spot_img

ಆಪರೇಷನ್ ಸಿಂದೂರಲ್ಲಿ ಮಹಿಳಾ ಯೋಧರ ಸಾಹಸ! ಪಾಕ್ ದಾಳಿಗೆ ತೀವ್ರ ಪ್ರತಿದಾಳಿ

Date:

ಹೊಸದಿಲ್ಲಿ: ಭಾರತದ ಗಡಿ ಭದ್ರತಾ ಪಡೆ (BSF) ಪಾಕಿಸ್ಥಾನದ ವಿರುದ್ಧ ಜಮ್ಮು-ಕಾಶ್ಮೀರದ ಅಖ್ನೂರ್ ಕ್ಷೇತ್ರದಲ್ಲಿ ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಲ್ಲಿ ಹೆಮ್ಮೆಯ ಸಾಹಸ ಪುಟ ಬರೆಯಲಾಗಿದೆ. ಪುರುಷ ಯೋಧರ ಜೊತೆಗೇ 7 ಮಹಿಳಾ ಯೋಧರ ತಂಡವು ಪಾಕಿಸ್ತಾನಿ ಶೆಲ್ ದಾಳಿಗೆ ಹೆದರದೆ ಮೂರು ದಿನ-ಮೂರು ರಾತ್ರಿ ಮುಂಚೂಣಿ ಶಿಬಿರಗಳನ್ನು ಯಶಸ್ವಿಯಾಗಿ ರಕ್ಷಿಸುವ ಮೂಲಕ ದೇಶದ ಗೌರವವನ್ನು ಎತ್ತಿ ಹಿಡಿದಿದೆ.

ಈ ತಂಡಕ್ಕೆ ನೇತೃತ್ವ ವಹಿಸಿದ್ದವರು ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ. ಪಾಕ್ ದಾಳಿ ಆರಂಭವಾಗುತ್ತಿದ್ದಂತೆ, ಹಿರಿಯ ಅಧಿಕಾರಿಗಳು ಮಹಿಳಾ ಯೋಧರನ್ನು ಹಿಂದೆ ಸರಿಯುವಂತೆ ಸೂಚಿಸಿದರೂ, ನೇಹಾ ಮತ್ತು ತಂಡ ಧೈರ್ಯವಂತಿಕೆಯಿಂದ “ನಾವು ಹಿಂಜರಿಯಲ್ಲ” ಎಂದು ಸ್ಪಷ್ಟವಾಗಿ ನಿರಾಕರಿಸಿದರು. ಅವರ ಧೈರ್ಯಕ್ಕೆ ಮೇಲಾಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಾಹಸ ಧೈರ್ಯದಿಂದ ನಿಂತ 7 ವೀರ ವನಿತೆಯರು :

ತಂಡದ ನೇತೃತ್ವ ವಹಿಸಿದ್ದ ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ

ಪಂಜಾಬ್‌ನ ಮಂಜೀತ್ ಕೌರ್ ಮತ್ತು ಮಲ್ಕಿತ್ ಕೌರ್ — ಗೋಪುರ ಮತ್ತು ಬಂಕರ್‌ಗಳಲ್ಲಿ ನಿಗಾ

ಪಶ್ಚಿಮ ಬಂಗಾಳದ ಸ್ವಪ್ನಾ ರಥ್ ಮತ್ತು ಶಂಪಾ ಬಸಕ್

ಝಾರ್ಖಂಡ್‌ನ ಸುಮಿ ಕ್ಸೆಸ್

ಒಡಿಶಾದ ಜ್ಯೋತಿ ಬನಿಯಾನ್

ಈ ಮಹಿಳಾ ಸೈನಿಕರು ಪಾಕ್ ಶೆಲ್ ದಾಳಿ ವಿಫಲಗೊಳಿಸಿ, ಸಿಯಾಲ್‌ಟ್ ಪ್ರದೇಶದ ಶಿಬಿರಗಳನ್ನು ಪಾಕ್ ಸೈನಿಕರು ಬಿಟ್ಟು ಓಡಿಹೋಗುವಂತೆ ಮಾಡಿದರು. ಸಕ್ರೀಯ ಯುದ್ಧದಲ್ಲಿ ಮಹಿಳೆಯರ ಭಾಗವಹಿಸುವಿಕೆ ಭಾರತದ ಸೇನಾ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದ್ದು, ಮುಂಚೂಣಿಯ ಕಾರ್ಯಾಚರಣೆಯಲ್ಲೂ ಮಹಿಳೆಯರು ಸಮರ್ಥರು ಎಂಬುದನ್ನು ಈ ಕಾರ್ಯಾಚರಣೆ ಸ್ಪಷ್ಟಪಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ತೆಲಂಗಾಣ ಭಾರತದ 29ನೇ ರಾಜ್ಯವಾಗಿ ಹುಟ್ಟಿಕೊಂಡ ದಿನ

ಜೂನ್ 2, 2014 ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ದಿನ, ದಶಕಗಳ ಸಾಮಾಜಿಕ ಹೋರಾಟದ ನಂತರ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು

40 ವರ್ಷದ ನಂತರ ಮುಖದ ಕಾಂತಿಯನ್ನು ಉಳಿಸಿಕೊಳ್ಳಲು 6 ಸುಲಭ ತಂತ್ರಗಳು!

ಸರಿಯಾದ ಪೋಷಣೆ ಮತ್ತು ಜೀವನಶೈಲಿಯ ಸಣ್ಣ ಸಣ್ಣ ಬದಲಾವಣೆಗಳಿಂದ 40 ನಂತರವೂ ಯುವ ತೇಜಸ್ಸನ್ನು ಕಾಪಾಡಿಕೊಳ್ಳಬಹುದು. ಇಲ್ಲಿ ಅದಕ್ಕಾಗಿ 6 ಪರಿಣಾಮಕಾರಿ ವಿಧಾನಗಳು

ಶಿವರಾಜ್ ಕುಮಾರ್ ಅವರ ಧೃಢ ಹೇಳಿಕೆ: “ಕನ್ನಡದ ಬಗ್ಗೆ ನನ್ನ ನಿಷ್ಠೆ ಅನನ್ಯ, ಕ್ಷಮೆ ಕೇಳುವ ಬಾಧ್ಯತೆ ಕಮಲ್ ಹಾಸನ್ ಅವರದು”

ನಟ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ

ಮುಂಗಾರು ಮಳೆಯ ಅಬ್ಬರ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ತನ್ನ ಪೂರ್ಣ ಶಕ್ತಿಯೊಂದಿಗೆ ಆರಂಭವಾಗಿದೆ