spot_img

ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ ಮಹಿಳೆ!

Date:

ಮೀರತ್‌ : ಮೀರತ್‌ನ ಸಿಕಂದರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯನ್ನು ಕೊಲೆ ಮಾಡಿ ಆರು ತುಂಡುಗಳಾಗಿ ಕತ್ತರಿಸಿ ಎಸೆದ ಹೃದಯ ವಿದ್ರಾವಕ ಘಟನೆ ನಡೆದಿದೆ. 44 ವರ್ಷದ ಮಾಯಾದೇವಿ ತನ್ನ ಪ್ರಿಯಕರ ಹಾಗೂ ಇನ್ನಿಬ್ಬರ ಸಹಾಯದಿಂದ ತನ್ನ ಪತಿಯನ್ನು ಕೊಲೆ ಮಾಡಿ, ಅವನ ದೇಹದ ಭಾಗಗಳನ್ನು ವಿಭಜಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾಳೆ.

ಮಾಯಾದೇವಿ ತನ್ನ ಪತಿಯ ಗುರುತು ಮರೆಮಾಡಲು ದೇಹದ ಭಾಗಗಳನ್ನು ಪಾಲಿಥಿನ್‌ಗಳಲ್ಲಿ ಸುತ್ತಿ ವಿವಿಧ ಸ್ಥಳಗಳಲ್ಲಿ ಎಸೆದಿರುವುದನ್ನು ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದರು. ದೇಹದ ಭಾಗಗಳು ಶನಿವಾರ ಖರೀದ್ ಗ್ರಾಮದಲ್ಲಿನ ಹೊಲದಲ್ಲಿ ಕಂಡುಬಂದವು.

ಮಾಯಾ ದೇವಿಯ ಪತಿಯನ್ನು 62 ವರ್ಷದ ನಿವೃತ್ತ ಸೇನಾ ಸಿಬ್ಬಂದಿ ದೇವೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಮೊದಲು, ಮಾಯಾ ದೇವಿ ತನ್ನ ಪತಿಯನ್ನು ನಾಪತ್ತೆಯಾಗಿದ್ದಾನೆ ಎಂದು ಹೇಳಿ, ಬಲ್ಲಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆದರೆ, ಅವರ ಮಗಳು ಪೊಲೀಸ್ ಠಾಣೆಗೆ ಬಂದು ನೇರವಾಗಿ ಆರೋಪ ಮಾಡಿ, ಮಾಯಾ ದೇವಿಯೇ ತನ್ನ ತಂದೆಯನ್ನು ಕೊಲೆ ಮಾಡಿದ್ದಾಗಿ ಹೇಳಿದ ನಂತರ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಾಯಾ ದೇವಿಯನ್ನು ಬಂಧಿಸಿ, ಅವಳ ವಿರುದ್ಧ ಕೊಲೆ ಸಂಬಂಧಿ ಸೆಕ್ಷನ್‌ಗಳನ್ನು ಅಳವಡಿಸಿ ತನಿಖೆ ಮುಂದುವರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಎಲೆಕೋಸು ಸೇವನೆಯಿಂದ ದೇಹದ ಆರೋಗ್ಯಕ್ಕೆ 11 ಅದ್ಭುತ ಪ್ರಯೋಜನಗಳು!

ನಿತ್ಯ ಆಹಾರದಲ್ಲಿ ಸೇರಿಸಿದರೆ ದೇಹಕ್ಕೆ ಅಸಂಖ್ಯಾತ ಲಾಭಗಳನ್ನು ತಂದುಕೊಡಬಲ್ಲ ಎಲೆಕೋಸಿನ ಆರೋಗ್ಯ ಪ್ರಯೋಜನಗಳು

ಭದ್ರತೆ ದೃಷ್ಟಿಯಿಂದ ಮೀನುಗಾರರಿಗೆ ಗುಂಪುಗಳಲ್ಲಿ ಮೀನುಗಾರಿಕೆ ನಡೆಸಲು ಸೂಚನೆ ನೀಡಿದ ಮೀನುಗಾರಿಕಾ ಇಲಾಖೆ

ಕರಾವಳಿ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ, ಸಮುದ್ರದಲ್ಲಿ ಮೀನುಗಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಸೂಚನೆ ನೀಡಿದ್ದಾರೆ.

ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ ! ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ

ಭಾರತ - ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಮಂಗಳೂರಿನ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ನಡೆದ ಬಾಂಬ್ ಸ್ಫೋಟದಂತಹ ಘಟನೆ ಕ್ಷಣಾಂತರದಲ್ಲಿ ಜನರಲ್ಲಿ ಆತಂಕ ಉಂಟುಮಾಡಿದೆ.

ಯರ್ಲಪಾಡಿಗೆ KSRTC ಬಸ್ ಸಂಚಾರ ಶೀಘ್ರದಲ್ಲೇ ಆರಂಭ

ಯರ್ಲಪಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆ ಸಾಕಾರಗೊಂಡಿದ್ದು, ಅತೀ ಶೀಘ್ರದಲ್ಲೇ ಯರ್ಲಪಾಡಿ ಗ್ರಾಮಕ್ಕೆ ಸರಕಾರಿ ಬಸ್ ಸಂಚಾರ ಸೇವೆಯು ಲಭ್ಯವಾಗಲಿದೆ.