spot_img

ಜಲ, ವಾಯು ಸಂಕಟ, ಮಹಾಮಾರಿ, ರಾಜಕೀಯ ಬದಲಾವಣೆ – ಕೋಡಿಮಠ ಸ್ವಾಮೀಜಿಯಿಂದ ಭವಿಷ್ಯವಾಣಿ

Date:

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿಗೆ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ವಾಮೀಜಿಯವರ ಭವಿಷ್ಯವಾಣಿ ಪ್ರಕಾರ, ಲೋಕಕ್ಕೆ ಜಲ ಮತ್ತು ವಾಯು ಸಂಬಂಧಿತ ಸಂಕಟ ಎದುರಾಗಲಿದೆ. ಐದು ವರ್ಷಗಳವರೆಗೆ ಕೋವಿಡ್‌ ಮಹಾಮಾರಿ ಬೇರೆ ಬೇರೆ ರೂಪಗಳಲ್ಲಿ ಮುಂದುವರಿಯಲಿದೆ. ಜನರು ಎಚ್ಚರಿಕೆಯಿಂದಿರಬೇಕು. ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಅವರ ಮುನ್ಸೂಚನೆಯ ಪ್ರಕಾರ, ಹಿಮಾಲಯ ಕರಗಿ ದೆಹಲಿವರೆಗೆ ನೀರು ಹರಿಯುವ ಸಾಧ್ಯತೆ ಇದೆ. ಮೇಘಸ್ಫೋಟ, ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಬಹುದು. ದೇಶದಲ್ಲಿ ಮತ್ತೆ ಮತೀಯ ಗಲಭೆ ಹಾಗೂ ಯುದ್ಧದ ಭೀತಿ ಎದುರಾಗಲಿದೆ. ಹಲವಾರು ರಾಜಕೀಯ ನಾಯಕರಿಗೆ ಜೀವಭೀತಿಯೂ ಉಂಟಾಗಬಹುದು ಎಂದು ಹೇಳಿದ್ದಾರೆ.

ಸ್ವಾಮೀಜಿಯವರ ಪ್ರಕಾರ, ಸಂಕ್ರಾಂತಿಯವರೆಗೆ ರಾಜ್ಯ ಸರ್ಕಾರದ ಸ್ಥಿತಿ ಸ್ಥಿರವಾಗಿದೆಯಾದರೂ, ನಂತರ ಬದಲಾಗಬಹುದಾದ ರಾಜಕೀಯ ಸ್ಥಿತಿಗತಿ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಖಳನಟ ಮುಕುಲ್ ದೇವ್ ನಿಧನ – ಉಪೇಂದ್ರ ಅಭಿನಯದ ‘ರಜನಿ’ ಚಿತ್ರದಿಂದ ಕನ್ನಡಿಗರ ಮನ ಗೆದ್ದ ನಟ ವಿಧಿವಶ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಟ ಮುಕುಲ್ ದೇವ್ ಶನಿವಾರ ನಿಧನರಾಗಿದ್ದಾರೆ.

ಮಕ್ಕಳ ಆರೋಗ್ಯದಲ್ಲಿ ದೊಡ್ಡಪತ್ರೆ ಎಲೆಯ ಮಹತ್ವ

ಮಳೆಗಾಲದ ವಾತಾವರಣ ಬದಲಾವಣೆಗಳಿಂದ ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಸೇರಿ ಸಣ್ಣ ಅನಾರೋಗ್ಯಗಳು ಸಾಮಾನ್ಯ. ಈ ವೇಳೆ ದೊಡ್ಡಪತ್ರೆ ಎಲೆಗಳು ರಾಮಬಾಣ ಮನೆಮದ್ದಾಗಬಹುದು.

ಉಡುಪಿ ಜಿಲ್ಲೆಗೆ ಮೊದಲ ವಿದ್ಯುತ್ ಚಿತಾಗಾರ: ಕೋಟೇಶ್ವರ ಹಿಂದೂ ರುದ್ರಭೂಮಿಯಲ್ಲಿ ನೂತನ ಸೌಲಭ್ಯ ಉದ್ಘಾಟನೆ

ಉಡುಪಿ ಜಿಲ್ಲೆಯ ಮೊದಲ ವಿದ್ಯುತ್ ಚಿತಾಗಾರವು ಕುಂದಾಪುರ ತಾಲೂಕಿನ ಕೋಟೇಶ್ವರದ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣಗೊಂಡಿದ್ದು, ಶನಿವಾರ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು

ಜೆಇಇ ಮೈನ್ (ಬಿ.ಆರ್ಕ್/ಬಿ.ಪ್ಲಾನಿಂಗ್ ) ಅಂತಿಮ ಫಲಿತಾಂಶ

ಜೆ.ಇ.ಇ ಮೈನ್, ಬಿ.ಆರ್ಕ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್, 13 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ ಪರ್ಸಂಟೈಲ್, 17 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 19 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ 24 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.