spot_img

ದೀಪಾವಳಿ ಪ್ರಯುಕ್ತ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಕೊಂಡಾಡಿ ಭಜನೆಕಟ್ಟೆಯಲ್ಲಿ ಗೂಡುದೀಪ ಸ್ಪರ್ಧೆ

Date:

spot_img
spot_img

ಹಿರಿಯಡಕ: ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರ ವತಿಯಿಂದ ಗೂಡುದೀಪ ಸ್ಪರ್ಧೆಯು ನಡೆಯಲಿದೆ.

ಈ ಸ್ಪರ್ಧೆಯು ದಿನಾಂಕ 19.10.2025 ರಂದು ಆದಿತ್ಯವಾರ ಮಧ್ಯಾಹ್ನ ಗಂಟೆ 03:00 ರಿಂದ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆಯಲ್ಲಿ ನಡೆಯಲಿದೆ.

ಸ್ಪರ್ಧೆಯ ವಿಭಾಗಗಳು

ಈ ಬಾರಿಯ ಗೂಡುದೀಪ ಸ್ಪರ್ಧೆಯನ್ನು ಎರಡು ಮುಖ್ಯ ವಿಭಾಗಗಳಲ್ಲಿ ಆಯೋಜಿಸಲಾಗಿದೆ:

  1. ಸಾಂಪ್ರದಾಯಕ ವಿಭಾಗ
  2. ಐಚ್ಚಿಕ ವಿಭಾಗ

ಬಹುಮಾನಗಳ ವಿವರ

ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುತ್ತದೆ.

  • ಪ್ರಥಮ ಬಹುಮಾನ: ₹2000 ನಗದು ಮತ್ತು ಟ್ರೋಫಿ
  • ದ್ವಿತೀಯ ಬಹುಮಾನ: ₹1000 ನಗದು ಮತ್ತು ಟ್ರೋಫಿ
  • ಇದರ ಜೊತೆಗೆ, ಯಾವುದಾದರೂ ಒಂದು ಗೂಡುದೀಪಕ್ಕೆ ‘ಸಾರ್ವಜನಿಕರ ಆಯ್ಕೆ’ವಿಶೇಷ ಬಹುಮಾನವನ್ನೂ ನೀಡಲಾಗುವುದು.

ಸ್ಪರ್ಧಾ ನಿಯಮಗಳು

  1. ಕಡ್ಡಾಯವಾಗಿ ಸಂಘದ ಸದಸ್ಯರಿಗೆ ಮಾತ್ರ ಅವಕಾಶ.
  2. ಸ್ಪರ್ಧಾಳುಗಳು ನಿಗದಿತ ದಿನಾ೦ಕದ೦ದು ಮಧ್ಯಾಹ್ನ ಗಂಟೆ 02:30 ಕ್ಕೆ ಹಾಜರಿರಬೇಕು.
  3. ಒಂದು ತಂಡದಲ್ಲಿ ಗರಿಷ್ಠ 2 ಮಂದಿಗೆ ಅವಕಾಶ.
  4. ಪುರುಷರರಿಗೆ “ಸಾಂಪ್ರದಾಯಕ ವಿಭಾಗ” ದಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶ.
  5. 10ನೇ ತರಗತಿಯ ಕೆಳಗಿನ ಮಕ್ಕಳನ್ನು “ಮಕ್ಕಳ ವಿಭಾಗದಲ್ಲಿ ಪರಿಗಣಿಸಲಾಗುವುದು,
    ಈ ವಿಭಾಗವು ‘ಕಸದಿಂದ ರಸ” ಎಂಬ ಕಲ್ಪನೆಯನ್ನು ಒಳಗೊಂಡಿರುತ್ತದೆ.
  6. ಗೂಡುದೀಪ ತಯಾರಿಕೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಮತ್ತು ಸ್ಥಳದಲ್ಲೇ
    ತಯಾರಿಸಬೇಕು.
  7. ಐಚ್ಚಿಕ ಗೂಡುದೀಪ ಸ್ಪರ್ಧೆಯಲ್ಲಿ ಕೃತಿಯ ಅಂದ ಹೆಚ್ಚಿಸಲು ಯಾವುದೇ ವಸ್ತುಗಳನ್ನು ಬಳಸಬಹುದು.
  8. ತಯಾರಿಸಿ ತ೦ದ ಗೂಡುದೀಪಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
  9. ಗೂಡುದೀಪ ತಯಾರಿಸಲು 3 ಗಂಟೆಗಳ ಕಾಲಾವಕಾಶ ನೀಡಲಾಗುವುದು ನೀಡಿದ ಸಮಯಾವಕಾಶದ
    ಒಳಗೆ ಕೃತಿಗಳನ್ನು ಪೂರ್ತಿಗೊಳಿಸಬೇಕು.
  10. ಪ್ರತೀ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು.
  11. ಯಾವುದಾದರೂ ಒ೦ದು ಗೂಡುದೀಪಕ್ಕೆ ‘ಸಾರ್ವಜನಿಕರ ಆಯ್ಕೆ’ – ವಿಶೇಷ ಬಹುಮಾನವನ್ನೂ ನೀಡಲಾಗುವುದು.
  12. ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸುವಂತಿಲ್ಲ.
  13. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.

ದೀಪಾವಳಿಯ ಪ್ರಯುಕ್ತ ನಡೆಯಲಿರುವ ಈ ಗೂಡುದೀಪ ಸ್ಪರ್ಧೆಗೆ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರು ಎಲ್ಲರಿಗೂ ಆದರದ ಸ್ವಾಗತವನ್ನು ಬಯಸಿದ್ದಾರೆ.

ಗೂಡುದೀಪ ಸ್ಪರ್ಧೆ ನೋಂದಣಿಗೆ ಕೊನೆಯ ದಿನಾಂಕ: 17.10.2025.ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9845660232 ಮತ್ತು 8970724401 ಸಂಖ್ಯೆಗಳನ್ನು ಸಂಪರ್ಕಿಸಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ

ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಗೆ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ SDMC ಪ್ರಶಸ್ತಿ ಲಭಿಸಿತು.

ನೋಡೋಕಷ್ಟೆ ಮುಳ್ಳು; ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಪಾಪಸ್​ ಕಳ್ಳಿ!

ಪಾಪಸ್ ಕಳ್ಳಿ (Cereus Night Bloom Cactus) ನೋಡುವುದಕ್ಕೆ ಮುಳ್ಳುಗಳಿಂದ ಕೂಡಿದ್ದರೂ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಬರ್ಬರ ಹತ್ಯೆ

ರಾಜಧಾನಿಯ ಶ್ರೀರಾಂಪುರ ಪ್ರದೇಶದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಕೋಲಾರದ ಶಿಕ್ಷಕಿ ಐಪಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆ!

ಜಾತಿ ಗಣತಿ ಸಮೀಕ್ಷೆಗೆ ತೆರಳಿದ ಶಿಕ್ಷಕಿಯೊಬ್ಬರು ನಾಪತ್ತೆಯಾಗಿದ್ದು, ಇದೀಗ ಕೆಜಿಎಫ್ ತಾಲೂಕಿನ ಐಪಲ್ಲಿ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.