spot_img

ಬೆಂಗಳೂರಿನ 35 ಕಡೆ ಯುದ್ಧ ಸೈರನ್! ಉಗ್ರ ದಾಳಿ ತಡೆಯ ಮಾಕ್ ಡ್ರಿಲ್‌ಗೆ ಭದ್ರತಾ ವ್ಯವಸ್ಥೆಯ ಕಸರತ್ತು

Date:

ಬೆಂಗಳೂರು: ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೆ , ದೇಶಾದ್ಯಂತ ಭದ್ರತಾ ಎಚ್ಚರಿಕೆಯನ್ನು ಹೆಚ್ಚಿಸಲಾಗಿದೆ. ಇದರ ಅಂಗವಾಗಿ ‘ಆಪರೇಷನ್ ಅಭ್ಯಾಸ್ ’ ಹೆಸರಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಮಾಕ್ ಡ್ರಿಲ್‌ (Mock Drill) ನಡೆಯಿತು. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇದೇ ಸಂದರ್ಭದಲ್ಲಿ ಯುದ್ಧ ಸೈರನ್‌ಗಳ ಮೂಲಕ ಸಾರ್ವಜನಿಕ ಎಚ್ಚರಿಕೆ ಅಭ್ಯಾಸ ನಡೆಸಲಾಯಿತು.

ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನ 3:58 ರಿಂದ ಸಂಜೆ 4 ಗಂಟೆಯವರೆಗೆ ಎರಡು ನಿಮಿಷಗಳ ಕಾಲ ಯುದ್ಧ ಸೈರನ್‌ ಮೊಳಗಿಸಲಾಯಿತು. ಸುಮಾರು 35 ಪ್ರಮುಖ ಪ್ರದೇಶಗಳಲ್ಲಿ ಈ ಸೈರನ್‌ಗಳು ಧ್ವನಿಸಿದವು. ವೈಯಾಲಿಕಾವಲ್, ಉಪ್ಪಾರಪೇಟೆ ಪೊಲೀಸ್ ಠಾಣೆ, ಕಮರ್ಷಿಯಲ್ ಸ್ಟ್ರೀಟ್, ರಾಜಾಜಿನಗರ ಅಗ್ನಿಶಾಮಕ ಠಾಣೆ, ಹಲಸೂರು ಗೇಟ್ ಕೆರೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಹಲಸೂರು ಗೇಟ್ ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಅಭ್ಯಾಸ ನಡೆಯಿತು.

ಭದ್ರತಾ ತಂತ್ರಜ್ಞಾನದ ಸುಧಾರಣೆ ಹಾಗೂ ಅಗಾತ ಪರಿಸ್ಥಿತಿಯಲ್ಲಿ ಸಾರ್ವಜನಿಕರ ತಕ್ಷಣದ ಪ್ರತಿಕ್ರಿಯೆ ಪರೀಕ್ಷಿಸುವ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಗಿದೆ. ಯಾವುದೇ ಆತಂಕಕ್ಕಿಂತಲೂ ಈ ಅಭ್ಯಾಸವು ಪೂರ್ವ ಸಿದ್ಧತೆಯ ಭಾಗವಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ಆಪರೇಷನ್ ಸಿಂದೂರ 2” ಬಗ್ಗೆ ಜೋರಾದ ಊಹಾಪೋಹ: ಮುಂದಿನ ಹಂತಕ್ಕೆ ಸಜ್ಜಾಗ್ತಿದೆಯಾ ಭಾರತ?

ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ “ಆಪರೇಷನ್ ಸಿಂದೂರ” ಬಳಿಕ ದೇಶದಲ್ಲಿ ಭವಿಷ್ಯದ ದಾಳಿಗಳ ಕುರಿತ ಊಹಾಪೋಹಗಳು ಹೆಚ್ಚಾಗಿವೆ.

ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಕಾರ್ಕಳದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರಗಿತು.

ಪಾಕಿಸ್ತಾನ ವಿರುದ್ಧ ಸಮರಾಭ್ಯಾಸದ ನಡುವೆ ಬೆಂಗಳೂರು ಸೇರಿದಂತೆ ದೇಶದಾದ್ಯಾಂತ ಬ್ಲ್ಯಾಕ್ ಔಟ್ ಮಾಕ್ ಡ್ರಿಲ್

ಕೇಂದ್ರ ಸರ್ಕಾರದ ನಿರ್ದೇಶನದಂತೆ ಭಾರತಾದ್ಯಂತ “ಬ್ಲ್ಯಾಕ್ ಔಟ್” ಅಣಕು ಪ್ರದರ್ಶನ (Mock Blackout Drill) ಆಯೋಜಿಸಲಾಗಿದೆ.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ರೋಹಿತ್ ಶರ್ಮಾ

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಗೆ ವಿದಾಯ ಘೋಷಿಸಿದ್ದಾರೆ.