spot_img

ನಕಲಿ ಅಪಘಾತದ ಮೇಕಪ್ ಮಾಡಿ ರಜೆ ಪಡೆಯಿರಿ ಎಂದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Date:

ಪುಣೆ:ಕೆಲಸ ಮಾಡುವ ಕಚೇರಿಗಳಲ್ಲಿ ಕೆಲವರು ಇಲ್ಲ-ಸಲ್ಲದ ಕಾರಣಗಳನ್ನು ಉಲ್ಲೇಖಿಸಿ ರಜೆ ಪಡೆಯುವುದನ್ನು ನಾವು ನೋಡಿರುವುದು ಸಾಮಾನ್ಯ. “ಉಷಾರಿಲ್ಲ ಸರ್”, “ಊರಿಗೆ ಹೋಗಬೇಕು”, “ತುಂಬಾ ಕೆಲಸ ಇದೆ” ಎಂಬುವಂತಹ ನೆಪಗಳ ಪೈಕಿ, ಇತ್ತೀಚೆಗೆ ಪುಣೆಯಲ್ಲೊಬ್ಬ ಮಹಿಳೆ ರಜೆಗಾಗಿ ಮಡಿದ ಮೇಕ್ಅಪ್ ವಿನೂತನ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಣೆಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಮುಖದ ಮೇಲೆ ನಕಲಿ ಅಪಘಾತದ ಗಾಯದಂತೆ ಮೇಕಪ್ ಮಾಡಿ, ಅದನ್ನು ಗುರುತಿಸಲು ಹೊಲಿಗೆ ಹಾಕಿದ ರೀತಿಯಲ್ಲಿ ತೋರಿಸಿ ರಜೆಗಾಗಿ ತಯಾರಾದ ರೀತಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಮೇಕಪ್ ಕೌಶಲ್ಯದಲ್ಲಿ, ಗಾಯ ತೀವ್ರವಾದಂತೆ ಕಾಣುವ ಮತ್ತು ಗುಣಮುಖವಾಗುತ್ತಿರುವ ಹಂತಗಳನ್ನು ಬಹಳ ನೈಜವಾಗಿ ರೂಪಿಸಿರುವುದು ಗಮನ ಸೆಳೆಯುತ್ತಿದೆ. ಕಚೇರಿಗೆ ಹೋಗುವಾಗ ಯಾರೂ ಗುರುತಿಸದಂತೆ ಹೇಗೆ ಕಾಣಬೇಕು ಎಂಬುದಕ್ಕೂ ಪ್ರಾತ್ಯಕ್ಷಿಕೆ ನೀಡಿರುವ ಆ ವಿಡಿಯೋ, ನೆಟ್ಟಿಗರು ನಗುವ ಪ್ರತಿಕ್ರಿಯೆಗೂ, ಚಿಂತನೆಗೂ ಕಾರಣವಾಗಿದೆ.

ಸಾಮಾನ್ಯತಃ ಮೇಕಪ್ ಸೌಂದರ್ಯ ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ. ಆದರೆ ಈ ಮಹಿಳೆ ಅದನ್ನು ಅಪಘಾತದ ನಟನೆಯಾಗಿ ಬಳಸಿದ ವಿಧಾನದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳೊಂದಿಗೆ ಟ್ರೆಂಡ್ ಆಗುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಸಿರು ದ್ರಾಕ್ಷಿಯ 6 ಮಹತ್ವದ ಆರೋಗ್ಯ ಲಾಭಗಳು!

ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯೊಂದಿಗೆ, ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವೆಂಬುದು ತಜ್ಞರ ಅಭಿಪ್ರಾಯ. ಪೌಷ್ಟಿಕತೆಯಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ವಿವಿಧ ಅಂಗಾಂಗಗಳಿಗೆ ಬಲ ನೀಡುತ್ತಿದ್ದು, ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿ.

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ತಿರುಗುಬಾಣ

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ನಗುಮುಖದ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದೆ.

ಬೆವರಿಲ್ಲದೇ ಲಕ್ಷಾಂತರ ರೂಪಾಯಿ ಗಳಿಕೆ: ಮುಂಬೈನ ಆಟೋ ಚಾಲಕನ ಸ್ಮಾರ್ಟ್ ಐಡಿಯಾ

ಹೆಚ್ಚುವರಿ ಶ್ರಮವಿಲ್ಲದೇ ದುಡ್ಡು ಗಳಿಸುವವರ ಕಥೆಗಳು ಅಪರೂಪ, ಆದರೆ ಮುಂಬೈನ ಆಟೋ ಚಾಲಕನೊಬ್ಬ ತನ್ನ ಚತುರತನದಿಂದ ದಿನಕ್ಕೆ ಸಾವಿರಾರು ರೂ. ಗಳಿಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಗೂ ರೆರಾ ಕಡ್ಡಾಯ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಬಡಾವಣೆ ಅನುಮೋದನೆಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೆರಾ) ನೋಂದಣಿಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.