spot_img

ಗೃಹ ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ

Date:

ಉಡುಪಿ: ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಭದ್ರ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿದ್ದ ಮನೋರೋಗಿ ಮಹಿಳೆಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ವಿಶು ಶೆಟ್ಟಿ ಅಂಬಲಪಾಡಿಯವರು ಸಖಿ ಸೆಂಟರಿನ ಸಿಬ್ಬಂದಿ ಹಾಗೂ 112 ಪೊಲೀಸ್ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಜುಲೈ 5ರ ಸಂಜೆ ನಡೆದಿದೆ.
ಮಹಿಳೆ ಬೇಬಿ (38) ಅಮಾನವೀಯ ಗೃಹ ಬಂಧನ ದಿಂದ ರಕ್ಷಿಸಲ್ಪಟ್ಟವರು. ವಿವಾಹಿತರಾಗಿದ್ದು ಸಣ್ಣ ಇಬ್ಬರು ಮಕ್ಕಳಿದ್ದಾರೆ. ಮನೋರೋಗಿಯಾದ ಮಹಿಳೆಯನ್ನು ವರುಷದಿಂದ ಗೃಹಬಂಧನದಲ್ಲಿಟ್ಟು ಸರಿಯಾದ ಚಿಕಿತ್ಸೆ ಯಿಂದ ವಂಚಿತರಾಗಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದಾಗ ಕಿಟಕಿಯಲ್ಲಿ ಮಹಿಳೆ ತನ್ನನ್ನು ರಕ್ಷಿಸಿ ಬದುಕಲು ಆಗುತ್ತಿಲ್ಲ ಹಿಂಸೆಯಿಂದ ಕಂಗಾಲಾಗಿದ್ದೇನೆ. ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನನ್ನನ್ನು ಪಾರು ಮಾಡಿ ಎಂದು ಅಂಗಲಾಚಿ ಬೊಬ್ಬಿಡುತ್ತಿದ್ದರು. ಭದ್ರವಾದ ಬಾಗಿಲು ಹಾಗೂ ಬೀಗ ಇದ್ದು ಸಣ್ಣ ಕಿಟಕಿಯಿಂದ ಆಹಾರ ನೀಡುತ್ತಿದ್ದರು. ಮಳೆ ಗಾಳಿಗೆ ನನ್ನ ಮೇಲೆ ದಯೆ ತೋರದೆ ನಾಯಿಯ ಬದುಕಿಗಿಂತ ಕಡೆಯಾಗಿದೆ ರಕ್ಷಿಸಿ ಎಂದು ಗೋಗರೆಯುತ್ತಿದ್ದರು.

ಬಂಧ ಮುಕ್ತವಾದ ಮಹಿಳೆಯನ್ನು ಸಂತೈಸಿದಾಗ ಬಾಳಿಗಾ ಆಸ್ಪತ್ರೆಯ ಚಿಕಿತ್ಸೆಯಿಂದ ನಾನು ಗುಣಮುಖಲಾಗಿದ್ದು ಕಳೆದ 3-4 ವರುಷಗಳಿಂದ ಚಿಕಿತ್ಸೆ ಇಲ್ಲದೇ ಈ ಪರಿಸ್ಥಿತಿ ದಯಮಾಡಿ ಬಾಳಿಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಇಲ್ಲಿ ಬಿಡಬೇಡಿ ಎಂದಿದ್ದು ಮಹಿಳೆಯ ಅನತಿಯಂತೆ ಬಾಳಿಗಾ ಆಸ್ಪತ್ರೆಗೆ ವಿಶು ಶೆಟ್ಟಿ ಅಂಬಲಪಾಡಿ ದಾಖಲಿಸಿದ್ದಾರೆ.

