spot_img

ಫೇಸ್‌ಬುಕ್ ಸ್ನೇಹಿತನ ಮಾತು ನಂಬಿ 7.10 ಲಕ್ಷ ರೂ. ಕಳೆದುಕೊಂಡ ಮಹಿಳೆ !

Date:

ಮಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿ ಮಹಿಳೆ 7.10 ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಾಂಡೇಶ್ವರ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ದೂರುದಾರೆಗೆ ‘ಡಾ. ತುಷಾರ್ ಪಾಟೀಲ್’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಮೆಸೇಜ್ ಬಂದಿದ್ದು, ತಾನು ಅಮೆರಿಕದ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋಸರ್ಜನ್ ಎಂದು ಪರಿಚಯಿಸಿಕೊಂಡಿದ್ದಾನೆ. ಮದುವೆ ಆಗಿ ವಿಚ್ಛೇದನಗೊಂಡಿದ್ದು, ಒಂದು ಮಗುವಿದೆ ಎಂದು ತಿಳಿಸಿದ್ದ.

ಅವನ ಮಾತು ನಂಬಿದ ಮಹಿಳೆ, ವಾಟ್ಸಾಪ್ ಸಂಖ್ಯೆ ಪಡೆದರು. ಬಳಿಕ ‘ಸ್ನೇಹದ ಕೊಡುಗೆ’ ಎಂದು ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್‌ಟಾಪ್, ಐಫೋನ್, 90,000 ಡಾಲರ್ ಮತ್ತು ಚಿನ್ನ ಕಳುಹಿಸುತ್ತೇನೆ ಎಂದು ತಿಳಿಸಿದನು.

ಆ ಬಳಿಕ ಮಹಿಳೆಗೆ ವಿಮಾನ ನಿಲ್ದಾಣದಿಂದ ಕರೆ ಬಂದು, ಗಿಫ್ಟ್ ಪ್ಯಾಕೇಜ್‌ಗಾಗಿ ಸೆಕ್ಯೂರಿಟಿ ಡಿಪಾಸಿಟ್ ಹಾಗೂ ಲಾಂಡರಿಂಗ್ ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸಲು ಸೂಚನೆ ನೀಡಲಾಯಿತು. ಇದನ್ನು ನಂಬಿ ಮಹಿಳೆ ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾಯಿಸಿದರು.

ಆದರೆ ವಂಚಕನಿಂದ ಯಾವುದೇ ಗಿಫ್ಟ್ ಬರದೇ ಇದ್ದುದರಿಂದ ಮಹಿಳೆ ವಂಚನೆಯ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೇವಲ 180 ಮೀಟರ್‌ಗೆ ಓಲಾ ಬೈಕ್ ಬುಕಿಂಗ್ ಮಾಡಿದ ಯುವತಿ !

ಓಲಾ ಬೈಕ್ ಸೇವೆ ಸಾಮಾನ್ಯವಾಗಿ ದೂರದ ಪ್ರಯಾಣಕ್ಕಾಗಿಯೇ ಬಳಸಲಾಗುತ್ತದಾದರೂ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆ ಒಂದರಲ್ಲಿ ಯುವತಿಯೊಬ್ಬಳು ಕೇವಲ 180 ಮೀಟರ್ ದೂರದ ಪ್ರಯಾಣಕ್ಕಾಗಿ ಓಲಾ ಬೈಕ್ ಬುಕಿಂಗ್ ಮಾಡಿರುವುದೇ ತಮಾಷೆಯ ಚರ್ಚೆಗೆ ಗ್ರಾಸವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ‘ಕ್ರೋಮಿಂಗ್’ ಸವಾಲಿಗೆ ಬಲಿಯಾದ 19 ವರ್ಷದ ಯುವತಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಕ್ರೋಮಿಂಗ್’ ಅಥವಾ ‘ಧೂಳು ತೆಗೆಯುವ ಸವಾಲು’ (Dusting Challenge) ಪ್ರಾಣಪಾಯದ ಆಟವಾಗಿ ತಿರುಗಿದ್ದು, 19 ವರ್ಷದ ಯುವತಿ ರೇನಾ ಒ’ರೂರ್ಕ್ ಈ ಸವಾಲಿಗೆ ಬಲಿಯಾದ ದುರ್ಘಟನೆ ನಡೆದಿದೆ.

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ: ಕ್ರೀಡಾಂಗಣ ಸ್ಥಳಾಂತರದ ಸಾಧ್ಯತೆ ಬಗ್ಗೆ ಸಿಎಂ ಚಿಂತನೆ

ಸಿ ಎಂ ಸಿದ್ದರಾಮಯ್ಯನವರು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಭವಿಷ್ಯದಲ್ಲಿ ಸ್ಥಳಾಂತರಿಸುವ ಸಾಧ್ಯತೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು. ಕ್ರೀಡಾಂಗಣದ ಸ್ಥಳವನ್ನು ಹೆಚ್ಚು ಸುರಕ್ಷಿತ, ಯೋಜಿತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.

ಮರವಂತೆಯಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ! ಐದು ಪ್ರವಾಸಿಗರ ಪ್ರಾಣ ರಕ್ಷಣೆ

ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ಹಾಗೂ ಅಜಾಗ್ರತೆಯ ಪರಿಣಾಮವಾಗಿ ಐದು ಮಂದಿ ಸಮುದ್ರ ಪಾಲಾಗುವ ಹಂತಕ್ಕೆ ತಲುಪಿದ್ದರು. ಆದರೆ ಲೈಫ್ ಗಾರ್ಡ್‌ಗಳ ಸಮಯ ಪ್ರಜ್ಞೆ ಮತ್ತು ಸ್ಥಳೀಯರ ಸಹಕಾರದಿಂದ ಅವರನ್ನು ರಕ್ಷಿಸಲಾಯಿತು.