spot_img

ಮಲ್ಪೆ ಬಂದರಿಯಲ್ಲಿ ಮಹಿಳೆ ಹಲ್ಲೆ ಪ್ರಕರಣ: ಸಂತ್ರಸ್ತೆಯ ಪ್ರತಿಕ್ರಿಯೆ

Date:

ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಕೂಡಾ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಹಲ್ಲೆಗೆ ಒಳಗಾದ ಮಹಿಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಾನು ಮೀನು ಕದ್ದಿದ್ದೇನೆಂದು ಆರೋಪಿಸಿ ಹೊಡೆದಿದ್ದಾರೆ. ಅದಾದ ಬಳಿಕ ನಾನು ಬಂದರಿಗೆ ಹೋಗಿಲ್ಲ. ಇಲ್ಲಿ ಕೆಲಸ ಮಾಡುವುದು ಕಷ್ಟ, ಆದ್ದರಿಂದ ನಾವು ನಮ್ಮ ಊರಿಗೆ ವಾಪಸ್ ಹೋಗುತ್ತಿದ್ದೇವೆ,” ಎಂದರು.

ಅಲ್ಲದೆ, “ಸ್ವಲ್ಪ ಮೀನು ತೆಗೆದದ್ದು ಸತ್ಯ. ಬಂದರಿನಲ್ಲಿ ಅದೊಂದು ಸಾಮಾನ್ಯ ವಿಚಾರ. ಆ ದಿನ ನನ್ನ ಗ್ರಹಚಾರ ಸರಿ ಇರಲಿಲ್ಲ. ಆದರೆ ಈಗ ಇಲ್ಲಿ ಉಳಿಯುವುದು ಕಷ್ಟ. ಯಾರೂ ನನಗೆ ತೊಂದರೆ ಕೊಟ್ಟಿಲ್ಲ. ನನಗೆ ಅವರ ಮೇಲೆ ದ್ವೇಷವಿಲ್ಲ, ಅವರಿಗೆ ನನ್ನ ಮೇಲೆ ದ್ವೇಷವಿಲ್ಲ,” ಎಂದೂ ಹೇಳಿದ್ದಾರೆ.

ಅವರು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ಆ ದಿನ ರಾತ್ರಿ ನಾವು ರಾಜಿ ಮಾಡಿಕೊಂಡಿದ್ದೆವು. ಮೇಲಿಂದ ದೂರು ಕೊಡಲು ಹೇಳಿದ್ದಾರೆ, ಅವರ ಮಾತಿಗೆ ನಾನು ಸಹಿ ಮಾಡಿದ್ದೇನೆ. ಯಾರಿಗೂ ಶಿಕ್ಷೆಯಾಗಬಾರದು, ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು,” ಎಂದು ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದೈನಂದಿನ ಆಹಾರದಲ್ಲಿ ಹುಣಸೆಹಣ್ಣು ಸೇರಿಸಿ, ಆರೋಗ್ಯ ಸಮಸ್ಯೆಗಳಿಗೆ ಗುಡ್‌ಬೈ ಹೇಳಿ!

ವಿಟಮಿನ್ ಸಿ, ಬಿ, ಪೊಟಾಸಿಯಂ, ಕಬ್ಬಿಣ, ಮೆಗ್ನೀಷಿಯಂ ಮುಂತಾದ ಬಹುಮೌಲ್ಯ ಖನಿಜಗಳ ಸಮೃದ್ಧಿ ಹೊಂದಿರುವ ಹುಣಸೆಹಣ್ಣು, ಚಳಿಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ

ಹೆಂಡತಿಯನ್ನು ಕೊಂದ ನಂತರ ಅತ್ತೆಗೆ ಕರೆಮಾಡಿದ ಅಳಿಯ !

ಸಹರಾನ್‌ಪುರದಲ್ಲಿ ನೇಹಾ ಎಂಬ ಯುವತಿಯು ಪತಿ ಪ್ರಶಾಂತ್ ಕೈಯಿಂದ ಕೊಲೆಯಾಗಿದ್ದಾಳೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಬ್ಬಳೇ ಇದ್ದಾಗ ಪತಿ ಪ್ರಶಾಂತ್ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆಗೈದಿದ್ದಾನೆ.

“ಆಪರೇಷನ್ ಸಿಂದೂರ 2” ಬಗ್ಗೆ ಜೋರಾದ ಊಹಾಪೋಹ: ಮುಂದಿನ ಹಂತಕ್ಕೆ ಸಜ್ಜಾಗ್ತಿದೆಯಾ ಭಾರತ?

ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ “ಆಪರೇಷನ್ ಸಿಂದೂರ” ಬಳಿಕ ದೇಶದಲ್ಲಿ ಭವಿಷ್ಯದ ದಾಳಿಗಳ ಕುರಿತ ಊಹಾಪೋಹಗಳು ಹೆಚ್ಚಾಗಿವೆ.

ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಕಾರ್ಕಳದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರಗಿತು.