸರ್ ಗಿರೀಶ್ ರಾವ್ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 24 ಇಳಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪನಿಗಳು ರೂ. 24 ಕಡಿಮೆ ಮಾಡಿವೆ.

ಬಿಹಾರದ ಸಿಎಂ ನಿತೀಶ್ ಕುಮಾರ್ ರ‍್ಯಾಲಿಯಲ್ಲಿ ಮೋದಿಯವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ ವಿಡಿಯೋ ವೈರಲ್

ನಿತೀಶ್ ಕುಮಾರ್ ರ‍್ಯಾಲಿಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.