
ಪುತ್ತೂರು : ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಪರಿಚಯಸ್ಥರೆಂದು ಹೇಳಲಾಗುತ್ತಿರುವ ಇಬ್ಬರು ಯುವಕರು 28 ವರ್ಷದ ಯುವಕನೊಬ್ಬನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೇ 25ರ ರಾತ್ರಿ ನಡೆದಿದೆ.
ಆರ್ಲಪದವು ನಿವಾಸಿ ಪ್ರಕಾಶ್ ಎಂಬವರು ಹಲ್ಲೆಗೊಳಗಾದವರಾಗಿದ್ದು, ಧನಂಜಯ ಮತ್ತು ಪುನೀತ್ ಎಂಬುವವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.
ಅದರಂತೆ, ಬೆಳಗ್ಗೆ ಬಿಯರ್ ಖರೀದಿಸಿ ಪಾಣಾಜೆಯ ವೈನ್ ಶಾಪ್ ಬಳಿ ಇರುವ ಶೆಡ್ನಲ್ಲಿ ಕುಳಿತು ಸೇವಿಸುತ್ತಿದ್ದ ಪ್ರಕಾಶ್ ಅವರ ಬಳಿ ರಾತ್ರಿ ಸುಮಾರು 8.30ಕ್ಕೆ ಆರೋಪಿಗಳು ಬಂದು, ಹೇಳಿಕೇಳದೆ ಬೈಯ್ಯಲು ಪ್ರಾರಂಭಿಸುತ್ತಾರೆ. ತಕ್ಷಣವೇ ಧನಂಜಯ ಬಿಯರ್ ಬಾಟಲಿಯಿಂದ ಪ್ರಕಾಶ್ ಅವರ ತಲೆಗೆ ಹೊಡೆದು, ಪುನೀತ್ ಅವರು ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ನೋವಿನಿಂದ ಬೊಬ್ಬೆ ಹಾಕುತ್ತಿದ್ದ ಪ್ರಕಾಶ್ರವರನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ, ಪ್ರಕಾಶ್ ಅವರ ಅಣ್ಣ ಸ್ಥಳಕ್ಕಾಗಮಿಸಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾನೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ IPC ಕಲಂ 115(2), 118(1), 352 ಮತ್ತು 3(5) BNS ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.