spot_img

“ನಮ್ಮ ಸಂಸ್ಕೃತಿಗೆ ಹಾನಿಯಾಗಲು ಬಿಡಲ್ಲ”ಯಕ್ಷಗಾನದ ಉಳಿವು ಕುರಿತು ಡಿಕೆಶಿಯ ಭರವಸೆ

Date:

spot_img

ಬೆಂಗಳೂರು: ಕರ್ನಾಟಕದ ಗಂಡು ಕಲೆ ಎಂದೇ ಖ್ಯಾತಿಯ ಪಡೆದಿರುವ ಯಕ್ಷಗಾನ ಇದೀಗ ಹಲವು ವಿಘ್ನಗಳನ್ನು ಎದುರಿಸುತ್ತಿದೆ. ಕೆಲ ವರ್ಷಗಳ ಹಿಂದೆ ರಾತ್ರಿ ಬೆಳಗಾಗುವ ತನಕ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳಿಗೆ ಈಗ ಧ್ವನಿವರ್ಧಕ ನಿಯಮದ ಅನ್ವಯ ಮಧ್ಯರಾತ್ರಿಯಲ್ಲೇ ಬ್ರೇಕ್ ಬೀಳುತ್ತಿದೆ. ಈ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾದ ಬಳಿಕ, ಡಿಸಿಎಂ ಡಿ.ಕೆ. ಶಿವಕುಮಾರ್ ಯಕ್ಷಗಾನ ಪ್ರೇಮಿಗಳಿಗೆ ಭರವಸೆ ನೀಡಿದ್ದಾರೆ.

ಯಕ್ಷಗಾನದ ಪರ ಮಾತನಾಡಿದ ಶಾಸಕ
ವಿಧಾನಸಭೆಯ ಗಮನ ಸೆಳೆಯುತ್ತ, ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಧ್ವನಿವರ್ಧಕ ನಿಯಮದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಕ್ಷಗಾನಕ್ಕೆ ತೊಂದರೆ ಉಂಟಾಗಿದೆ ಎಂದು ಪ್ರಶ್ನೆ ಎತ್ತಿದರು. ಈ ನಿಯಮಗಳನ್ನು ಸರ್ಕಾರ ಮರುಪರಿಶೀಲಿಸಿ ಯಕ್ಷಗಾನ ಪ್ರದರ್ಶನಕ್ಕೆ ಅನುಕೂಲ ಮಾಡುವಂತೆ ಅವರು ಮನವಿ ಮಾಡಿದರು.

ಡಿಕೆಶಿಯ ಭರವಸೆ
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯಲು ತೊಂದರೆ ಆಗುತ್ತಿದೆ ಎಂಬ ಬಗ್ಗೆ ನಾವು ಗಮನ ಹರಿಸಿದ್ದೇವೆ. ಯಕ್ಷಗಾನ ಮಾಡುವವರೆಲ್ಲಾ ತಕ್ಷಣ ಅರ್ಜಿ ಹಾಕಿ ನೆನೆಗುದಿಗೆ ಬಾರದಂತೆ 15 ದಿನಗಳ ತಯಾರಿ ನಡೆಸುತ್ತಾರೆ. ಯಕ್ಷಗಾನ ಬೆಳಗಿನ ಜಾವದವರೆಗೂ ನಡೆಯಲು ತಡೆಯಿಲ್ಲ. ಈ ನಿಯಮಗಳು ಬಿಜೆಪಿಯ ಆಡಳಿತಾವಧಿಯಲ್ಲಿಯೂ ರೂಪಗೊಂಡಿದ್ದವು. ಆದರೆ, ನಾವು ಈಗ ಈ ನಿರ್ಬಂಧಗಳನ್ನು ಪರಿಶೀಲಿಸುತ್ತೇವೆ. ಯಕ್ಷಗಾನ ಮತ್ತು ಬಯಲಾಟ ದೇಶದ ಆಸ್ತಿಗಳು, ನಮ್ಮ ಸಂಸ್ಕೃತಿಯ ಸಮೃದ್ಧಿಯ ಭಾಗ. ಇದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ಭರವಸೆ ನೀಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್‌ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ರೋಬೋಟ್ ‘ಶುವಾಂಗ್ ಶುವಾಂಗ್’ ಪದವಿ ಪಡೆದ ವಿಚಿತ್ರ ಘಟನೆ: ಚೀನಾದಲ್ಲಿ ತಾಂತ್ರಿಕ ಕ್ರಾಂತಿ!

ಚೀನಾದ ಫುಜಿಯನ್ ಪ್ರಾಂತ್ಯದ ಶುವಾನ್ಶಿ ಹೈಸ್ಕೂಲ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವೊಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗಿದೆ. "ಶುವಾಂಗ್ ಶುವಾಂಗ್" ಹೆಸರಿನ ಮಾನವಾಕಾರದ ರೋಬೋಟ್ ಒಂದು ಸಮಾರಂಭದಲ್ಲಿ ಭಾಗವಹಿಸಿ, ವೇದಿಕೆಗೆ ನಡೆದು, ಶಿಕ್ಷಕರಿಂದ ಕೈಚಲಾವಣೆ ಮೂಲಕ ಪ್ರಮಾಣಪತ್ರ ಸ್ವೀಕರಿಸಿತು.

ಹಲಸಿನ ಹಣ್ಣು ತಿಂದು ಬ್ರೀಥಲೈಸರ್‌ನಲ್ಲಿ ಫೇಲ್: ಕೇರಳದಲ್ಲಿ ಅಚ್ಚರಿಯ ಘಟನೆ!

ಮದ್ಯಪಾನ ಮಾಡದಿದ್ದರೂ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮೂವರು ಬಸ್ ಚಾಲಕರು ಬ್ರೀಥಲೈಸರ್ ಪರೀಕ್ಷೆಯಲ್ಲಿ ವಿಫಲರಾಗಿ, ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.

ದಿನ ವಿಶೇಷ – ವಿಶ್ವ ಐವಿಎಫ್ ದಿನ

ಈ ದಿನವು ಸಂತಾನೋತ್ಪತ್ತಿ ವಿಜ್ಞಾನದಲ್ಲಿನ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಬಂಜೆತನದಿಂದ ಬಳಲುತ್ತಿರುವ ಅಸಂಖ್ಯಾತ ದಂಪತಿಗಳಿಗೆ ಆಶಯದ ದಾರಿಯನ್ನು ತೆರೆದ ಐವಿಎಫ್ ತಂತ್ರಜ್ಞಾನದ ಪ್ರಗತಿಯನ್ನು ಸ್ಮರಿಸುತ್ತದೆ