ಮನೋರೋಗಿಗಳೊಂದಿಗೆ ಬದುಕುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಸಂಬಂಧಿಕರು ಅನಿವಾರ್ಯವಾಗಿ ಇಂತಹ ಸನ್ನಿವೇಶಗಳಿಗೆ ಶರಣಾಗುತ್ತಾರೆ. ಮನೆಯವರಿಂದ ಬಗೆಹರಿಸಲಾಗದಾಗ ಮಹಿಳಾ ಪರ ಇಲಾಖೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಕೆಲವು ಸಮಸ್ಯೆಗಳನ್ನು ಮನೆಯವರು ಹಾಗೂ ಇಲಾಖೆ ಜಂಟಿಯಾಗಿ ಪರಿಹರಿಸಿದ ಉದಾಹರಣೆಗಳಿವೆ. ಈ ಪ್ರಕರಣದಲ್ಲಿ ಸ್ಥಳಿಯ ಆಶಾ ಕಾರ್ಯಕರ್ತೆಯರು, ಪಂಚಾಯತ್ ಅಧಿಕಾರಿಗಳಿಗೆ ವಿಷಯ ತಿಳಿಯದೆ ಇರುವುದು ವಿಪರ್ಯಾಸ‌. ತಿಳಿದೂ ಸುಮ್ಮನಿದ್ದರೆ ಅಪರಾಧ. ಇದು ಜಿಲ್ಲಾಡಳಿತಕ್ಕೆ ಅವಮಾನ. ಜೈಲಿನ ಖೈದಿಗಳಿಗೂ ಅನಾರೋಗ್ಯವಾದಾಗ ಚಿಕಿತ್ಸೆ ಪಡೆಯಲು ವ್ಯವಸ್ಥೆ ಇರುವಾಗ ಈ ಮಹಿಳೆಯ ಮನೋರೋಗಕ್ಕೆ ಚಿಕಿತ್ಸೆ ಇಲ್ಲದೆ ಕೂಡಿ ಹಾಕಿರುವುದು ಅಧಿಕಾರಿಗಳ ಸರಿಯಾದ ಮಾರ್ಗದರ್ಶನ ಸ್ಪಂದನೆ ಹಾಗೂ ಜಾಗೃತೆಯ ಕೊರತೆಯೇ ಕಾರಣ. ಮುಂದಿನ ದಿನಗಳಲ್ಲಿ ಯಾರಿಗೂ ಸಹ ಇಂತಹ ಪರಿಸ್ಥಿತಿ ಬಾರದಿರಲಿ. ಮಹಿಳೆಯ ಕೌಟುಂಬಿಕ ಸಮಸ್ಯೆಗೂ ನ್ಯಾಯ ಸಿಗಲಿ. ಮನನೊಂದ ಮಹಿಳೆ ಭಯದ ವಾತವರಣದಲ್ಲಿ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಮಹಿಳೆಗೆ ಯಾವುದೇ ನೆರವು ನೀಡಲು ಸಿದ್ದ. ಮಾಹಿತಿ ನೀಡಿದ ತಕ್ಷಣ ಸ್ಪಂದಿಸಿದ ಸಖಿ ಸೆಂಟರ್ ಗೆ ಧನ್ಯವಾದಗಳು.

ವಿಶು ಶೆಟ್ಟಿ ಅಂಬಲಪಾಡಿ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ

ಭಾರತದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವನರಕ್ಷಕ ಶಹೀದರ ಸ್ಮೃತಿಗೆ ಅರ್ಪಿತವಾದ ದಿನವೇ ರಾಷ್ಟ್ರೀಯ ವನ್ಯಜೀವಿ ಶಹೀದ್ ದಿನ (National Forest Martyrs Day).

ಬುರುಡೆ ಪ್ರಕರಣ: ಸೌಜನ್ಯ ಸಂಬಂಧಿ ವಿಠಲ್ ಗೌಡನನ್ನು ಸ್ಥಳ ಮಹಜರಿಗೆ ಕರೆ ತಂದ ಎಸ್‌ಐಟಿ

ಪ್ರಕರಣಕ್ಕೆ ಸಂಬಂಧಿಸುದಂತೆ ಸೌಜನ್ಯ ಅವರ ಮಾವನಾದ ವಿಠಲ್ ಗೌಡನನ್ನು ಇಂದು (ಸೆಪ್ಟೆಂಬರ್ 10) ಸಂಜೆ 4:30ರ ಸುಮಾರಿಗೆ ಘಟನಾ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸುತ್ತಿದೆ.

ಕಾರ್ಕಳದ ಎಸ್.ವಿ.ಟಿ. ಶಾಲೆಗೆ ಬಾಲ್-ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ; ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲ್ - ಬ್ಯಾಡ್ಮಿಂಟನ್ ಪಂದ್ಯಾಟ ದಲ್ಲಿ ಎಸ್.ವಿ.ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ. ಇಲ್ಲಿನ ಬಾಲಕರ ತಂಡವು ದ್ವಿತೀಯ ಸ್ಥಾನಗಳಿಸಿತು

ಸೆಪ್ಟೆಂಬರ್ 12 ಕಾರ್ಕಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ‌ ಆಶ್ರಯದಲ್ಲಿ ಕಾರ್ಕಳ‌ ಪುರಸಭೆ ಮತ್ತು ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್ ಕಾರ್ಯಕ್ರಮವು ದಿನಾಂಕ 12/09/2025 ನೇ ಶುಕ್ರವಾರ ಅಪರಾಹ್ನ 3.00 ಗಂಟೆಗೆ ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ಜರುಗಲಿದೆ.